Akshaya Tritiyaದಂದು ಈ ವಸ್ತುಗಳನ್ನು ದಾನ ಮಾಡಿದ್ರೆ ಲಕ್ಷ್ಮೀ ದೇವಿ ಒಲಿಯೋದು ಪಕ್ಕಾ!

Published : Apr 18, 2023, 06:51 PM IST
Akshaya Tritiyaದಂದು ಈ ವಸ್ತುಗಳನ್ನು ದಾನ ಮಾಡಿದ್ರೆ ಲಕ್ಷ್ಮೀ ದೇವಿ ಒಲಿಯೋದು ಪಕ್ಕಾ!

ಸಾರಾಂಶ

ಅಕ್ಷಯ ತೃತೀಯವನ್ನು ಈ ಬಾರಿ ಏಪ್ರಿಲ್ 22ರ ಶನಿವಾರದಂದು ಆಚರಿಸಲಾಗುತ್ತದೆ. ಈ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಸಂತೋಷ ಸಿಗುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವು ಉಳಿಯುತ್ತದೆ. 

ಸನಾತನ ಧರ್ಮದಲ್ಲಿ, ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿಯನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ದಿನಾಂಕವನ್ನು ವರ್ಷದ ಅತ್ಯಂತ ಮಂಗಳಕರ ಮುಹೂರ್ತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯ ಎಂದರೆ ನಮ್ಮ ಕರ್ಮಗಳ ಅಕ್ಷಯ ಫಲವನ್ನು ಕೊಡುವ ಹಬ್ಬ. ಅದಕ್ಕಾಗಿಯೇ ಈ ದಿನ ನಮಗೆ ಅಕ್ಷಯ ಪುಣ್ಯವನ್ನು ನೀಡುವ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಮತ್ತು ಅಂತಹ ಪುಣ್ಯದಿಂದ ನಮ್ಮ ಜೀವನವು ಸಂತೋಷ ಮತ್ತು ಶಾಂತಿಯಿಂದ ಕಳೆಯುತ್ತದೆ ಎಂದು ಪುರಾಣಗಳಲ್ಲಿ ನಂಬಲಾಗಿದೆ. ಈ ದಿನಾಂಕದಂದು ನೀವು ಅದೃಷ್ಟವನ್ನು ಪಡೆಯಲು ಬಯಸಿದರೆ, ಈ ಕ್ರಮಗಳನ್ನು ಅನುಸರಿಸಿ.

ಅಕ್ಷಯ ತೃತೀಯವನ್ನು ಈ ಬಾರಿ ಏಪ್ರಿಲ್ 22ರ ಶನಿವಾರದಂದು ಆಚರಿಸಲಾಗುತ್ತದೆ. ಈ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಸಂತೋಷ ಸಿಗುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವು ಉಳಿಯುತ್ತದೆ. ಯಾವ ವಸ್ತುಗಳನ್ನು ದಾನ ಮಾಡಬೇಕು ನೋಡೋಣ. 

ಅಕ್ಷಯ ತೃತೀಯದಂದು ವಸ್ತ್ರದಾನ ಮಾಡಿ
ಅಕ್ಷಯ ತೃತೀಯ ದಿನದಂದು ವಸ್ತ್ರದಾನ ಮಾಡುವುದರಿಂದ ಮನೆಯಲ್ಲಿ ಐಶ್ವರ್ಯ ಹೆಚ್ಚುತ್ತದೆ. ಅಗತ್ಯವಿರುವವರಿಗೆ ಬಟ್ಟೆಗಳನ್ನು ದಾನ ಮಾಡುವುದರಿಂದ ಲಕ್ಷ್ಮಿ ದೇವಿಗೆ ಮತ್ತು ವಿಷ್ಣುವಿಗೆ ಸಂತೋಷವಾಗುತ್ತದೆ.

Astro Tips: ಈ ತಪ್ಪುಗಳು ನಿಮ್ಮ ಆಯಸ್ಸು ಮೊಟಕುಗೊಳಿಸುತ್ವೆ, ಎಚ್ಚರ!

