ಗಣೇಶ ಚತುರ್ಥಿ 2022 ದಿನ ಈ ಕತೆಯನ್ನು ಕೇಳಿದರೆ ಪಾಪ ನಾಶವಾಗುವುದು..

By Suvarna NewsFirst Published Aug 29, 2022, 5:55 PM IST
Highlights

ಗಣೇಶ ಚತುರ್ಥಿ ವ್ರತ ಕಥಾ: ಗಣೇಶ ಚತುರ್ಥಿಯ ದಿನದಂದು ಉಪವಾಸ ಆಚರಿಸುವ ಮೂಲಕ ಈ ಕಥೆಯನ್ನು ಕೇಳಬೇಕು. ತಾಯಿ ಪಾರ್ವತಿ ಮತ್ತು ಶಿವನ ಈ ಕಥೆಯನ್ನು ಕೇಳಿದರೆ ಎಲ್ಲಾ ತೊಂದರೆಗಳು ದೂರವಾಗುತ್ತವೆ.

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು 'ಗಣೇಶ ಚತುರ್ಥಿ' ಆಚರಿಸಲಾಗುತ್ತದೆ.  ಈ ದಿನದಂದು ವ್ರತ ಆಚರಿಸುವವರು ಗಣೇಶ ಚತುರ್ಥಿ ವ್ರತ ಕಥಾ ಅಥವಾ ಗಣೇಶ ಚತುರ್ಥಿಯ ಕಥೆಯನ್ನು ಕೇಳುತ್ತಾರೆ. ವಿಘ್ನ ವಿನಾಯಕನು ದೇವರುಗಳಲ್ಲಿ ಅತ್ಯುನ್ನತ ಸ್ಥಾನವನ್ನು ಹೊಂದಿದ್ದಾರೆ. ಶ್ರೀ ಗಣೇಶನನ್ನು ದೇವರುಗಳಲ್ಲಿ ಮೊದಲು ಪೂಜಿಸಲಾಗುತ್ತದೆ ಮತ್ತು ಆತ ಬುದ್ಧಿವಂತಿಕೆಯ ದೇವರು. ಆತನಿಲ್ಲದೆ ಯಾವುದೇ ಒಳ್ಳೆಯ ಕೆಲಸ ಆರಂಭವಾಗುವುದಿಲ್ಲ. ಗಣೇಶ ಚತುರ್ಥಿಯ ಉಪವಾಸದ ಹಿಂದೆ ಅನೇಕ ಪೌರಾಣಿಕ ಕಥೆಗಳನ್ನು ಉಲ್ಲೇಖಿಸಲಾಗಿದೆ.

ಗಣೇಶ ಚತುರ್ಥಿಯ ದಿನದಂದು ಬೆಳಿಗ್ಗೆ ಸ್ನಾನ ಮಾಡಿದ ನಂತರ ಗಣೇಶನ ಮೂರ್ತಿಗೆ ಸಿಂಧೂರವನ್ನು ಅರ್ಪಿಸಿ ಪೂಜಿಸಲಾಗುತ್ತದೆ. 21 ಲಡ್ಡುಗಳನ್ನು ಅರ್ಪಿಸಲಾಗುತ್ತದೆ. ಇವುಗಳಲ್ಲಿ ಐದು ಲಡ್ಡುಗಳನ್ನು ಗಣೇಶನ ವಿಗ್ರಹದ ಬಳಿ ಇಡಲಾಗುತ್ತದೆ ಮತ್ತು ಉಳಿದವುಗಳನ್ನು ಬ್ರಾಹ್ಮಣರಿಗೆ ದಾನ ಮಾಡಲಾಗುತ್ತದೆ. ಗಣೇಶನ ವಿಗ್ರಹವನ್ನು ಉತ್ತಮ ಮುಹೂರ್ತದಲ್ಲಿ ನದಿ ಅಥವಾ ಕೊಳದಲ್ಲಿ ಮುಳುಗಿಸಲಾಗುತ್ತದೆ. ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಬುದ್ಧಿವಂತಿಕೆ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ಎಲ್ಲಾ ಅಡೆತಡೆಗಳು ನಾಶವಾಗುತ್ತವೆ.

ಕನಸಲ್ಲಿ ದೀಪ ಕಂಡ್ರೆ ಶುಭವೋ? ಅಶುಭವೋ?

ಗಣೇಶ ಚತುರ್ಥಿಯ ಪುರಾಣ
ಒಮ್ಮೆ ಶಿವನು ಭೋಗವತಿ ನದಿಯಲ್ಲಿ ಸ್ನಾನ ಮಾಡಲು ಹೋದನು. ಅವನ ನಿರ್ಗಮನದ ನಂತರ, ಪಾರ್ವತಿ ಮಾತೆಯು ತನ್ನ ದೇಹದ ಸಂಯೋಜನೆಯೊಂದಿಗೆ ಒಂದು ಪ್ರತಿಮೆಯನ್ನು ಮಾಡಿ ಅದಕ್ಕೆ ಜೀವವನ್ನು ತುಂಬಿದಳು. ಅವನಿಗೆ 'ಗಣೇಶ' ಎಂದು ಹೆಸರಿಟ್ಟಳು. ಪಾರ್ವತಿ ಮಾತೆಯು ಸ್ನಾನಕ್ಕೆ ಹೊರಟು ನಾನು ಸ್ನಾನ ಮಾಡುವಾಗ ಯಾರನ್ನೂ ಒಳಗೆ ಬಿಡಬೇಡ ಎಂದು ಗಣೇಶನಿಗೆ ಅಪ್ಪಣೆ ಮಾಡಿದಳು. 

