ಸೋಮವಾರ ಹುಟ್ಟಿದವರು ಪ್ರಾಣಕ್ಕೆ ಪ್ರಾಣ ಕೊಡುವವರು!

By Suvarna NewsFirst Published May 14, 2021, 3:56 PM IST
Highlights

ಸೋಮವಾರ ಹುಟ್ಟಿದವರ ಗುಣ ಸ್ವಭಾವಗಳಲ್ಲಿ ಒಂದು ಅವರು ಸ್ನೇಹಿತರಿಗಾಗಿ ಜೀವಕ್ಕೆ ಜೀವ ಕೊಡಬಲ್ಲರು.

ಸೋಮವಾರದ ದಿನ ಹುಟ್ಟಿದವರ ಸ್ವಭಾವಗಳು ಹೇಗೆ ಇರುತ್ತದೆ, ಅವರು ಯಾವ ಕ್ಷೇತ್ರದಲ್ಲಿ ಮುಂದಿರುತ್ತಾರೆ, ಅವರು ಯಾವ ದೇವರನ್ನು ಪೂಜೆ ಮಾಡಬೇಕು, ಆರೋಗ್ಯದ ಪರವಾಗಿ ಯಾವ ಜಾಗ್ರತೆ ತೆಗೆದುಕೊಳ್ಳಬೇಕು, ಅವರ ಅದೃಷ್ಟ ಹೇಗೆ ಕೂಡಿ ಬರುತ್ತದೆ ಎಂದು ನೋಡೋಣ. ಸೋಮವಾರಕ್ಕೆ ಅಧಿಪತಿ ಚಂದ್ರ. ಇದು ವಾರದ ಎರಡನೇ ದಿನ. ಆದ್ದರಿಂದ ಸಂಖ್ಯಾಶಾಸ್ತ್ರದ ಪ್ರಕಾರ ಸೋಮವಾರಕ್ಕೆ ಹಾಗೂ ಎರಡನೇ ಸಂಖ್ಯೆಗೆ ಹತ್ತಿರ ಸಂಬಂಧ ಇರುತ್ತದೆ. ಆದ್ದರಿಂದ ಸೋಮವಾರ ಜನನ ಆಗಿರುವವರ ಅದೃಷ್ಟ ಸಂಖ್ಯೆ 2 ಎಂದೇ ಹೇಳಬಹುದು.

ಸೋಮವಾರದಂದು ಹುಟ್ಟಿದವರಿಗೆ ಪ್ರತ್ಯೇಕವಾದ ಲಕ್ಷಣ ಇರುತ್ತದೆ. ಚಂದ್ರ ಅಥವಾ ಸೋಮನು ತಂಪುಕಾರಕ. ಅವರ ಮನಸ್ಸು ಸ್ವಲ್ಪ ಚಂಚಲ. ಒಂದೇ ಕೆಲಸಕ್ಕೆ ಬೇರೆ ಬೇರೆ ರೀತಿಯಲ್ಲಿ ಆಲೋಚನೆ ಮಾಡುತ್ತಾ ಇರುತ್ತಾರೆ. ಅವರು ಯಾವಾಗಲೂ ಒಂದೇ ಕೆಲಸವನ್ನು ಮಾಡುವುದಿಲ್ಲ, ಇವರ ಕೆಲಸಗಳು ಸಹಾ ಬದಲಾಗುತ್ತಾ ಇರುತ್ತವೆ. ಸಾಧ್ಯವಾದರೆ ಸೋಮವಾರ ಹುಟ್ಟಿದವರು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಒಂದೇ ಕೆಲಸದಲ್ಲಿ ಮುಂದುವರಿಯಲು ಪ್ರಯತ್ನ ಪಡಬೇಕು. ಸೋಮವಾರ ಜನನ ಆಗಿರುವ ಇವರು ಕನಸುಗಳನ್ನು ಕಾಣುತ್ತ ಇರುತ್ತಾರೆ. ಕನಸುಗಳನ್ನು ನನಸು ಮಾಡಿಕೊಳ್ಳಲು ಬಹಳ ಕಷ್ಟಪಡುತ್ತಾ ಇರುತ್ತಾರೆ.

