Krishna Janmashtami: ರಾಶಿಗನುಗುಣವಾಗಿ ಮಾಡಿ ದಾನ

Published : Aug 16, 2022, 05:07 PM IST
Krishna Janmashtami: ರಾಶಿಗನುಗುಣವಾಗಿ ಮಾಡಿ ದಾನ

ಸಾರಾಂಶ

ಕೃಷ್ಣನ ಭಕ್ತರ ಸಂಭ್ರಮ ಈಗಿನಿಂದ್ಲೇ ಮನೆ ಮಾಡಿದೆ. ಕೃಷ್ಣನ ಆರಾಧನೆಗೆ ತಯಾರಿ ನಡೆದಿದೆ. ಇದೇ ಆಗಸ್ಟ್ 18ರಂದು ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ. ಭಕ್ತರು ಆ ದಿನ ದಾನದ ಬಗ್ಗೆ ಕೆಲ ವಿಷ್ಯ ನೆನಪಿಟ್ಟುಕೊಂಡ್ರೆ ಶುಭ ಲಾಭ ಪಡೆಯಬಹುದು.  

ಶ್ರೀ ಕೃಷ್ಣ ಜನ್ಮಾಷ್ಟಮಿ ಹತ್ತಿರ ಬರ್ತಿದೆ. ಪ್ರತಿ ವರ್ಷ ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಈ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ಆಗಸ್ಟ್ 18 ರಂದು ಬಂದಿದೆ. ಆಗಸ್ಟ್ 18ರಂದು ಕೃಷ್ಣ ಜನ್ಮಾಷ್ಟಮಿಗೆ ಭಕ್ತರು ತಯಾರಿ ನಡೆಸಿದ್ದಾರೆ. ಆ ದಿನ ಬಾಲ ಗೋಪಾಲನ ಪೂಜೆ ನಡೆಯಲಿದೆ. ಬಾಲ ಕೃಷ್ಣನಿಗೆ ಬೆಣ್ಣೆ, ಲಡ್ಡನ್ನು ನೀಡಿ ಭಕ್ತರು ಭಕ್ತಿಯಿಂದ ಪೂಜೆ ಮಾಡ್ತಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೆಲ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ನಂಬಲಾಗಿದೆ. ಆ ದಿನ ಯಾವ ರಾಶಿಯವರು ಯಾವ ವಸ್ತುವನ್ನು ದಾನ ಮಾಡಿದ್ರೆ ಶುಭ ಫಲ ದೊರೆಯುತ್ತದೆ ಹಾಗೆ ಏನು ಕೆಲಸ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಕೃಷ್ಣ ಜನ್ಮಾಷ್ಟಮಿ (Krishna Janmashtami) ದಿನ ದಾನ : 

ಮೇಷ (Aries) ರಾಶಿ :  ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ ಮೇಷ ರಾಶಿಯವರು ಕೃಷ್ಣ ಜನ್ಮಾಷ್ಟಮಿಯ ದಿನದಂದು ಗೋಧಿಯನ್ನು ದಾನ ಮಾಡುವುದು ಮಂಗಳ. ಇದರೊಂದಿಗೆ ವಿಷ್ಣು ಸಹಸ್ರನಾಮ (Vishnusahasranama) ವನ್ನು ಪಠಿಸುವುದರಿಂದಲೂ ಶುಭ ಫಲ ಪ್ರಾಪ್ತಿಯಾಗುತ್ತದೆ.

ವೃಷಭ (Taurus) ರಾಶಿ : ವೃಷಭ ರಾಶಿಯವರು ಜನ್ಮಾಷ್ಟಮಿಯ ದಿನ ಸಕ್ಕರೆಯನ್ನು ದಾನ ಮಾಡುವುದು ಒಳ್ಳೆಯದು.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೀಗೆ ಮಾಡುವುದರಿಂದ ಶ್ರೀಕೃಷ್ಣನ ವಿಶೇಷ ಕೃಪೆಗೆ ವೃಷಭ ರಾಶಿಯವರು ಪಾತ್ರರಾಗುತ್ತಾರೆ. 

ಮಿಥುನ (Gemini)  ರಾಶಿ : ಮಿಥುನ ರಾಶಿಯವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೃಷ್ಣ ಜನ್ಮಾಷ್ಟಮಿಯಂದು ಧಾನ್ಯಗಳನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು. ಇದು ಅದೃಷ್ಟ ತಂದುಕೊಡಲಿದೆ.

ಕರ್ಕಾಟಕ (Cancer)  ರಾಶಿ. : ಕರ್ಕಾಟಕ ರಾಶಿಯವರು ಕೃಷ್ಣ ಜನ್ಮಾಷ್ಟಮಿಯ ದಿನದಂದು ಬಡವರಿಗೆ ಅಕ್ಕಿ ಮತ್ತು ಖೀರ್ ಅನ್ನು ವಿತರಿಸಬೇಕು. ಹೀಗೆ ಮಾಡಿದಲ್ಲಿ ಕರ್ಕಾಟಕ ರಾಶಿಯವರ ಆಸೆಗಳು ಈಡೇರುತ್ತವೆ.

ಸಿಂಹ (Leo) ರಾಶಿ :  ಸಿಂಹ ರಾಶಿಯವರು ಜನ್ಮಾಷ್ಟಮಿಯ ದಿನದಂದು ಬೆಲ್ಲವನ್ನು ದಾನ ಮಾಡಬೇಕು. ಹಾಗೆಯೇ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದು ಬಹಳ ಶುಭಕರ.

