ಚಾಣಕ್ಯ ನೀತಿ: ಮನೆಯಲ್ಲಿಈ ಲಕ್ಷಣವಿದ್ದರೆ ದುಡ್ಡಿನ ಹೊಳೆ ಹರಿಯೋದು ಗ್ಯಾರಂಟಿ!

By Bhavani BhatFirst Published Nov 22, 2023, 11:55 AM IST
Highlights

ಚಾಣಕ್ಯನ ಪ್ರಕಾರ ಈ ಕೆಳಗಿನ ಲಕ್ಷಣಗಳು ಇರುವ ಮನೆಯಲ್ಲಿ ಲಕ್ಷ್ಮಿ ಸದಾ ಇರುತ್ತಾಳಂತೆ. ಅವು ಯಾವುದು ನೋಡೋಣ.

ತಾಯಿ ಲಕ್ಷ್ಮಿ ಚಂಚಲ ಸ್ವಭಾವದವಳು. ಒಂದೇ ಸ್ಥಳದಲ್ಲಿ ನಿಲ್ಲುವುದು ಆಕೆಯ ಸ್ವಭಾವವಲ್ಲ. ಆಕೆಯನ್ನು ನಿಮ್ಮ ಮನೆಯಲ್ಲೇ ನೆಲೆ ನಿಲ್ಲುವಂತೆ ಮಾಡಬೇಕಿದ್ದರೆ ಏನು ಮಾಡಬೇಕು? ಜ್ಯೋತಿಷ್ಯರು ಹಲವು ವಿಧದ ಮಂತ್ರ ತಂತ್ರಗಳನ್ನು ಹೇಳುತ್ತಾರೆ. ಅದೆಲ್ಲಕ್ಕಿಂತಲೂ ಆಚಾರ್ಯ ಚಾಣಕ್ಯ ಹೇಳುವ ಕೆಲವು ಸಂಗತಿಗಳು ಸ್ವಾರಸ್ಯಕರವಾಗಿವೆ. ಅವನ ಪ್ರಕಾರ ಈ ಕೆಳಗಿನ ಲಕ್ಷಣಗಳು ಇರುವ ಮನೆಯಲ್ಲಿ ಲಕ್ಷ್ಮಿ ಸದಾ ಇರುತ್ತಾಳಂತೆ. ಹೋಗು ಎಂದರೂ ಹೋಗುವುದಿಲ್ಲವಂತೆ, ಹಾಗಿದ್ದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಇರಬೇಕಿದ್ದರೆ ಅಂಥ ಲಕ್ಷಣಗಳನ್ನು ಅಳವಡಿಸಿಕೊಳ್ಳಬೇಕಲ್ಲವೇ? ಅವು ಯಾವುದು ನೋಡೋಣ.

- ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕುವುದಿಲ್ಲವೋ ಅಂಥ ಮನೆ. ಹೆಣ್ಣು ಮಕ್ಕಳು ಆನಂದವಾಗಿ ನಗು ನಗುತ್ತಿರುವ ಮನೆ. ಪುಟ್ಟ ಮಕ್ಕಳನ್ನು ಹೊಡೆಯದ, ಹಿಂಸಿಸದ ಮನೆ.
- ಅತಿಥಿಗಳನ್ನು ದೇವರೆಂದು ತಿಳಿದು ಸ್ವಾಗತಿಸುವ, ಉಪಚರಿಸುವ ಮನೆ. ಅತಿಥಿಗಳು ಅಸಂತೃಪ್ತಿಯಿಂದ ನಿರ್ಗಮಿಸದ ಮನೆ.
- ಸ್ವಚ್ಛವಾಗಿರುವ ಮನೆ. ಲಕ್ಷ್ಮಿಯು ಸ್ವಚ್ಛವಾದ ಮತ್ತು ಪ್ರಶಾಂತವಾದ ಸ್ಥಳದಲ್ಲಿ ವಾಸಿಸುತ್ತಾಳೆ. ಆದ್ದರಿಂದ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯಲ್ಲಿನ ಎಲ್ಲಾ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು.
- ಸುಂದರ, ಭವ್ಯವಾದ, ಸ್ವಚ್ಛವಾದ ಪ್ರವೇಶ ದ್ವಾರ ಇರುವ ಮನೆ. ಲಕ್ಷ್ಮಿ ದೇವಿಯು ನಿಮ್ಮ ಮುಖ್ಯ ಪ್ರವೇಶ ದ್ವಾರದ ಮೂಲಕ ನಿಮ್ಮ ಮನೆಗೆ ಬರುತ್ತಾಳೆ. ಭವ್ಯವಾದ ಮತ್ತು ಸುಂದರವಾದ ಪ್ರವೇಶದ್ವಾರವು ದೇವಿಯನ್ನು ಆಕರ್ಷಿಸುತ್ತದೆ, ಮತ್ತು ಅವಳು ವಾಸಿಸಲು ನಿಮ್ಮ ಮನೆಗೆ ಪ್ರವೇಶಿಸುತ್ತಾಳೆ.
- ಪ್ರವೇಶದ್ವಾರದಲ್ಲಿ ರಂಗೋಲಿ ಇರುವ ಮನೆ. ರಂಗೋಲಿಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಲಕ್ಷ್ಮಿ ದೇವಿಯ ನೆಚ್ಚಿನ ಬಣ್ಣಗಳಾದ ಕೆಂಪು, ಚಿನ್ನದ ಮತ್ತು ಹಳದಿ ಬಣ್ಣಗಳನ್ನು ಬಳಸಿ. ಕೆಲವು ಜನರು ಅಶೋಕ ಮರ ಅಥವಾ ಮಾವಿನ ಮರದ ಎಲೆಗಳ ತೋರಣಗಳನ್ನು ಮುಖ್ಯ ಬಾಗಿಲಿನಲ್ಲಿ ಹಾಕುತ್ತಾರೆ.
- ಕಮಲ ಅಥವಾ ತಾವರೆ ಇರುವ ಮನೆ. ಕಮಲವು ಲಕ್ಷ್ಮಿ ದೇವಿಗೆ ಬಹಳ ಪ್ರಿಯವಾಗಿದೆ ಮತ್ತು ಅದು ಅವಳ ನೆಚ್ಚಿನ ಹೂವಾಗಿದೆ. ಅವಳು ಅದನ್ನು ಯಾವಾಗಲೂ ತನ್ನೊಂದಿಗೆ ಇಟ್ಟುಕೊಳ್ಳುತ್ತಾಳೆ. ಆದ್ದರಿಂದ, ನಿಮ್ಮ ಮನೆಯನ್ನು ಅಲಂಕರಿಸಲು ನೀವು ಕಮಲದ ಹೂಗಳನ್ನು ಬಳಸಿದರೆ ಶುಭ. 
- ತೆಂಗಿನಕಾಯಿಯ ನೈವೇದ್ಯ ಮಾಡುವ ಮನೆ. ಇದನ್ನು ಶ್ರೀಫಲ ಎಂದೂ ಕರೆಯುತ್ತಾರೆ. ಲಕ್ಷ್ಮಿ ದೇವಿಗೆ ತೆಂಗಿನಕಾಯಿ ಇಷ್ಟ. ತೆಂಗಿನಕಾಯನ್ನು ಅತ್ಯಂತ ಪವಿತ್ರ ಮತ್ತು ಶುಭವೆಂದು ಪರಿಗಣಿಸಲಾಗುತ್ತದೆ.