ಇವರಿಗೆ ವಾಕ್ ಚಾತುರ್ಯ ತುಂಬಾ ಚೆನ್ನಾಗಿರುತ್ತದೆ. ಮುಂದಿರುವ ವ್ಯಕ್ತಿಯನ್ನು ಅವರ ಮಾತಿನಲ್ಲಿ ಸುಲಭವಾಗಿ ಅವರ ಕಡೆ ಬದಲಾಯಿಸಿಕೊಳ್ಳುವರು. ತಿಳುವಳಿಕೆ ಕಡಿಮೆ ಇದ್ದರೂ ಸರಿ ಒಪ್ಪಿಕೊಂಡ ಕೆಲಸವನ್ನು ಪೂರ್ತಿ ಮಾಡಿ ಕೊಡುತ್ತಾರೆ. ಸೋಮವಾರ ಹುಟ್ಟಿರುವವರು ಅಷ್ಟು ಸುಲಭವಾಗಿ ಯಾರನ್ನೂ ನಂಬುವುದಿಲ್ಲ ಆದರೆ ಒಂದು ಬಾರಿ ನಂಬಿ ಅವರ ಸ್ನೇಹವನ್ನು ಬೆಳೆಸಿಕೊಂಡರೆ ಅವರು ಪ್ರಾಣವನ್ನು ಕೊಡುತ್ತಾರೆ. ಇವರ ಸ್ನೇಹ ಮಾಡಿದವರು ಪುಣ್ಯವಂತರು. ಕುಟುಂಬದವರಿಗಾಗಿ ಜೀವವನ್ನೇ ತೇಯುತ್ತಾರೆ. ಇವರನ್ನು ಬಾಳ ಸಂಗಾತಿಯಾಗಿ ಪಡೆದವರು ಭಾಗ್ಯವಂತರು. ಇವರು ಜಗಳ ಆಡುವವರಲ್ಲ. ಯಾರಾದರೂ ಜಗಳಕ್ಕೆ ಬಂದರೂ ತಮ್ಮ ತಣ್ಣನೆಯ ಸ್ವಭಾವದಿಂದ ಅದನ್ನು ಮೀರಿ ಗೆಲ್ಲುತ್ತಾರೆ.



ಪ್ರಪಂಚದಲ್ಲಿ ಎಲ್ಲವನ್ನೂ ತಿಳಿದುಕೊಳ್ಳುವ ಆಸಕ್ತಿ ಅವರಿಗೆ ಹೆಚ್ಚಾಗಿ ಇರುತ್ತದೆ. ಹೊಸ ಕೆಲಸಗಳತ್ತ ತುಡಿಯುತ್ತಾರೆ. ಹೊಸ ಬಗೆಯ ಕೌಶಲಗಳನ್ನು ಟ್ರೈ ಮಾಡುತ್ತಾ ಇರುತ್ತಾರೆ ಉದ್ಯೋಗ ಮಾಡುವ ತಾಣದಲ್ಲಿ ಬಾಸ್ ಇವರಿಗೆ ಹೊಸ ಕೆಲಸಗಳನ್ನು ಹಚ್ಚಿದರೆ ಸಂತೋಷ ಪಡುತ್ತಾರೆ. ಒಂಟಿಯಾಗಿ ಇರಬೇಕು ಎಂದು ಆಸೆ ಪಡುತ್ತಾರೆ. ಇವರು ಯಾವಾಗಲೂ ಭವಿಷ್ಯತ್ ಅನ್ನು ಆಲೋಚನೆ ಮಾಡುತ್ತಾ ಇರುತ್ತಾರೆ. ಅದರಲ್ಲಿ ಮುಳುಗಿ ಅವರು ವರ್ತಮಾನ ಕಾಲ ಪ್ರಸ್ತುತ ಮರೆತು ಹೋಗುತ್ತಾರೆ.

ನೀವು ಬಿಳಿ ಬಣ್ಣಕ್ಕೆ ಸಂಬಂಧಿಸಿದ ವ್ಯಾಪಾರವನ್ನು ಮಾಡಿದರೆ ಅದ್ಬುತವಾಗಿ ಕೂಡಿ ಬರುತ್ತದೆ. ಚಂದ್ರಮನ ಬಣ್ಣ ಬಿಳಿ, ಬೆಳದಿಂಗಳು ಬಿಳಿ. ಹಾಲು ಮೊಸರು ಅಥವಾ ಹತ್ತಿ ವ್ಯಾಪಾರವನ್ನು ಮಾಡಿದರೆ ಅದ್ಬುತವಾಗಿ ಕೂಡಿ ಬರುತ್ತದೆ ಮತ್ತು ತಂಪಾದ ಪಾನೀಯಗಳ ವ್ಯಾಪಾರ ಮಾಡಿದರೆ ಸಹಾ ಅದ್ಬುತವಾಗಿ ಕೂಡಿ ಬರುತ್ತದೆ. ಬಿಳಿಯ ಪೇಪರ್ ಉದ್ಯೋಗ ಕೂಡ ಕೈಹಿಡಿಯುತ್ತದೆ.

