ವಿಶ್ವಾವಸು ಸಂವತ್ಸರದಲ್ಲಿ ಯಾರು ರಾಜ? ಯಾರು ಮಂತ್ರಿ? ಯುಗಾದಿ ಭವಿಷ್ಯ ಹೇಗಿದೆ

Published : Mar 20, 2025, 12:56 PM ISTUpdated : Mar 20, 2025, 01:01 PM IST
ವಿಶ್ವಾವಸು ಸಂವತ್ಸರದಲ್ಲಿ ಯಾರು ರಾಜ? ಯಾರು ಮಂತ್ರಿ? ಯುಗಾದಿ ಭವಿಷ್ಯ ಹೇಗಿದೆ

ಸಾರಾಂಶ

ಈ ಸಂವತ್ಸರದ ಹೆಸರು ವಿಶ್ವಾವಸು. ವಿಶ್ವಾವಸು ಎಂದರೇನು..? ಎಂದು ಶ್ರೀಕಂಠಶಾಸ್ತ್ರಿಗಳು ಹೇಳಿದ್ದಾರೆ.   

ಈ ಸಂವತ್ಸರದ ಹೆಸರು ವಿಶ್ವಾವಸು. ವಿಶ್ವಾವಸು ಎಂದರೇನು..? ಎರಡುಮೂರು ಬಗೆಗಳಲ್ಲಿ ಈ ಪದವನ್ನು ಅರ್ಥೈಸಬಹುದು. ಕಲ್ಪದ್ರುಮದ ಪ್ರಕಾರ ವಿಶ್ವಂ ವಸು ಯಸ್ಯ ವಿಶ್ವಾವಸು ಅಂತ. ಇಡೀ ವಿಶ್ವವೇ ಯಾರ ಸಂಪತ್ತೋ ಅವನು ಅಂತ. ಅಲ್ಲದೇ,  ವಿಶ್ವೇಷಾಂ ವಸು ಯಸ್ಮಾತ್ ವಿಶ್ವಾವಸು:  ಎಂಬುದು ವಾಚಸ್ಪತ್ಯ ವಚನ. ಇದರರ್ಥ - ಎಲ್ಲರ ಸಂಪತ್ತು ಯಾರಿಂದಲೋ ಅವನು ವಿಶ್ವಾವಸು ಎಂದು. ಇವೆಲ್ಲವೂ ವಿಷ್ಣುವಿನ ಹೆಸರನ್ನೇ ಸೂಚಿಸುತ್ತದೆ. ಕಿಟ್ಟಲ್ ಪ್ರಕಾರ wealth Of all - ಎಲ್ಲರ ಸಂಪತ್ತು  ಅಂತ. ಒಟ್ಟಾರೆ ವಿಶ್ವಾವಸು ಸಂವತ್ಸರ ಸಂಪತ್ತನ್ನು ಸೂಚಿಸುತ್ತದೆ. ಎಲ್ಲರ ಬದುಕಿಗೆ ಸಮೃದ್ಧವಾದ ಸಂಪತ್ತು 
ವಿಶ್ವಾವಸು ಸಂವತ್ಸರವು ಪ್ರಾರಂಭವಾಗುತ್ತಿರುವುದು ಭಾನುವಾರ.  ಯಾವ ವಾರದಂದು ಸಂವತ್ಸರ ಪ್ರಾರಂಭವಾಗುತ್ತದೆಯೋ ಆ ವಾರದ ಅಧಿಪತಿಯೇ ಆ ವರ್ಷದ ರಾಜನಾಗಿರುತ್ತಾನೆ. ಹೀಗಾಗಿ ಈ ವರ್ಷದ ರಾಜ ಸೂರ್ಯ (ರವಿ )  ಸೌರ ಸಂಕ್ರಮಣವು ಯಾವ ವಾರವಿರುವುದೋ ಆ ವಾರದ ಅಧಿಪತಿ ಮಂತ್ರಿಯಾಗಿರುತ್ತಾನೆ. ಹೀಗಾಗಿ ಈ ವರ್ಷದಲ್ಲಿ ಸೋಮವಾರ ಸೌರ ಸಂಕ್ರಮಣವಾಗುವುದರಿಂದ ಈ ವರ್ಷದ ಮಂತ್ರಿ ಚಂದ್ರನಾಗಿದ್ದಾನೆ. ರಾಜ-ಮಂತ್ರಿಗಳೇ ಸಾಮಾನ್ಯವಾಗಿ ಆ ವರ್ಷದ ಫಲಾಫಲ ನಿರ್ಣಯಿಸಿಬಿಡುತ್ತಾರೆ. ಜಗದೊಡೆಯನ ನೇತ್ರಗಳೆ ಆಗಿರುವ ಸೂರ್ಯಚಂದ್ರರು ಈ ವರ್ಷ ಯಾವ ಹೆಚ್ಚಿನ ಶುಭವನ್ನೇ ತರಲಿದ್ದಾರೆ. 
 
