Sri Raghavendra Swamy Mutt : ಆಗಸ್ಟ್‌ 29 ರಿಂದ ಸೆಪ್ಟೆಂಬರ್ 4ರವರೆಗೆ ರಾಯರ ಆರಾಧನಾ ಮಹೋತ್ಸವ

Published : Aug 17, 2023, 10:26 AM ISTUpdated : Aug 17, 2023, 12:15 PM IST
Sri Raghavendra Swamy Mutt : ಆಗಸ್ಟ್‌ 29 ರಿಂದ ಸೆಪ್ಟೆಂಬರ್ 4ರವರೆಗೆ ರಾಯರ ಆರಾಧನಾ ಮಹೋತ್ಸವ

ಸಾರಾಂಶ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವನ್ನು ಆ.29ರಿಂದ ಸೆ.4ರವರೆಗೆ ಮಠದಲ್ಲಿ ನಡೆಸುತ್ತಿದ್ದು, ಅದ್ಧೂರಿ ಆಚ​ರ​ಣೆಗೆ ಅಗತ್ಯವಾದ ಎಲ್ಲ ರೀತಿಯ ತಯಾ​ರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು.

 ರಾಯಚೂರು (ಆ.17) :ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವನ್ನು ಆ.29ರಿಂದ ಸೆ.4ರವರೆಗೆ ಮಠದಲ್ಲಿ ನಡೆಸುತ್ತಿದ್ದು, ಅದ್ಧೂರಿ ಆಚ​ರ​ಣೆಗೆ ಅಗತ್ಯವಾದ ಎಲ್ಲ ರೀತಿಯ ತಯಾ​ರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು.

ಮಠದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರಾ​ಧನಾ ಮಹೋ​ತ್ಸವ ಹಿನ್ನೆಲೆಯಲ್ಲಿ ಮಠದಲ್ಲಿ ಸಪ್ತ​ರಾ​ತ್ರೋ​ತ್ಸ​ವ​ ಜರು​ಗ​ಲಿದ್ದು ನಿತ್ಯ ಧಾರ್ಮಿಕ, ಆಧ್ಯಾ​ತ್ಮಿ​ಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಂಧ್ರಪ್ರದೇಶ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್‌ ನಜೀರ್‌ ಕಾರ್ಯಕ್ರಮದಲ್ಲಿ ಭಾಗ​ವ​ಹಿ​ಸ​ಲಿದ್ದಾರೆ. ವಿದ್ವಾನ್‌ ಶ್ರೀರಾಮ ವಿಠ್ಠಲಚಾರ್ಯ, ವಿದ್ವಾನ್‌ ಗರಿಕಪಾ​ಟಿ ನರಸಿಂಹರಾವ್‌, ಎನ್‌. ಚಂದ್ರಶೇಖರನ್‌ ಹಾಗೂ ಎಂಐಟಿ ಸಂಸ್ಥಾಪಕ ಡಾ.ವಿಶ್ವನಾಥ್‌ ಡಿ.ಕಾರತ್‌ ಅವರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾ​ನಿ​ಸ​ಲಾ​ಗು​ತ್ತದೆ ಎಂದು ಹೇಳಿ​ದರು.

ಗುರುವಾರ ರಾಯರ ನೆನೆಯಮ್ಮ.... ಮಂತ್ರಾಲಯದಲ್ಲಿ ರಥೋತ್ಸವದ ದಿನವಿದು

ಶಕ್ತಿ ಯೋಜನೆ ಬಗ್ಗೆ ಗಮನ ಅಗತ್ಯ: ಇದೇ ವೇಳೆ, ರಾಜ್ಯ​ ಸರ್ಕಾರದ ಗ್ಯಾರಂಟಿ ‘ಶಕ್ತಿ’ ಯೋಜ​ನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಯೋಜನೆಯ ಪರಿ​ಣಾ​ಮ-ದುಷ್ಪ​ರಿ​ಣಾ​ಮ​ಗ​ಳನ್ನು ನಾವು ಗಮ​ನಿ​ಸ​ಬೇಕು. ಸರ್ಕಾ​ರದ ಮೇಲೆ ಯೋಜನೆಯಿಂದ ಆರ್ಥಿಕ ಆಗುತ್ತದೆ. ಆದರೆ ಮಹಿಳೆಯರು ಹೊರಗಡೆ ಓಡಾಡುವ ಸೌಲಭ್ಯವೂ ಇದೆ. ಇದರಿಂದಾಗಿ ಮನೆ​ಯಲ್ಲಿರುವ ಪುರು​ಷ​ರಿಗೆ ಕೆಲ ತೊಂದ​ರೆ​ಗ​ಳಾ​ಗು​ತ್ತಿವೆ. ಈ ಎಲ್ಲ​ವನ್ನು ಫಲಾ​ನು​ಭ​ವಿ​ಗಳು ಹಾಗೂ ಸರ್ಕಾ​ರ​ಗಳು ಗಮ​ನ​ದ​ಲ್ಲಿ​ಟ್ಟು​ಕೊಳ್ಳಬೇಕು ಎಂದು ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿ​ದರು.


