ವರ್ಷದ ಮೊದಲ ಚಂದ್ರಗ್ರಹಣ ಮೇ 5ರಂದು ಸಂಭವಿಸಲಿದೆ. ಅಂತಹ ಪರಿಸ್ಥಿತಿಯಲ್ಲಿ, ಚಂದ್ರನನ್ನು ಬಲಪಡಿಸಲು, ಚಂದ್ರಗ್ರಹಣದ ದಿನದಂದು ಕವಚವನ್ನು ಪಠಿಸಲು ಜ್ಯೋತಿಷ್ಯದಲ್ಲಿ ಸಲಹೆ ನೀಡಲಾಗುತ್ತದೆ. ಈ ಮಂತ್ರ ಪಠಣದಿಂದ ಮಾನಸಿಕವಾಗಿ ಬಲವಾಗುವಿರಿ. ಆ ರಕ್ಷಾಕವಚ ಮಂತ್ರ ಯಾವುದು ಗೊತ್ತಾ?
ವರ್ಷದ ಮೊದಲ ಚಂದ್ರಗ್ರಹಣವು ಮೇ 5 ರಂದು ಸಂಭವಿಸಲಿದೆ. ಜಾತಕದಲ್ಲಿ ಚಂದ್ರನು ದುರ್ಬಲವಾಗಿರುವ ಜನರ ಮೇಲೆ ಚಂದ್ರಗ್ರಹಣದ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಚಂದ್ರಗ್ರಹಣದ ದಿನದಂದು ಕವಚವನ್ನು ಪಠಿಸುವುದರಿಂದ ಚಂದ್ರನು ಬಲಶಾಲಿಯಾಗುತ್ತಾನೆ ಮತ್ತು ಗ್ರಹಣ ಮತ್ತು ರಾಹುವಿನ ದುಷ್ಪರಿಣಾಮಗಳಿಂದ ಮುಕ್ತಿ ಪಡೆಯಬಹುದು.
ಯಾರ ಜಾತಕದಲ್ಲಿ ಚಂದ್ರನು ಬಲಹೀನನಾಗಿರುತ್ತಾನೆಯೋ, ಆ ಜನರ ದೊಡ್ಡ ಶತ್ರು ಅವರ ಮನಸ್ಸಾಗುತ್ತದೆ. ಏಕೆಂದರೆ ಚಂದ್ರನನ್ನು ಮನಸ್ಸಿನ ಅಂಶವೆಂದು ಪರಿಗಣಿಸಲಾಗಿದೆ. ಚಂದ್ರಗ್ರಹಣದ ದಿನ, ಚಂದ್ರನನ್ನು ಬಲಪಡಿಸಲು ಮತ್ತು ಚಂದ್ರನ ದೋಷಗಳನ್ನು ತೊಡೆದುಹಾಕಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಮಾರ್ಗವೆಂದರೆ ಚಂದ್ರ ಕವಚದ ಪಾರಾಯಣ.
ಚಂದ್ರ ಕವಚದ ಮಾರ್ಗ
ಅಸ್ಯ ಶ್ರೀಚಂದ್ರಕವಚಸ್ತೋತ್ರ ಮಹಾಮಂತ್ರಸ್ಯ ಗೌತಮ ಋಷಿಃ | ಅನುಷ್ಟುಪ್ ಛಂದಃ | ಸೋಮೋ ದೇವತಾ | ರಂ ಬೀಜಮ್ | ಸಂ ಶಕ್ತಿಃ | ಓಂ ಕೀಲಕಮ್ | ಮಮ ಸೋಮಗ್ರಹಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |
Lunar Eclipse: ಯಾವ ರಾಶಿಗೆ ಗ್ರಹಣ ಬಾಧೆ ಹೆಚ್ಚು? ಕೈಗೊಳ್ಳಬೇಕಾದ ಪರಿಹಾರವೇನು?
ಕವಚಂ
ಶಶೀ ಪಾತು ಶಿರೋದೇಶೇ ಫಾಲಂ ಪಾತು ಕಳಾನಿಧಿಃ |
ಚಕ್ಷುಷೀ ಚಂದ್ರಮಾಃ ಪಾತು ಶ್ರುತೀ ಪಾತು ಕಳಾತ್ಮಕಃ || ೧ ||
ಘ್ರಾಣಂ ಪಕ್ಷಕರಃ ಪಾತು ಮುಖಂ ಕುಮುದಬಾಂಧವಃ |
ಸೋಮಃ ಕರೌ ತು ಮೇ ಪಾತು ಸ್ಕನ್ಧೌ ಪಾತು ಸುಧಾತ್ಮಕಃ || ೨ ||
ಊರೂ ಮೈತ್ರೀನಿಧಿಃ ಪಾತು ಮಧ್ಯಂ ಪಾತು ನಿಶಾಕರಃ |
ಕಟಿಂ ಸುಧಾಕರಃ ಪಾತು ಉರಃ ಪಾತು ಶಶಂಧರಃ || ೩ ||
ಮೃಗಾಙ್ಕೋ ಜಾನುನೀ ಪಾತು ಜಙ್ಘೇ ಪಾತ್ವಮೃತಾಬ್ಧಿಜಃ |
ಪಾದೌ ಹಿಮಕರಃ ಪಾತು ಪಾತು ಚನ್ದ್ರೋಽಖಿಲಂ ವಪುಃ || ೪ ||
ಏತದ್ಧಿ ಕವಚಂ ಪುಣ್ಯಂ ಭುಕ್ತಿಮುಕ್ತಿಪ್ರದಾಯಕಮ್ |
ಯಃ ಪಠೇಚ್ಛೃಣುಯಾದ್ವಾಪಿ ಸರ್ವತ್ರ ವಿಜಯೀ ಭವೇತ್ || ೫ ||
ಇತಿ ಶ್ರೀಬ್ರಹ್ಮವೈವರ್ತ ಮಹಾಪುರಾಣೇ ದಕ್ಷಿಣಖಂಡೇ ಶ್ರೀ ಚಂದ್ರ ಕವಚಃ |
ಈ ರೀತಿ ಧ್ಯಾನಿಸಬೇಕು ಮತ್ತು ಚಂದ್ರನ ಶುಭ ಕವಚವನ್ನು ಪ್ರತಿನಿತ್ಯ ಜಪಿಸಬೇಕು.
ಪರಿಣಾಮಗಳು
ಶುಕ್ರ ಮಂಗಳ ಯುತಿಯಿಂದ ಈ ರಾಶಿಗಳಿಗೆ ಮಹಾ ಲಾಭ