ಈ ಅಭ್ಯಾಸವಿದ್ದರೆ ಎಷ್ಟು ಸಂಪಾದಿಸಿದರೂ ಏನೂ ಉಳಿಯುವುದಿಲ್ಲ.. ಯಾಕೆ ಗೊತ್ತಾ..?

ಮೋತಿ ಶಂಖ ಇರುವ ಮನೆ. ಇದು ಮುತ್ತುಗಳ ಹೊಳಪನ್ನು ಹೊಂದಿರುವ ಒಂದು ರೀತಿಯ ಶಂಖ. ಈ ಶಂಖವು ಅಪರೂಪ. ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ರೀತಿಯ ಶಂಖವು ಇಡುವ ಸ್ಥಳದಲ್ಲಿ ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸುವುದರೊಂದಿಗೆ ಸಕಾರಾತ್ಮಕ ಶಕ್ತಿಯು ಮನೆಗೆ ಬರುತ್ತದೆ. 
- ತುಳಸಿ ಗಿಡ ಇರುವ ಮನೆ. ಇದು ಲಕ್ಷ್ಮಿಯನ್ನು ಸಂಕೇತಿಸುವ ಅತ್ಯಂತ ಶುಭ ಸಸ್ಯವೆಂದು ಪರಿಗಣಿಸಲಾಗಿದೆ. ಇದರ ಮುಂದೆ ದೀಪವನ್ನು ಬೆಳಗಿಸಿ ಅದನ್ನು ಪ್ರತಿದಿನ ಪೂಜಿಸುವುದರಿಂದ ಸಮೃದ್ಧಿ ಮತ್ತು ಸಂಪತ್ತು ಬರುತ್ತದೆ. ತುಳಸಿಯನ್ನು ಪ್ರಾರ್ಥಿಸುವ ಪ್ರತಿಯೊಂದು ಮನೆಯಲ್ಲೂ ಅವರ ಮೇಲೆ ಎಲ್ಲ ದೇವರ ಆಶೀರ್ವಾದ ಸಿಗುತ್ತದೆ. ಮನೆಯ ಎದುರು ತುಳಸಿಯನ್ನು ನೆಡಬೇಕು ಮತ್ತು ಅದಕ್ಕೆ ನಿಯಮಿತವಾಗಿ ದೀಪವನ್ನು ಬೆಳಗಿಸಬೇಕು.
- ವಾಸ್ತು ದೋಷವಿಲ್ಲದ ಮನೆ. ವಾಸ್ತು ದೋಷವಿರುವ ಮನೆಗಳಲ್ಲಿ ಲಕ್ಷ್ಮಿ ದೇವಿಯು ನಿಲ್ಲುವುದಿಲ್ಲ. ವಾಸ್ತು ನಿಯಮಗಳನ್ನು ಅನುಸರಿಸುವ ಮೂಲಕ, ಲಕ್ಷ್ಮಿ ದೇವಿಯು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಪಡೆದುಕೊಳ್ಳಬಹುದು.

ಚಾಣಕ್ಯನ ಪ್ರಕಾರ ಗಂಡ-ಹೆಂಡತಿಯ ಈ ತಪ್ಪಿನಿಂದಾನೇ ಅನೈತಿಕ ಸಂಬಂಧವೊಂದು ಹುಟ್ಟೋದಂತೆ!
 

click me!