Mahashivratri 2023: ಕನಸಿನಲ್ಲಿ ಹಾವು ಬರುತ್ತಾ? ಹಬ್ಬಕ್ಕೂ ಮುನ್ನ ಹಾವಿನ ಕನಸು ಬಿದ್ದರೆ ಸಂಪತ್ತಿನ ಸೂಚನೆ!

By Suvarna NewsFirst Published Feb 4, 2023, 10:24 AM IST
Highlights

ಮಹಾಶಿವರಾತ್ರಿಯ ದಿನದಂದು ಅಥವಾ ಅದಕ್ಕೂ ಮುನ್ನ ಈ ಕನಸುಗಳನ್ನು ಕಂಡರೆ ಮಹಾದೇವನ ಆಶೀರ್ವಾದ ಸಿಗುತ್ತದೆ. ಅವು ಎಂಥ ಕನಸುಗಳು ? ಕನಸಿನಲ್ಲಿ ನೀವೇನು ಕಾಣಬೇಕು? 

ಬದುಕಿನಲ್ಲಿ ಆಗಾಗ ಭವಿಷ್ಯದ ಸೂಚನೆಗಳು ಸಿಗುತ್ತಲೇ ಇರುತ್ತವೆ. ನಾವದನ್ನು ಗುರುತಿಸುವ ಜಾಣತನ ಹೊಂದಿರಬೇಕಷ್ಟೇ. ಹಾಗೆಯೇ ಶಿವರಾತ್ರಿ ಸಮಯದಲ್ಲಿ ಶಿವ ನೀಡುವ ಕೆಲ ಸೂಚನೆಗಳು ವಿಶೇಷವಾಗಿರುತ್ತವೆ. ಕನಸಿನಲ್ಲಿ ಬಂದು ಸೂಚನೆ ಕೊಡುವುದನ್ನು ದೇವರು ಆಗಾಗ ಮಾಡುತ್ತಲೇ ಇರುತ್ತಾನೆ. 

ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಫೆಬ್ರವರಿ 18ರ ಶನಿವಾರ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ತಿಥಿಯಂದು ರುದ್ರಾಭಿಷೇಕ ಮಾಡಿಸುವುದರಿಂದ ಶಿವ ಬೇಗ ಪ್ರಸನ್ನನಾಗುತ್ತಾನೆ. ಉಪವಾಸ ಆಚರಣೆ, ಪೂಜೆಪುನಸ್ಕಾರ, ಜಾಗರಣೆ, ಶಿವನಾಮ ಧ್ಯಾನದಿಂದ ಮಹಾದೇವನ ಅನುಗ್ರಹ ಸಿಗುತ್ತದೆ.

ಮಹಾಶಿವರಾತ್ರಿಯ ಮೊದಲು ಕೆಲವು ಕನಸುಗಳು ಮಂಗಳಕರ ಘಟನೆಗಳನ್ನು ಸೂಚಿಸುತ್ತವೆ. ಈ ಕನಸುಗಳನ್ನು ಕಂಡರೆ ನಿಮಗೆ ಮಹಾದೇವನ ಆಶೀರ್ವಾದವಿದೆ ಎಂದು ತಿಳಿಯುತ್ತದೆ. ಮಹಾಶಿವರಾತ್ರಿಯ ಮೊದಲು ಯಾವ ಕನಸುಗಳು ಸಂತೋಷವನ್ನು ಸೂಚಿಸುತ್ತವೆ ಎಂಬುದನ್ನು ತಿಳಿಸುತ್ತೇವೆ.

ಅಭಿಷೇಕದ ಕನಸು
ಒಬ್ಬ ವ್ಯಕ್ತಿಯು ಮಹಾಶಿವರಾತ್ರಿಯ ಮೊದಲು ಶಿವಲಿಂಗಕ್ಕೆ ಅಭಿಷೇಕ ಮಾಡುವ ಕನಸು ಕಂಡರೆ, ಶಿವನು ಆ ವ್ಯಕ್ತಿಯ ಬಗ್ಗೆ ಪ್ರಸನ್ನನಾಗುತ್ತಾನೆ ಮತ್ತು ಅವನ ಎಲ್ಲಾ ತೊಂದರೆಗಳನ್ನು ಶೀಘ್ರದಲ್ಲೇ ನಿವಾರಿಸುತ್ತಾನೆ ಎಂದರ್ಥ. ಇದು ಜೀವನದಲ್ಲಿ ಸಂತೋಷದ ಆಗಮನವನ್ನು ಸೂಚಿಸುವ ಕನಸು. 

ರಾಜಕೀಯ ಅಸ್ಥಿರತೆ ಇದೆ, ಅದರೆ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತೆ; ಕೋಡಿ ಶ್ರೀ

ಬೇಲ್ಪತ್ರೆ
ಶಿವರಾತ್ರಿಯ ಮೊದಲು ಬೇಲ್ಪತ್ರೆಯ ಕನಸು ಬಿದ್ದರೆ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತದೆ. ನೀವು ಅಂತಹ ಕನಸನ್ನು ನೋಡಿದರೆ, ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು, ನೀವು ಹಣಕಾಸಿನ ತೊಂದರೆಗಳನ್ನು ಜಯಿಸಲು ಸಾಧ್ಯವಾಗುತ್ತದೆ.