ಗ್ರಹಗಳ ರಾಜಾದಯಫಲ :

ರಾಜ - ರವಿ
ರಾಜ  - ಸೂರ್ಯ ರಾಜನಾದುದರಿಂದ ಅತಿಯಾದ ಬಿಸಿಲಿನ ತಾಪ ಪ್ರಾಣಿಸಂಕುಲವನ್ನು ಕಾಡಲಿದೆ. ಕಡಿಮೆ ಮಳೆಯನ್ನು ಸೂಚಿಸುವ ಸೂರ್ಯ ಬೆಳೆ-ಧಾನ್ಯಗಳ ಕೊರತೆಯನ್ನುಂಟುಮಾಡಲಿದ್ದಾನೆ. ರಾಜರಲ್ಲಿ ವೈರತ್ವ ಬೆಳೆಯಲಿದೆ. 

ಮಂತ್ರಿ -  ಚಂದ್ರ
ಮಂತ್ರಿ - ಚಂದ್ರ  ಮಂತ್ರಿಯಾದುದರಿಂದ ಮಳೆಗೆ ಕೊರತೆಯಾಗುವಿದಿಲ್ಲ. ಸಸ್ಯಗಳು ಚೆನ್ನಾಗಿ ಫಲಿಸುತ್ತವೆ. ಜನರು ಕ್ಷೇಮದಿಂದಿರುತ್ತಾರೆ. ಸ್ತ್ರೀಯರಿಗೆ ಅಧಿಕಾರ ಉಂಟಾಗಲಿದೆ.

ಸೇನಾಧಿಪತಿ - ರವಿ
ಸೇನೆ ಅಂದ್ರೆ ರಕ್ಷಣಾ ವ್ಯವಸ್ಥೆ. ರಕ್ಷಣಾ ವ್ಯವಸ್ಥೆಗಳಲ್ಲಿ ತೊಂದರೆಗಳು- ದೇಶದೇಶಗಳ ನಡುವೆ ಯುದ್ಧ ಸಂಭವ ಸಾಧ್ಯತೆ. ಕೆಂಪು ಧಾನ್ಯಗಳ ಬೆಳೆ ಸಮೃದ್ಧವಾಗಲಿದೆ. 

ಸಸ್ಯಾಧಿಪತಿ - ಗುರು
ಗುರುವು ಸಸ್ಯಾಧಿಪತಿಯಾದ್ದರಿಂದ ಸಸ್ಯಗಳಲ್ಲಿ ಸಮೃದ್ಧಿಯನ್ನು ಕಾಣಬಹುದು. ಸಿಹಿ ಪದಾರ್ಥಗಳು ಸಮೃದ್ಧವಾಗಿ ಬೆಳೆಯಲಿವೆ. ಸಿಹಿ ಹಾಗೂ ಹಣ್ಣಿನ ಫಲ ಹೆಚ್ಚಾಗಲಿದೆ.

ಧಾನ್ಯಾಧಿಪತಿ - ಕುಜ
ಕುಜನಿಂದಾಗಿ ಕುಷ್ಕಿ ಧಾನ್ಯಗಳು, ಕೆಂಪುಧಾನ್ಯಗಳು ಸಮೃದ್ಧವಾಗಿ ಬೆಳೆಯಬಹುದು. ಕೆಂಪು ಧಾನ್ಯಗಳು ಹೆಚ್ಚಿನ ಫಲಕೊಡಲಿವೆ. 

ಅರ್ಘಾಧಿಪತಿ -  ರವಿ
ಅರ್ಘಾಧಿಪತ್ಯವೆಂದರೆ ಪದಾರ್ಥಗಳಿಗೆ ಉಂಟಾಗುವ ಬೆಲೆ. ಸೂರ್ಯನಿಂದ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಕೆಂಪು ಧಾನ್ಯಗಳು ಹೆಚ್ಚಾಗಿ ಫಲಿಸಲಿವೆ.

ಮೇಘಾಧಿಪತಿ - ರವಿ
ಸೂರ್ಯನ ಕಾರಣದಿಂದ ಬೆಸಿಲಿನ ತಾಪ ಹೆಚ್ಚು. ಮಳೆ ಪ್ರಮಾಣ ಕಡಿಮೆಯಾಘಲಿದೆ. ಧಗೆ-ಒಣ ವಾತಾವರಣ ಹೆಚ್ಚಾಗಿರಲಿದೆ. 