ಕಾಫಿ ಟೀ ಮುಂತಾದ ಅಂಗಡಿಯನ್ನು ಇಟ್ಟಿದ್ದರೆ ಹೆಚ್ಚಾಗಿ ಲಾಭವನ್ನು ಕಾಣುವಿರಿ. ನಿಮಗೆ ಕಲಾರಂಗದಲ್ಲಿ ಉತ್ತಮ ಭವಿಷ್ಯ ಇದೆ. ಕಲೆಯು ನಿಮ್ಮನ್ನು ಕೈಹಿಡಿಯುತ್ತದೆ. ಸರಸ್ವತಿ ದೇವಿಯು ನಿಮಗೆ ಆಶೀರ್ವಾದ ಮಾಡುವಳು. ಸಿನಿಮಾ ನಾಟಕ ಸೀರಿಯಲ್ ಇತ್ಯಾದಿ ರಂಗಗಳನ್ನು ನೆಚ್ಚಬಹುದು. ವ್ಯವಸಾಯದಲ್ಲಿ ಕೂಡ ನಿಮ್ಮ ಅದೃಷ್ಟು ಖುಲಾಯಿಸುತ್ತದೆ.



ಸೋಮವಾರದಂದು ಜನನಿಸಿದವರಿಗೆ ಸ್ವಲ್ಪ ನರ ದೌರ್ನಲ್ಯಗಳು ಕಾಡಬಹುದು. ಈ ವಿಷಯದಲ್ಲಿ ನೀವು ತುಂಬಾ ಜಾಗ್ರತೆಯಾಗಿ ನೋಡಿಕೊಳ್ಳಬೇಕು. ಮೆದುಳನ್ನು ಆಗಾಗ ಚುರುಕಾಗಿಸುವ ವ್ಯಾಯಾಗಳನ್ನು ಮಾಡುತ್ತಾ ಇರಬೇಕು. ಕ್ಲಿಷ್ಟವಾದ ಲೆಕ್ಕಗಳನ್ನು ಬಿಡಿಸುವುದು, ಹೊಸ ಭಾಷೆಗಳನ್ನು ಕಲಿಯುವುದು ಇತ್ಯಾದಿ ಮಾಡುತ್ತಾ ಇರಬೇಕು. ಪೇಂಟಿಂಗ್ ಮಾಡುವುದು ಕೂಡ ನಿಮಗೆ ಒಳ್ಳೆಯದೇ ಆಗಿರುತ್ತದೆ.

ಪ್ರತಿ ದಿನ ಓಂ ಶ್ರೀ ನಮಃ ಎನ್ನುವ ಮಂತ್ರವನ್ನು ತಪ್ಪದೆ 11 ಬಾರಿ ಜಪಿಸಬೇಕು. ಈ ಮಂತ್ರವನ್ನು ಪ್ರತಿ ದಿನ ಜಪಿಸಿದರೆ ಅಷ್ಟ ಐಶ್ವರ್ಯ ಪ್ರಾಪ್ತಿ ಮಾಡಿಕೊಳ್ಳಬಹುದು. ನವಗ್ರಹ ಮೂರ್ತಿಗಳನ್ನು ಪ್ರದಕ್ಷಿಣೆ ಮಾಡುವಾಗ ಸೂರ್ಯನಿಗೆ ಒಂದು ಸಲ ಹೆಚ್ಚೇ ಕೈ ಮುಗಿಯಿರಿ. ಯಾಕೆಂದರೆ ಚಂದ್ರನಿಗೆ ಎನರ್ಜಿ ಬರುವುದೆಲ್ಲವೂ ಚಂದ್ರನಿಂದಲೇ. ಗಾಯತ್ರಿ ಮಂತ್ರವನ್ನು ದಿನಕ್ಕೆ ಎಂಟು ಬಾರಿಯಾದರೂ ಪಠಿಸಿ. ಗಣಪತಿಯ ಉಪಾಸನೆಯನ್ನು ಮಾಡಿ. ಶಿವ ಆರಾಧನೆಯಿಂದ ನಿಮ್ಮ ಎಲ್ಲ ಕಷ್ಟಗಳೂ ಮಾಯವಾಗಿ ಸುಖ ನಿಮ್ಮದಾಗುತ್ತದೆ.


 

click me!