ರುದ್ರಾಕ್ಷಿ (Rudraksha)
ಕನಸಿನ ವ್ಯಾಖ್ಯಾನದ ಪ್ರಕಾರ, ಮಹಾಶಿವರಾತ್ರಿಯ ಮೊದಲು ಕನಸಿನಲ್ಲಿ ರುದ್ರಾಕ್ಷಿಯನ್ನು ನೋಡುವುದು ತುಂಬಾ ಮಂಗಳಕರವಾಗಿದೆ. ಅಂತಹ ಕನಸು ದುಃಖಗಳು, ರೋಗಗಳು, ದೋಷಗಳನ್ನು ತೆಗೆದುಹಾಕುವುದನ್ನು ಸೂಚಿಸುತ್ತದೆ. ನಿಮ್ಮ ಎಲ್ಲಾ ಬಾಕಿ ಕೆಲಸಗಳನ್ನು ಸಹ ಮಾಡಬಹುದು. 

ಕಪ್ಪು ಶಿವಲಿಂಗ (Black Shivling)
ಕಪ್ಪು ಶಿವಲಿಂಗವು ಶಿವನ ಸಂಕೇತವಾಗಿದೆ.  ನೀವು ಮಹಾಶಿವರಾತ್ರಿಯ ಮೊದಲು ಕನಸಿನಲ್ಲಿ ಕಪ್ಪು ಶಿವಲಿಂಗವನ್ನು ಕಂಡರೆ, ನೀವು ಶೀಘ್ರದಲ್ಲೇ ನಿಮ್ಮ ಕೆಲಸದಲ್ಲಿ ಬಡ್ತಿ ಹೊಂದಲಿದ್ದೀರಿ ಎಂದು ಅರ್ಥ ಮಾಡಿಕೊಳ್ಳಬೇಕು. 

ಹಾವಿನ ಕನಸು (Snake dreams)
ಮಹಾಶಿವರಾತ್ರಿಯ ಮೊದಲು ಬೀಳುವ ಹಾವಿನ ಕನಸನ್ನು ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಎತ್ತುಗಳ ಕನಸು (Nandi in dreams)
ನಂದಿ ಶಿವನ ವಾಹನವಾಗಿದೆ. ನಂದಿ ಇಲ್ಲದೆ, ಶಿವ ಕುಟುಂಬದ ಆರಾಧನೆಯು ಅಪೂರ್ಣವಾಗಿ ಉಳಿಯುತ್ತದೆ. ಶಿವರಾತ್ರಿಯ ಮೊದಲು ಅಥವಾ ಶಿವರಾತ್ರಿಯಂದು ನಿಮ್ಮ ಕನಸಿನಲ್ಲಿ ಗೂಳಿಯನ್ನು ಕಂಡರೆ, ನಿಮಗೆ ಶಿವನ ಆಶೀರ್ವಾದವಿದೆ ಎಂದು ತಿಳಿಯುತ್ತದೆ. ಈ ಕನಸು ಸಾಧನೆಯನ್ನು ಸೂಚಿಸುತ್ತದೆ.

ಶನಿವಾರ ನಿಮ್ಮ ಕಣ್ಣಿಗೆ ಈ ವಿಷಯಗಳು ಬಿದ್ದರೆ ಶನಿಯ ಆಶೀರ್ವಾದ ಇದೆ ಎಂದರ್ಥ!

ತ್ರಿಶೂಲ (trident)
ಶಿವನ ಕೈಯಲ್ಲಿ ಯಾವಾಗಲೂ ತ್ರಿಶೂಲ ಇರುತ್ತದೆ. ಅವನ ತ್ರಿಶೂಲದ ಮೂರು ಮೊನಚುಗಳು ಕಾಮ, ಕ್ರೋಧ ಮತ್ತು ದುರಾಶೆಯನ್ನು ಪ್ರತಿನಿಧಿಸುತ್ತವೆ. ಸೃಷ್ಟಿಯ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಶಿವನು ತ್ರಿಶೂಲವನ್ನು ಹಿಡಿದಿದ್ದಾನೆ. ಮಹಾಶಿವರಾತ್ರಿಯ ಸಮಯದಲ್ಲಿ ಈ ಕನಸು ಎಂದರೆ ಮಹಾದೇವನು ನಿಮ್ಮ ಎಲ್ಲಾ ತೊಂದರೆಗಳನ್ನು ನಾಶಪಡಿಸಲಿದ್ದಾನೆ ಎಂದರ್ಥ.

ಡಮರು(Damru)
ಪುರಾಣದ ಪ್ರಕಾರ ಶಿವನು 14 ಬಾರಿ ಡಮರು ನುಡಿಸುತ್ತಾನೆ. ಇದಾದ ನಂತರವೇ ಸೃಷ್ಟಿಯಲ್ಲಿ ರಾಗ ಮತ್ತು ಲಯ ಹುಟ್ಟುವುದು. ಆದ್ದರಿಂದ ಮಹಾಶಿವರಾತ್ರಿಯ ತಿಥಿಯಂದು ಡಮರುವನ್ನು ನೋಡುವುದು ತುಂಬಾ ಮಂಗಳಕರವಾಗಿದೆ. ಡಮರುವಿನ ಕನಸು ಜೀವನದಲ್ಲಿ ಸ್ಥಿರತೆಯನ್ನು ಸೂಚಿಸುತ್ತದೆ. ಈ ಕನಸು ಮನೆಯಲ್ಲಿ ಮದುವೆ ಇತ್ಯಾದಿಗಳನ್ನು ಸೂಚಿಸುತ್ತದೆ.

click me!