ಭೋಗವತಿಯಿಂದ ಸ್ನಾನ ಮುಗಿಸಿ ಭಗವಾನ್ ಶಿವ ಬಂದಾಗ, ಗಣೇಶ ಶಿವನನ್ನು ತಡೆದು ಬಾಗಿಲಲ್ಲಿ ನಿಲ್ಲಿಸಿದನು. ಇದು ತನ್ನದೇ ಮನೆ ಎಂದಪ ಶಿವನು ಬಹಳಷ್ಟು ವಿವರಿಸಿದರೂ ಗಣೇಶ ಕೇಳಲಿಲ್ಲ. ಅಮ್ಮ ಸ್ನಾನ ಮಾಡುವಾಗ ಯಾರನ್ನೂ ಒಳ ಬಿಡುವುದಿಲ್ಲ ಎಂದು ಹಟ ಹಿಡಿದನು. ಇದನ್ನು ತನ್ನ ಅವಮಾನವೆಂದು ಪರಿಗಣಿಸಿದ ಶಿವನು ಅವನ ಮೇಲೆ ಕೋಪಗೊಂಡು ತ್ರಿಶೂಲದಿಂದ ಅವನ ತಲೆಯನ್ನು ದೇಹದಿಂದ ಬೇರ್ಪಡಿಸಿ ಒಳಗೆ ಹೋದನು. ಶಿವನು ಗಣೇಶನ ಶಿರಚ್ಛೇದ ಮಾಡಿದನೆಂದು ಮಾತಾ ಪಾರ್ವತಿಗೆ ತಿಳಿದಾಗ, ಅವಳು ತುಂಬಾ ಕೋಪಗೊಂಡಳು.

ಗಣೇಶ ಪ್ರಾಣತ್ಯಾಗ ಮಾಡಿದ್ದರಿಂದ ಪಾರ್ವತಿ ದೇವಿಯು ತುಂಬಾ ದುಃಖಿತಳಾದಳು ಮತ್ತು ಅವಳು ಆಹಾರ ಮತ್ತು ನೀರನ್ನು ತ್ಯಜಿಸಿದಳು. ಪಾರ್ವತಿಯ ಅಸಮಾಧಾನವನ್ನು ಹೋಗಲಾಡಿಸಲು ಶಿವನು ಗಣೇಶನಿಗೆ ಆನೆಯ ತಲೆಯನ್ನು ಇಟ್ಟು ಜೀವ ನೀಡಿದನು. ನಂತರ ಎಲ್ಲ ದೇವಾನುದೇವತೆಗಳು ಗಣೇಶನಿಗೆ ಎಲ್ಲಾ ಶಕ್ತಿಗಳನ್ನು ನೀಡಿ ಮೊದಲ ಆರಾಧಕನನ್ನಾಗಿ ಮಾಡಿದರು. ಈ ಘಟನೆಯು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಸಂಭವಿಸಿತು, ಆದ್ದರಿಂದ ಈ ದಿನಾಂಕವನ್ನು ಪವಿತ್ರ ಹಬ್ಬ 'ಗಣೇಶ ಚತುರ್ಥಿ' ಎಂದು ಆಚರಿಸಲಾಗುತ್ತದೆ.

ಗಣೇಶ ಚತುರ್ಥಿ 2022: ಮನೆಗೆ ಹಬ್ಬದ ಕಳೆ ತರಲು ಹೀಗೆ ಅಲಂಕರಿಸಿ..

ಗಣೇಶ ಚತುರ್ಥಿಯ ದಿನದಂದು ಉಪವಾಸವನ್ನು ಆಚರಿಸುವುದರಿಂದ, ಗಣೇಶ ಚತುರ್ಥಿ ಉಪವಾಸದ ಕಥೆಯನ್ನು ಕೇಳುವುದರಿಂದ ಅಥವಾ ಓದುವುದರಿಂದ ವ್ಯಕ್ತಿಯ ಪಾಪಗಳು ನಾಶವಾಗುತ್ತವೆ ಮತ್ತು ಜೀವನದಲ್ಲಿನ ತೊಂದರೆಗಳು ನಿವಾರಣೆಯಾಗುತ್ತದೆ, ಗಣೇಶ ಚತುರ್ಥಿ ಉಪವಾಸದ ಕಥೆಯು ಒಬ್ಬರ ಇಷ್ಟಾರ್ಥಗಳನ್ನು ಪೂರೈಸುತ್ತದೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!