ಬಾರ್ಲಿಯನ್ನು ದಾನ ಮಾಡಿ
ಅಕ್ಷಯ ತೃತೀಯ ದಿನದಂದು ಕಣಜವನ್ನು ದಾನ ಮಾಡುವುದರಿಂದ ಮನೆಯಲ್ಲಿ ಧನ-ಧಾನ್ಯಗಳಿಗೆ ಕೊರತೆಯಾಗುವುದಿಲ್ಲ. ಲಕ್ಷ್ಮಿಯ ಕೃಪೆಯಿಂದ ಮನೆಯಲ್ಲಿ ಧಾನ್ಯಗಳ ದಾಸ್ತಾನು ಯಾವಾಗಲೂ ತುಂಬಿರುತ್ತದೆ ಮತ್ತು ಆರೋಗ್ಯವೂ ಸುಧಾರಿಸುತ್ತದೆ.

ಅಕ್ಷಯ ತೃತೀಯದಂದು ಮಣ್ಣಿನ ಮಡಕೆ ದಾನ
ಅಕ್ಷಯ ತೃತೀಯ ದಿನದಂದು ಮಣ್ಣಿನ ಮಡಕೆಯನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮಣ್ಣಿನ ಮಡಕೆಯನ್ನು ದಾನ ಮಾಡುವುದರಿಂದ ಉಗ್ರ ಗ್ರಹಗಳನ್ನು ಶಾಂತಗೊಳ್ಳುತ್ತವೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುತ್ತದೆ. ಇದಲ್ಲದೆ, ಅಕ್ಷಯ ತೃತೀಯ ದಿನದಂದು ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟು ನಂತರ ದಾನ ಮಾಡಿ. ಈ ಪರಿಹಾರವನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಇದರೊಂದಿಗೆ, ನಿಮ್ಮ ಜಾತಕದ ಗ್ರಹಗಳು ಶಾಂತವಾಗಿರುತ್ತವೆ.

ಆಹಾರ ಪದಾರ್ಥಗಳನ್ನು ದಾನ ಮಾಡಿ
ಅಕ್ಷಯ ತೃತೀಯ ದಿನದಂದು ಬೆಲ್ಲ, ಬೇಳೆ, ತುಪ್ಪ, ಉಪ್ಪು, ಎಳ್ಳು, ಸೌತೆಕಾಯಿ, ಅಕ್ಕಿ, ಹಿಟ್ಟು, ಉದ್ದಿನಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ದಾನ ಮಾಡುವುದು ಶ್ರೇಯಸ್ಕರ. ಇದರಿಂದ ತಾಯಿ ಲಕ್ಷ್ಮಿ ಸಂತಸಗೊಳ್ಳುವ ಜೊತೆಗೆ, ತಾಯಿ ಅನ್ನಪೂರ್ಣೆಯ ಆಶೀರ್ವಾದ ಇಡೀ ಕುಟುಂಬದ ಮೇಲಿರುತ್ತದೆ.

ಮೇ 16ರವರೆಗೂ ಸರಿಯಿಲ್ಲ ಈ ರಾಶಿಗಳ ಗ್ರಹಚಾರ; ಹೆದರಬೇಕಿಲ್ಲ, ಇಲ್ಲಿದೆ ಪರಿಹಾರ

ಪುಸ್ತಕಗಳ ದಾನ
ಅಕ್ಷಯ ತೃತೀಯ ದಿನದಂದು, ಪುಸ್ತಕಗಳು ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಪಂಚಾಂಗವನ್ನು ದಾನ ಮಾಡುವುದು ಈ ದಿನದಂದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಆದ್ದರಿಂದ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮತ್ತು ಅವಳ ಆಶೀರ್ವಾದವನ್ನು ದಯಪಾಲಿಸಲು ಅಕ್ಷಯ ತೃತೀಯದಂದು ದಾನ ಮಾಡಿ. 

PREV
Read more Articles on
click me!

Recommended Stories

2026 ರಲ್ಲಿ ಈ 4 ರಾಶಿ ಜೀವನದಲ್ಲಿ ಪ್ರಮುಖ ಬದಲಾವಣೆ
ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?