ಕನ್ಯಾ (Virgo) ರಾಶಿ :  ಕನ್ಯಾ ರಾಶಿ ಜನರು ಜನ್ಮಾಷ್ಟಮಿಯ ದಿನದಂದು ಅಗತ್ಯವಿರುವವರಿಗೆ ಆಹಾರ ಧಾನ್ಯಗಳನ್ನು ದಾನ ಮಾಡಬೇಕು. ಇದ್ರಿಂದ ಶುಭ ಫಲ ಪ್ರಾಪ್ತಿಯಾಗಲಿದೆ. 

ತುಲಾ (Libra) ರಾಶಿ : ಈ ರಾಶಿಯ ಜನರು ಜನ್ಮಾಷ್ಟಮಿಯ ದಿನದಂದು ಬಡವರಿಗೆ ತಮ್ಮ ಅಗತ್ಯಕ್ಕೆ ಅನುಗುಣವಾಗಿ ವಸ್ತುಗಳನ್ನು ದಾನ ಮಾಡಬೇಕು. ಬಡವರಿಗೆ ವಸ್ತ್ರದಾನ ಮಾಡಿದ್ರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ.

ವೃಶ್ಚಿಕ (Capricorn) ರಾಶಿ : ವೃಶ್ಚಿಕ ರಾಶಿಯವರು ಕೃಷ್ಣ ಜನ್ಮಾಷ್ಟಮಿಯಂದು ಗೋಧಿಯನ್ನು ನಿರ್ಗತಿಕರಿಗೆ ದಾನ ಮಾಡಿದರೆ ಉತ್ತಮ ಎನ್ನಲಾಗಿದೆ.  

ಗರುಡ ಪುರಾಣ ಕಲಿಸೋ 10 ಅಸಾಧಾರಣ ಪಾಠಗಳಿವು..

ಧನು (Sagittarius) ರಾಶಿ : ಧನು ರಾಶಿ ಜನರು ಕೃಷ್ಣ ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ಕೊಳಲು ಮತ್ತು ನವಿಲು ಗರಿಗಳನ್ನು ಅರ್ಪಿಸಬೇಕು. ಬಡ ಮಕ್ಕಳಿಗೆ ಹಣ್ಣುಗಳನ್ನು ದಾನ ಮಾಡಬೇಕು. ಇದ್ರಿಂದ ಶುಭ ಫಲ ದೊರಕುತ್ತದೆ.

ಮಕರ (Capricorn)  ರಾಶಿ : ಕೃಷ್ಣ ಜನ್ಮಾಷ್ಟಮಿಯ ದಿನದಂದು ಆಹಾರ ಧಾನ್ಯಗಳು ಮತ್ತು ಎಳ್ಳನ್ನು ದಾನ ಮಾಡಬಹುದು. ಇದ್ರ ಜೊತೆ ಭಗವದ್ಗೀತೆ  ಓದಬೇಕು ಇಲ್ಲವೆ ಕೇಳಬೇಕು.

ಕುಂಭ (Aquarius)) ರಾಶಿ : ಕುಂಭ ರಾಶಿಯ ಜನರು ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ನವಿಲು ಗರಿಗಳನ್ನು ಅರ್ಪಿಸಬೇಕು. ಅಲ್ಲದೆ  ಅಗತ್ಯವಿರುವವರಿಗೆ ಹಣ್ಣುಗಳು ಮತ್ತು ಧಾನ್ಯಗಳನ್ನು ದಾನ ಮಾಡಬೇಕು. ಇದ್ರಿಂದ ಯಶಸ್ಸು ದೊರೆಯುತ್ತದೆ. 

ಈ ಸಣ್ಣ ಮಂತ್ರದಲ್ಲಿದೆ ಅಗಾಧ ಶಕ್ತಿ, ಹೇಳಿಕೊಳ್ಳುತ್ತಿದ್ದರೆ ಧೈರ್ಯ ಹೆಚ್ಚೋದು ಗ್ಯಾರಂಟಿ

ಮೀನ (Pisces) ರಾಶಿ : ಮೀನ ರಾಶಿಯವರು ಜನ್ಮಾಷ್ಟಮಿಯ ದಿನದಂದು ದೇವಸ್ಥಾನಕ್ಕೆ ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಬೇಕು.  ಧಾರ್ಮಿಕ ಪುಸ್ತಕಗಳನ್ನು ಸಹ  ಅಗತ್ಯವಿರುವವರಿಗೆ ದಾನ ಮಾಡಿದ್ರೆ ಒಳ್ಳೆಯದಾಗಲಿದೆ. 

PREV
Read more Articles on
click me!

Recommended Stories

ಡಿಸೆಂಬರ್ 29 ರಿಂದ ಜನವರಿ 4, 2026 ರವರೆಗೆ 5 ರಾಶಿಗೆ ಹಠಾತ್ ಲಾಭ, ಸಂತೋಷ
ಜನವರಿ 6 ರಿಂದ 2 ಶಕ್ತಿಶಾಲಿ ಗ್ರಹಗಳ ನಡುವೆ ಭಯಾನಕ ಯುದ್ಧ 4 ರಾಶಿಗೆ ಭಾರೀ ನಷ್ಟ