ತಿರುಪತಿಯಲ್ಲಿ ದರ್ಶನಕ್ಕೆ ಹೊಸ ರೂಲ್ಸ್; ಭಕ್ತರ ಸಮಯ ಉಳಿತಾಯಕ್ಕೆ ಆದ್ಯತೆ

By Suvarna NewsFirst Published May 29, 2023, 1:38 PM IST
Highlights

ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಹೆಚ್ಚುತ್ತಿರುವ ಜನಸಂದಣಿ ಮತ್ತು ಹೆಚ್ಚಿದ ಕಾಯುವ ಸಮಯವನ್ನು ಗಮನದಲ್ಲಿಟ್ಟುಕೊಂಡು, ಟಿಟಿಡಿ ಹೊಸ ದರ್ಶನ ನಿಯಮಗಳನ್ನು ಪ್ರಕಟಿಸಿದೆ. 

ತಿರುಪತಿಗೆ ಭೇಟಿ ನೀಡುವ ಯಾತ್ರಿಗಳಿಗೆ ಅಲ್ಲಿಯವರೆಗೆ ಹೋಗುವುದಕ್ಕಿಂತಲೂ ಹೆಚ್ಚಿನ ಸಮಯ ದರ್ಶನಕ್ಕಾಗಿ ಕ್ಯೂನಲ್ಲಿ ನಿಲ್ಲುವಾಗಲೇ ತಗುಲುತಿತ್ತು. ಎಷ್ಟೇ ದರ್ಶನ ನಿಯಮಗಳನ್ನು ಮಾಡಿದರೂ, ಜನದಟ್ಟಣೆ ಕಾರಣದಿಂದಾಗಿ ತಿಮ್ಮಪ್ಪನ ದರ್ಶನಕ್ಕೆ ಹರಸಾಹಸ ಪಡಬೇಕಿತ್ತು. ಹೀಗೆ ಬೇಸಿಗೆಯಲ್ಲಿ ಹೆಚ್ಚುತ್ತಿರುವ ಜನಸಂದಣಿ ಮತ್ತು ಹೆಚ್ಚಿದ ಕಾಯುವ ಸಮಯವನ್ನು ಗಮನದಲ್ಲಿಟ್ಟುಕೊಂಡು, ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಆಡಳಿತ ಮಂಡಳಿಯು ದರ್ಶನದ ನಿಯಮಗಳಲ್ಲಿ ಹಲವು ಉತ್ತಮ ಬದಲಾವಣೆಗಳನ್ನು ತಂದಿದೆ. 

ಜೂನ್ 30ರವರೆಗೆ ಬದಲಾವಣೆ
ಹೌದು, ತಿರುಪತಿಯಲ್ಲಿ ಜನಸಂದಣಿಯಿಂದ ಉಂಟಾಗುವ ಯಾವುದೇ ಅವಘಡಗಳನ್ನು ತಪ್ಪಿಸಲು ಮತ್ತು ಸೌಲಭ್ಯಗಳನ್ನು ಸರಾಗಗೊಳಿಸುವ ಜೊತೆಗೆ ಕಾಯುವ ಸಮಯವನ್ನು ಕಡಿಮೆ ಮಾಡಲು ದರ್ಶನ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಪ್ರಾಧಿಕಾರ ನಿರ್ಧರಿಸಿದೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಶ್ರೀ ವೈವಿ ಸುಬ್ಬಾ ರೆಡ್ಡಿ ಪ್ರಕಾರ, ಬದಲಾವಣೆಗಳು ಜೂನ್ 30 ರವರೆಗೆ ಜಾರಿಯಲ್ಲಿರುತ್ತವೆ. ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಬೇಸಿಗೆಯಲ್ಲಿ ನಿಭಾಯಿಸುವುದೇ ಕಷ್ಟಸಾಧ್ಯವೆನ್ನುವಷ್ಟು ಜನಸಂದಣಿಯನ್ನು ತಿರುಪತಿ ನೋಡುತ್ತಿದೆ. 

ಬೇಸಿಗೆ ರಜೆ ಎಫೆಕ್ಟ್‌: ತಿರುಪತಿಯಲ್ಲಿ 30 ಗಂಟೆ ಭಾರೀ ಸರದಿ

ಹೊಸ ಬದಲಾವಣೆಗಳೇನು?
ಟೋಕನ್ ರಹಿತ ಭಕ್ತರಿಗೆ, ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ವೆಂಕಟೇಶ್ವರನ ದರ್ಶನ ಪಡೆಯಲು ಸುಮಾರು 30-40 ಗಂಟೆಗಳು ಬೇಕಾಗುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿ ಆರ್ಜಿತ ಸೇವೆ ಮತ್ತು ವಿಐಪಿ ಬ್ರೇಕ್ ದರ್ಶನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.

ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಮೂರು ದಿನಗಳ ಕಾಲ ಸುಪ್ರಭಾತ ಸೇವೆಯಲ್ಲಿನ ವಿವೇಚನಾ ಕೋಟಾವನ್ನು ಹಿಂಪಡೆಯಲು ಟಿಟಿಡಿ ನಿರ್ಧರಿಸಿದೆ. ಪ್ರಾಧಿಕಾರದ ಈ ಕ್ರಮವು ಸಾಮಾನ್ಯ ಭಕ್ತರಿಗೆ 20 ನಿಮಿಷಗಳನ್ನು ಉಳಿಸಲು ಸಹಾಯ ಮಾಡುತ್ತದೆ.
ಅಂತೆಯೇ ಗುರುವಾರದಂದು ಏಕಾಂತಂನಲ್ಲಿ ತಿರುಪ್ಪವಾಡ ಸೇವೆ ನಡೆಸಲು ನಿರ್ಧರಿಸಲಾಗಿದೆ. ಇದು ಭಕ್ತರಿಗೆ ಸುಮಾರು 30 ನಿಮಿಷಗಳನ್ನು ಉಳಿಸಲು ಸಹಾಯ ಮಾಡುತ್ತದೆ.
ಇದಲ್ಲದೆ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ವಿಐಪಿ ಶಿಫಾರಸು ಪತ್ರಗಳನ್ನು ಟಿಟಿಡಿ ಸ್ವೀಕರಿಸುವುದಿಲ್ಲ. ಆದರೆ, ಸ್ವಯಂ-ವಿಐಪಿಗಳಿಗೆ ಮಾತ್ರ ದರ್ಶನ ಬ್ರೇಕ್ ಮಾಡಲು ಅನುಮತಿ ನೀಡಲಾಗುತ್ತದೆ. ಈ ಕ್ರಮವು ಆಯಾ ದಿನಗಳಲ್ಲಿ ಸುಮಾರು ಮೂರು ಗಂಟೆಗಳ ದರ್ಶನ ಸಮಯವನ್ನು ಉಳಿಸುತ್ತದೆ.
ವಿಐಪಿಗಳು ಸೇರಿದಂತೆ ಎಲ್ಲಾ ಭಕ್ತಾದಿಗಳು ಪರಸ್ಪರ ಸಹಕಾರ ನೀಡುವಂತೆ ದೇವಾಲಯದ ಪ್ರಾಧಿಕಾರವು ವಿನಂತಿಸಿದೆ. ಇದರಿಂದಾಗಿ ಎಲ್ಲಾ ಪ್ರವಾಸಿಗರು ಆರಾಮದಾಯಕ ಶ್ರೀವಾರಿ ದರ್ಶನವನ್ನು ಹೊಂದಬಹುದು.

ಕೇದಾರನಾಥಕ್ಕೆ ಹೆಲಿಕಾಪ್ಟರ್ ಸೇವೆ; ಟಿಕೆಟ್ ಹೀಗೆ ಬುಕ್ ಮಾಡಿ..

TTDಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಪ್ರಸ್ತುತ, ದೇವಾಲಯದಲ್ಲಿ ಮೂರು ಪೂಜೆಗಳನ್ನು ನಡೆಸಲಾಗುತ್ತದೆ: ತೋಮಲ ಸೇವೆಯೊಂದಿಗೆ ಬೆಳಿಗ್ಗೆ ಮೊದಲನೆಯದು, ಇದು ಸಾರ್ವಜನಿಕರಿಗೆ ತೆರೆದಿರುತ್ತದೆ; ಎರಡನೆಯದು ಮಧ್ಯಾಹ್ನದಲ್ಲಿ; ಮತ್ತು ಮೂರನೆಯದು ರಾತ್ರಿಯಲ್ಲಿ ನಡೆಯುತ್ತದೆ, ಇದು ಕಟ್ಟುನಿಟ್ಟಾಗಿ ಖಾಸಗಿಯಾಗಿದೆ ಮತ್ತು ದೇವಾಲಯದ ಅರ್ಚಕರು, ಪರಿಚಾರಕರು ಮತ್ತು ಆಚಾರ್ಯ ಪುರುಷರು ಮಾತ್ರ ಭಾಗವಹಿಸುತ್ತಾರೆ.

click me!