ರಸಾಧಿಪತಿ- ಶನಿ
ಸಸ್ಯಗಳಲ್ಲಿ ಸತ್ವತೆ ಕಡಿಮೆಯಾಗುತ್ತದೆ. ರಸ ಪದಾರ್ಥಗಳು ಕ್ಷೀಣಿಸುತ್ತವೆ. 

ನೀರಸಾಧಿಪತಿ - ಬುಧ
ಸುಗಂಧ ದ್ರವ್ಯಗಳು-ಶ್ರೀಗಂಧಗಳು ದುರ್ಲಭವಾಗುತ್ತವೆ. ಕಬ್ಬಿಣ, ಸೀಸ, ತಾಮ್ರ, ಪಚ್ಚೆ ವಸ್ತುಗಳು ಸಮದ್ಧವಾಗಿ ದೊರೆಯುತ್ತವೆ.

ಪಶುನಾಯಕ - ಯಮ
ಯಮನ ನಾಯಕತ್ವದಲ್ಲಿ ಪಶುಗಳಿಗೆ ರೋಗ ಬಾಧೆ ಹೆಚ್ಚಬಹುದು. ಮೇವಿನ ಕೊರತೆ ಉಂಟಾಗಲಿದೆ.

ಗ್ರಹಣ ವಿಚಾರ :

07-09-2025 - ಭಾನುವಾರ - ಖಗ್ರಾಸ ಚಂದ್ರ ಗ್ರಹಣ ಭಾರತದಲ್ಲಿ ಸಂಭವಿಸಲಿದೆ. ಆಚರಣೆ ಇದೆ.
ಸ್ಪರ್ಶಕಾಲ ರಾತ್ರಿ - 09.57
ಮಧ್ಯಕಾಲ ರಾತ್ರಿ - 11.42
ಮೋಕ್ಷಕಾಲ ರಾತ್ರಿ - 1.26

03-03—2026 - ಮಂಗಳವಾರ - ಖಗ್ರಾಸ ಚಂದ್ರಗ್ರಹಣ ಭಾರತದಲ್ಲಿ ಸಂಭವಿಸಲಿದೆ. ಆಚರಣೆ ಇದೆ.
ಸ್ಪರ್ಶಕಾಲ ಮಧ್ಯಾಹ್ನ - 3.20
ಮಧ್ಯಕಾಲ ಸಂಜೆ  - 5.04
ಮೋಕ್ಷಕಾಲ ಸಂಜೆ  - 06.40

ಗ್ರಹಗಳ ಸಂಚಾರ ವಿಚಾರ :

ಈ ವರ್ಷ ಮುಖ್ಯವಾಗಿ ಗುರು, ರಾಹು, ಕೇತುಗಳ ಪರಿವರ್ತನೆ ಇರುವುದರಿಂದ ಎಲ್ಲ ರಾಶಿಗಳಿಗೂ ಈ ಗ್ರಹಗಳ ಫಲಾಫಲ ಸಂದಾಯವಾಗಲಿದೆ. 

ಮೇ 14 ರಂದು ಮಿಥುನ ರಾಶಿಗೆ ಗುರುವಿನ ಸಂಕ್ರಮಣವಾಗಲಿದೆ. ಅಲ್ಲದೆ,
ಗುರುವು ಅಕ್ಟೋಬರ್ 19 ರಿಂದ ಡಿಸೆಂಬರ್ 4 ರ ವರೆಗೆ ಕರ್ಕಟಕ ರಾಶಿಯಲ್ಲಿ ಸಂಚರಿಸಲಿದ್ದಾನೆ. 
ನಂತರ, ಡಿಸೆಂಬರ್ 5 ರಿಂದ ವರ್ಷಾಂತ್ಯದವರೆಗೆ ಮಿಥುನ ಸಂಚಾರವಿರುತ್ತದೆ.
ಮೇ 18 ರಂದು ರಾಹುವು ಕುಂಭ ರಾಶಿಗೂ ಕೇತುವು ಸಿಂಹ ರಾಶಿಗೂ ಪ್ರವೇಶವಾಗಲಿದೆ.

PREV
Read more Articles on
click me!

Recommended Stories

1882ರ ಕೇದಾರನಾಥ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ, ಸನಾತನ ಹಿರಿಮೆಗೆ ಸಾಟಿ ಎಲ್ಲಿ?
ಪ್ರಪಂಚದ ಪರಿವೆಯಿಲ್ಲದೇ ಹಲವರು ಮಲಗಿರುವಾಗ ನೀವು ಎದ್ದೇಳಿ.. ಇದು ಮ್ಯಾಜಿಕ್ ಸಮಯ, ಇನ್ಯಾಕೆ ತಡ ಮಾಡ್ತೀರಿ?