ಬೆಂಗಳೂರಿನ ಭಕ್ತರೊಬ್ಬರು ಮಂತ್ರಾಲಯದಲ್ಲಿ 100 ಕೊಠಡಿಗಳ ವಸತಿ ಸಮುಚ್ಚಯ ನಿರ್ಮಾಣ ಮಾಡಲು ಮುಂದಾಗಿದ್ದು, ಅದಕ್ಕೆ ಆ.21ರಂದು ಅಡಿಗಲ್ಲು ಹಾಕಲಾಗುವುದು. ಅಲ್ಲದೆ, 200 ಕಾರುಗಳಿಗೆ ಸ್ಥಳಾವಕಾಶ ಇರುವ ಪಾರ್ಕಿಂಗ್‌ ವ್ಯವಸ್ಥೆ, 3 ಭಾಗಗಳಲ್ಲಿ ಇಂಟರ್‌ ಲಾಕಿಂಗ್‌ ವ್ಯವಸ್ಥೆ, ಬೃಂದಾವನ ಗಾರ್ಡನ್‌ ಹಿಂಭಾಗದಲ್ಲಿ ವಸತಿ ಸಮುದಾಯ ಭವನ, ಮಂಚಾಲಮ್ಮ ದೇವಸ್ಥಾನ ಪಕ್ಕದ ನದಿ​ಗೆ ತೆರ​ಳುವ ದಾರಿ​ಯಲ್ಲಿ ಕಾರಿಡಾರ್‌, ಹರಿ​ಕ​ಥಾ​ಮೃತ ಸಂಪೂರ್ಣ ಮಾಹಿ​ತಿ​ ಒ​ಳ​ಗೊಂಡ ಮ್ಯೂಸಿಯಂ ಉದ್ಘಾ​ಟನೆ ಸೇರಿ ಹತ್ತು ಹಲವು ಯೋಜನೆಗಳನ್ನು ರೂಪಿ​ಸಿದ್ದು, ಅವು​ಗ​ಳಿ​ಗೆ ಶೀಘ್ರ ಚಾಲನೆ ನೀಡÜಲಾಗುವುದು ಎಂದು ಹೇಳಿದರು.

ಮಂತ್ರಾಲಯದಲ್ಲಿ ಸಾಮೂಹಿಕ ಅಷ್ಟೋತ್ತರ ಪಾರಾಯಣ

ತುಂಗಭದ್ರಾ ನದಿ ಖಾಲಿ!

ಪ್ರತಿ ವರ್ಷ ‌ರಾಯರ ಆರಾಧನಾ ವೇಳೆ ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿ ಈ ವರ್ಷ ಮಳೆ ಕೊರತೆಯಿಂದ ಖಾಲಿ ಖಾಲಿಯಾಗಿದೆ. ತುಂಗಭದ್ರಾ ನದಿಯಲ್ಲಿ ಮಿಂದು ರಾಯರ ದರ್ಶನ ಪಡೆಯಲೆಂದು ಬರುತ್ತಿದ್ದ ಭಕ್ತರು. ಈ ಬಾರಿ ಮಂತ್ರಾಲಯ ಬಳಿ ಇರುವ ತುಂಗಭದ್ರಾ ನದಿ ಖಾಲಿಯಾಗಿ ನಿರಾಶೆ ಮೂಡಿಸಿದೆ. ಎತ್ತ ನೋಡಿದ್ರೂ ಬರೀ ಕಲ್ಲುಬಂಡೆಗಳ ದರ್ಶನ. ನದಿಯಲ್ಲಿ ಅಲ್ಪಸ್ವಲ್ಪ ನೀರು ಲಭ್ಯವಿದ್ದು. ಭಕ್ತರು ಪುಣ್ಯಸ್ನಾನಕ್ಕಾಗಿ ತುಂಗಭದ್ರಾ ನದಿಯಲ್ಲಿ ಅಲೆದಾಡುವಂತಾಗಿದೆ. ಹರಿಯುವ ನೀರಿನಲ್ಲಿ ಭಕ್ತರು ಸ್ನಾನ ಮಾಡಲು ಹರಸಾಹಸ ಪಡುತ್ತಿದ್ದಾರೆ.

PREV
Read more Articles on
click me!

Recommended Stories

ಕುಮಾರ ಪರ್ವತ ಯಾತ್ರೆ, ಬೆಟ್ಟದ ತುದಿಯಲ್ಲಿರುವ ದೇವರ ಪಾದಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಂಪನ್ನ
ಅಂಜುವ ಮಾತೇ ಇಲ್ಲ, ತಮ್ಮ ಹಣೆಬರಹವನ್ನ ತಾವೇ ಬದಲಾಯಿಸಿಕೊಳ್ಳುವ 4 ರಾಶಿಗಳಿವು