Saturday Remedies: ಶನಿಯ ವಿಶೇಷ ಆಶೀರ್ವಾದಕ್ಕಾಗಿ ಈ ದಿನ ಹೀಗೆ ಮಾಡಿ..

By Suvarna NewsFirst Published Jan 28, 2023, 2:13 PM IST
Highlights

ಶನಿ ಧೈಯ್ಯಾ, ಸಾಡೇಸಾತಿ ಅಥವಾ ಶನಿ ದೋಷದಿಂದ ಬಳಲುತ್ತಿರುವ ಜನರಿಗೆ ಶನಿವಾರದ ಪರಿಹಾರಗಳನ್ನು ಮಾಡುವುದು ಬಹಳ ಮುಖ್ಯ. ಈ ಪರಿಹಾರಗಳು ಬಹಳ ಸರಳವಾಗಿವೆ..

ನ್ಯಾಯದ ದೇವರಾದ ಶನಿ ದೇವರು ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಯಾರಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿರುತ್ತಾನೋ, ಅವನಿಗೆ ಸಿಂಹಾಸನ ಮತ್ತು ಸಂತೋಷ ಸಿಗುತ್ತದೆ. ಅದೇ ಸಮಯದಲ್ಲಿ, ಯಾರಿಗೆ ಶನಿಯು ಕೆಟ್ಟದ್ದಾಗಿದೆಯೋ ಅಥವಾ ಶನಿಯ ಧೈಯ ಅಥವಾ ಸಾಡೇ ಸಾತಿಯ ಮಹಾದಶವು ಯಾರ ಮೇಲೆ ನಡೆಯುತ್ತಿದೆಯೋ ಅವರು ತೀವ್ರ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 

ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಶನಿದೇವನ(Shani Dev) ಆಶೀರ್ವಾದ ಪಡೆಯಲು ಮತ್ತು ಅವನನ್ನು ಧನಾತ್ಮಕವಾಗಿಸಲು, ಶನಿವಾರದಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇಂದು ನಾವು ಆ ಪರಿಹಾರಗಳ ಬಗ್ಗೆ ಹೇಳುತ್ತೇವೆ. ಶನಿದೇವನ ಆಶೀರ್ವಾದವನ್ನು ಪಡೆಯುವ ಶನಿವಾರದ ಪರಿಹಾರಗಳು(Saturday remedies) ಯಾವುವು ಎಂದು ತಿಳಿಯೋಣ.

  • ಶಿವನು ಶನಿದೇವನ ಗುರು. ಶನಿದೇವನ ಆಶೀರ್ವಾದ ಪಡೆಯಲು ಶನಿವಾರದಂದು ಶಿವನನ್ನು ಆರಾಧಿಸಿ. 
  • ಶನಿವಾರದಂದು ಆಂಜನೇಯನ ಪೂಜೆಗೆ ವಿಶೇಷ ಮಹತ್ವವಿದೆ. ಶನಿವಾರದಂದು ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಪ್ರತಿಯೊಂದು ನೋವಿನಿಂದ ಮುಕ್ತಿ ದೊರೆಯುತ್ತದೆ. ಇದರೊಂದಿಗೆ ಜೀವನದಲ್ಲಿ ಪ್ರಗತಿಯ ಹಾದಿಗಳೂ ತೆರೆದುಕೊಳ್ಳುತ್ತವೆ.

    Astrology Tips: ಸುಖ ದಾಂಪತ್ಯಕ್ಕಾಗಿ ಈ ಪರಿಹಾರ ಮಾಡಿ ನೋಡಿ..ಪ್ರೀತಿಯ ಘಮಲು ತುಂಬುವುದು..
     
