
ಹಿಂದೂ (Hindu) ಧರ್ಮ (Religion) ದಲ್ಲಿ ಪ್ರತಿ ದಿನವನ್ನೂ ಒಂದು ನಿರ್ದಿಷ್ಟ ದೇವರಿಗೆ ಅರ್ಪಿಸಲಾಗಿದೆ. ಶುಕ್ರವಾರ (Friday) ದಂದು ಲಕ್ಷ್ಮಿ (Laxmi) ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ಶನಿವಾರದಂದು ಶನಿ ದೇವನನ್ನು ಪೂಜಿಸಲಾಗುತ್ತದೆ. ಅಂತೆಯೇ ಸೋಮವಾರದ ದಿನವನ್ನು ಮಹಾದೇವ (Mahadev) ನಿಗೆ ಅರ್ಪಿಸಲಾಗಿದೆ. ದೇವರ ದೇವರೆಂದು ಕರೆಯಲ್ಪಡುವ ಮಹಾದೇವನನ್ನು ಮೆಚ್ಚಿಸಲು ಭಕ್ತರು ನಿರಂತರ ಪ್ರಯತ್ನ ನಡೆಸುತ್ತಿರುತ್ತಾರೆ. ಶಿವ (Shiva)ನನ್ನು ಮೆಚ್ಚಿಸಲು ಯಶಸ್ವಿಯಾದ ವ್ಯಕ್ತಿಯ ಜೀವನದಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ. ಅದರಲ್ಲೂ ವೈಶಾಖ ಮಾಸದ ಸೋಮವಾರದ ದಿನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವೈಶಾಖ ಮಾಸದ ಸೋಮವಾರ ಮಾತ್ರವಲ್ಲ ಪ್ರತಿ ತಿಂಗಳ ಸೋಮವಾರ ವಿಶೇಷತೆ ಪಡೆದಿದೆ. ಭಕ್ತರು ಶಿವನನ್ನು ಪ್ರಾರ್ಥಿಸಿ, ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ, ಸೋಮವಾರ ವೃತ ಮಾಡ್ತಾರೆ. ಸೋಮವಾರ ಕೆಲ ಕೆಲಸಗಳನ್ನು ಮಾಡುವುದು ಒಳ್ಳೆಯದು ಎಂದು ನಂಬಲಾಗಿದೆ. ಶಿವ ಭಕ್ತರಿಗೆ ಶಿವ ಒಲಿಯಬೇಕೆಂದ್ರೆ, ನಂಬಿಕೆಗಳ ಆಧಾರದ ಮೇಲೆ ಸೋಮವಾರ ಕೆಲ ಕೆಲಸಗಳನ್ನು ಅಗತ್ಯವಾಗಿ ಮಾಡ್ಬೇಕು. ಇದ್ರಿಂದ ಎಲ್ಲ ಸಮಸ್ಯೆ ದೂರವಾಗಿ, ನೆಮ್ಮದಿ ಸಿಗುತ್ತದೆ. ಇಂದು ನಾವು ಸೋಮವಾರ ಯಾವ ಕೆಲಸ ಮಾಡುವುದು ಅತ್ಯಂತ ಮಂಗಳಕರವೆಂದು ಹೇಳ್ತೀವಿ.
ನಂಬಿಕೆಯ ಪ್ರಕಾರ, ಸೋಮವಾರದಂದು ಈ 5 ಕೆಲಸಗಳನ್ನು ಮಾಡಿದರೆ, ಮಹಾದೇವನ ಕೃಪೆಯಿಂದ ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ. ಸೋಮವಾರದ ದಿನ ಮಾಡಿ ಈ ಕೆಲಸ :
ಸಿಹಿ ಅರ್ಪಣೆ : ಆರೋಗ್ಯ, ಆಯಸ್ಸು, ಐಶ್ವರ್ಯವನ್ನು ಜನರು ಬಯಸ್ತಾರೆ. ಕುಟುಂಬಸ್ಥರ ಆರೋಗ್ಯ ಸದಾ ಚೆನ್ನಾಗಿರಬೇಕೆಂದು ಬಯಸುವವರು ಸೋಮವಾರದ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಬೇಕು. ಪೂಜೆ ವೇಳೆ ದೇವರಿಗೆ ಬೇಳೆ ಹಿಟ್ಟಿನಿಂದ ಮಾಡಿದ ಯಾವುದೇ ಸಿಹಿ ಪದಾರ್ಥವನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಕುಟುಂಬ ಸದಸ್ಯರ ಆರೋಗ್ಯ ಸುಧಾರಿಸುತ್ತದೆ.