  • ಶನಿವಾರ ಸಂಜೆ ಕಪ್ಪು ನಾಯಿ ಅಥವಾ ಕಪ್ಪು ಹಸುವಿಗೆ ರೊಟ್ಟಿ ತಿನ್ನಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುವುದರ ಜೊತೆಗೆ ಅದೃಷ್ಟವೂ ಹೆಚ್ಚುತ್ತದೆ.
  • ನಿಮ್ಮ ಜೀವನದಲ್ಲಿ ನಿಮ್ಮ ಉದ್ಯೋಗ, ಹಣ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ, ನೀವು ಶನಿವಾರದಂದು ಸ್ನಾನದ ನಂತರ ಕಪ್ಪು ಬಟ್ಟೆಗಳನ್ನು ಧರಿಸಿ ನಿಯಮ ಪ್ರಕಾರ ಶನಿದೇವನನ್ನು ಪೂಜಿಸಬೇಕು. ಸಾಧ್ಯವಾದರೆ, ಶ್ರೀ ಯಂತ್ರವನ್ನು ಪೂಜಿಸಿ, ಇದು ನಿಮ್ಮ ಜೀವನದಲ್ಲಿ ಬರುವ ಉದ್ಯೋಗ, ಹಣ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ.
  • ಶನಿವಾರದಂದು ಶನಿದೇವನ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಮತ್ತು ಕಪ್ಪು ಎಳ್ಳನ್ನು ಶನಿ ದೇವರಿಗೆ ಅರ್ಪಿಸಿ, ಈ ರೀತಿ ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ ಮತ್ತು ಅವನ ಅನುಗ್ರಹವನ್ನು ನೀಡುತ್ತಾನೆ.
  • ಶನಿವಾರದಂದು ಕಬ್ಬಿಣ, ಕಪ್ಪು ವಸ್ತುಗಳು, ಛತ್ರಿ, ಉದ್ದಿನ ಬೇಳೆ, ಚರ್ಮದ ಬೂಟುಗಳು ಅಥವಾ ಯಾವುದೇ ರೀತಿಯ ಕಬ್ಬಿಣದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಆದರೆ ನೀವು ಶನಿವಾರದಂದು ಪೊರಕೆಯನ್ನು ಖರೀದಿಸಬಹುದು, ಏಕೆಂದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. 
  • ಶನಿದೇವನು ನ್ಯಾಯದ ದೇವರು, ಆದ್ದರಿಂದ ಶನಿವಾರದಂದು ತಪ್ಪಿಯೂ ಸುಳ್ಳು ಹೇಳಬೇಡಿ, ಮೋಸ ಮಾಡಬೇಡಿ.
  • ಶನಿದೇವನ ಮಹಾದಶಾ ಅಥವಾ ಅಂತರದಶಾ ನಡೆಯುತ್ತಿರುವವರು ಶನಿವಾರದಂದು ಉಪವಾಸವನ್ನು ಆಚರಿಸಿ. ಇದರಿಂದ ಶನಿದೇವನು ಪ್ರಸನ್ನನಾಗುತ್ತಾನೆ ಮತ್ತು ಭಕ್ತರು ತಮ್ಮ ಮಹಾದಶಾ ಮತ್ತು ಅಂತರದಶದಿಂದ ಮುಕ್ತಿ ಪಡೆಯುತ್ತಾರೆ. 

    Vastu Tips: ಪೂರ್ವ ದಿಕ್ಕಿಗೂ ಮನೆಯ ಮುಖ್ಯಸ್ಥನಿಗೂ ಸಂಬಂಧವಿದೆ ಗೊತ್ತಾ?
     
  • ಪ್ರತಿ ಶನಿವಾರ ಹಿಟ್ಟು, ಕಪ್ಪು ಎಳ್ಳು, ಸಕ್ಕರೆ ಮಿಶ್ರಣ ಮಾಡಿ. ಮಿಶ್ರಣವನ್ನು ಚೆನ್ನಾಗಿ ತಯಾರಿಸಿ ಮತ್ತು ಇರುವೆಗಳಿಗೆ ಆಹಾರವನ್ನು ನೀಡಿ.
  • ಶನಿವಾರದಂದು ಸೂರ್ಯನು ಅಸ್ತಮಿಸುವಾಗ, ಮೊಳೆಯಿಂದ ಉಂಗುರವನ್ನು ಮಾಡಿ ಮತ್ತು ಮಧ್ಯದ ಬೆರಳಿಗೆ ಧರಿಸಿ.
  • ಶನಿದೇವನ ನಾಮಗಳನ್ನು ಪಠಿಸಿ.
  • ಶನಿದೇವನಿಗೆ ನೀಲಿ ಬಣ್ಣದ ಹೂಗಳನ್ನು ಅರ್ಪಿಸಿ. 'ಓಂ ಶನ ಶನಿಶ್ಚರಾಯ ನಮಃ ' ಎಂದು ರುದ್ರಾಕ್ಷ ಮಣಿಗಳ ಮಾಲೆಯೊಂದಿಗೆ ಪಠಿಸಲು ಪ್ರಯತ್ನಿಸಿ.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!