ಹೆಸರು 'S'ನಿಂದ ಶುರುವಾದರೆ, ವ್ಯಕ್ತಿತ್ವ ಹೀಗಿರುತ್ತದೆ..
ಹಾಲು – ಜೇನುತುಪ್ಪ : ಬೆಳಿಗ್ಗೆ ಸ್ನಾನ ಮಾಡಿದ ನಂತರ ಮಹಾದೇವನ ಪೂಜೆ ನಡೆಯುತ್ತದೆ. ಉದ್ಯೋಗದಲ್ಲಿ ವೃದ್ಧಿ, ವ್ಯವಹಾರದಲ್ಲಿ ಯಶಸ್ಸು ಸಿಗ್ಬೇಕೆಂದು ಬಯಸುವವರು ಸೋಮವಾರದ ದಿನ ಬೆಳಿಗ್ಗೆ ಸ್ನಾನ ಮಾಡಿ, ಶಿವನಿಗೆ ಪೂಜೆ ಸಲ್ಲಿಸಬೇಕು. ಈ ವೇಳೆ ಹಾಲು ಮತ್ತು ಜೇನುತುಪ್ಪವನ್ನು ಅರ್ಪಿಸಿದ್ರೆ ಒಳ್ಳೆಯದು. ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ರಿಂದ ದೂರವಾಗುತ್ತವೆ. ಶಿವನ ಕೃಪೆಗೆ ಪಾತ್ರರಾಗುವ ನೀವು, ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ ಎಂದು ನಂಬಲಾಗಿದೆ.
ಶ್ರೀಗಂಧ : ಸೋಮವಾರ ಶಿವನ ದೇವಸ್ಥಾನದಲ್ಲಿ ಜಲಾಭಿಷೇಕ ನಡೆಯುತ್ತದೆ. ಹಾಗೆ ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜೆ ಮಾಡುವವರು ಕೂಡ ಜಲಾಭಿಷೇಕ ಮಾಡ್ತಾರೆ. ಅಭಿಷೇಕದ ನಂತರ ಸೋಮವಾರದಂದು ಶಿವಲಿಂಗದ ಮೇಲೆ ಶ್ರೀಗಂಧದವನ್ನು ಲೇಪಿಸುವುದು ಒಳ್ಳೆಯದು. ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬಯಸುವ ಭಕ್ತರು, ಶ್ರೀಗಂಧವನ್ನು ಅರ್ಪಿಸಿದ್ರೆ ಮನೆ ಹಾಗೂ ಮನಸ್ಸಿನಲ್ಲಿ ಸದಾ ಶಾಂತಿ, ಸಂತೋಷ ನೆಲೆಸಿರುತ್ತದೆ.
Saturn transit 2022: ಯಾವೆಲ್ಲ ರಾಶಿಗಳ ಅದೃಷ್ಟ ಬದಲಾಗಲಿದೆ?
ಪ್ರಾರ್ಥನೆ : ಶಿವನಿಗೆ ಪ್ರಿಯವಾದ ಹೂವು ಮತ್ತು ಹಣ್ಣುಗಳನ್ನು ಅರ್ಪಿಸಿ, ನಂಬಿಕೆಯ ಪ್ರಕಾರ ಆರತಿ ಮಾಡಲಾಗುತ್ತದೆ. ಶಿವ ಒಲಿಯಬೇಕೆಂದ್ರೆ ಭೋಲೇನಾಥನನ್ನು ಮನಃಪೂರ್ವಕವಾಗಿ ಧ್ಯಾನಿಸಬೇಕು. ಆಗ ಮನಸ್ಸು ಪ್ರಸನ್ನವಾಗುತ್ತದೆ. ಶಿವ ಪೂಜೆಯಲ್ಲಿ ಪ್ರಾರ್ಥನೆ ಕೂಡ ಮಹತ್ವ ಪಡೆಯುತ್ತದೆ.
ಹಸಿರು ಬಣ್ಣ : ಭೋಲೆನಾಥನ ನೆಚ್ಚಿನ ಬಣ್ಣ ಹಸಿರು. ಈ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜೆ ಮಾಡುವುದಕ್ಕೆ ವಿಶೇಷ ಮನ್ನಣೆ ಇದೆ. ಅಲ್ಲದೆ, ಹಳದಿ, ಕೆಂಪು ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಸಹ ಧರಿಸಬಹುದು. ಆದರೆ ಪುರಾಣಗಳ ಪ್ರಕಾರ, ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ಎಂದಿಗೂ ಶಿವನ ಪೂಜೆ ಮಾಡಬಾರದು.