Basant Panchami : ಈ ದಿನ ರಾಶಿಗನುಗುಣವಾಗಿ ಮಾಡಿ ಪೂಜೆ

By Suvarna NewsFirst Published Jan 17, 2023, 5:55 PM IST
Highlights

ಬಸಂತ್ ಪಂಚಮಿಯ ದಿನದಂದು ಸರಸ್ವತಿ ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನ ಜನರು ಭಕ್ತಿಯಿಂದ ಸರಸ್ವತಿ ಆರಾಧನೆ ಮಾಡ್ತಾರೆ. ರಾಶಿಗೆ ಅನುಗುಣವಾಗಿ ಪೂಜೆ ಮಾಡಿದ್ರೆ ಆಸೆಗಳು ಈಡೇರುತ್ತವೆ. ನಿಂತ ಕೆಲಸ ಪೂರ್ಣಗೊಳ್ಳುತ್ತದೆ. 
 

ವಸಂತ ಪಂಚಮಿ ಎಂದರೆ ಜ್ಞಾನದಾತೆ ಸರಸ್ವತಿಯ ಆರಾಧನೆ. ವಸಂತ ಪಂಚಮಿಯನ್ನು ಪ್ರತಿ ವರ್ಷ ಮಾಘ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಬರುತ್ತದೆ. ವಸಂತ ಮಾಸದ ಆರಂಭದಲ್ಲಿ ನಡೆಯುವ ಈ ಹಬ್ಬವನ್ನು ಹೆಚ್ಚಾಗಿ ಪಂಜಾಬ್, ಬಿಹಾರದಲ್ಲಿ ಆಚರಿಸುತ್ತಾರೆ. ಅವರವರ ಜನ್ಮ ರಾಶಿಗಳಿಗೆ ಅನುಸಾರವಾಗಿ ಸರಸ್ವತಿಯ ಪೂಜೆಯನ್ನು ಮಾಡಿದರೆ ಎಲ್ಲ ಕಷ್ಟಗಳು ದೂರವಾಗುತ್ತದೆ. ಯಾವ ರಾಶಿಯವರು ಹೇಗೆ ಪೂಜೆ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಮೇಷ ರಾಶಿ : ಮೇಷ ರಾಶಿಯಲ್ಲಿ ಜನಿಸಿದವರು ಪೂಜೆ ಮಾಡುವಾಗ ಸರಸ್ವತಿ (Saraswati) ಕವಚದ ಮಂತ್ರ ಪಠಿಸಿ, ಹಳದಿ ಅನ್ನ (Rice) ದ ನೈವೇದ್ಯವನ್ನು ನೀಡಿದರೆ ಅವರ ಆಸೆಗಳು ನೆರವೇರುತ್ತವೆ. 

Latest Videos

ವೃಷಭ ರಾಶಿ : ಈ ರಾಶಿಯಲ್ಲಿ ಹುಟ್ಟಿದವರು ವಸಂತ ಪಂಚಮಿಯಂದು ಪೂಜೆ ಮಾಡುವಾಗ ಬಿಳಿ ಶ್ರೀಗಂಧ (Sandalwood) ಮತ್ತು ಬಿಳಿ ಹೂವನ್ನು ದೇವರಿಗೆ ಅರ್ಪಿಸಬೇಕು. ಇದರಿಂದ ಅವರ ಎಲ್ಲ ಆಸೆಗಳು ನೆರವೇರಿ, ಕೆಲಸದಲ್ಲಿ ಏಳ್ಗೆಯಾಗುತ್ತದೆ.

ಮಿಥುನ ರಾಶಿ : ಸರಸ್ವತಿಯು ವಿದ್ಯಾದೇವತೆ ಆಗಿರುವುದರಿಂದ ಅಂದಿನ ದಿನ ಸರಸ್ವತಿಗೆ ಪೆನ್ (Pen) ಇಟ್ಟು ಪೂಜೆ ಸಲ್ಲಿಸಿ. ಮಿಥುನ ರಾಶಿಯವರು ಹೀಗೆ ಮಾಡುವುದರಿಂದ ಅವರ ಜೀವನದಲ್ಲಿ ಉತ್ತಮ ಫಲ ಸಿಗುತ್ತದೆ.

ಕಟಕ ರಾಶಿ : ಕಟಕ ರಾಶಿಗೆ ಚಂದ್ರ ಅಧಿಪತಿಯಾದ್ದರಿಂದ ಈ ರಾಶಿಯವರು ವಸಂತಿ ಪಂಚಮಿಯಂದು ಸರಸ್ವತಿಗೆ ಹಳದಿ ಬಣ್ಣದ ಹೂವುಗಳನ್ನು ನೀಡಬೇಕು. ಖೀರ್ ಗೆ ಕೇಸರಿ ದಳಗಳನ್ನು ಸೇರಿಸಿ ನೈವೇದ್ಯ ಮಾಡಬೇಕು. ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಅಧಿಪತಿ ಸೂರ್ಯನಾಗಿರುವುದರಿಂದ ನೀವು ಸರಸ್ವತಿ ಪೂಜೆ ಮಾಡಿ ಗಾಯತ್ರಿ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮಗೆ ನೌಕರಿಯಲ್ಲಿ ಬಡ್ತಿ ಸಿಗುತ್ತದೆ ಮತ್ತು ಧನ ಲಾಭವಾಗುತ್ತದೆ.

ಕನ್ಯಾ ರಾಶಿ : ವಸಂತ ಪಂಚಮಿಯಂದು ಈ ರಾಶಿಯವರು ಬಡ ಮಕ್ಕಳಿಗೆ ಪುಸ್ತಕ, ಪೆನ್ಸಿಲ್ ಅಥವಾ ಶಾಲೆ ಮಕ್ಕಳಿಗೆ ಬೇಕಾದ ಉಳಿದ ವಸ್ತುಗಳನ್ನು ದಾನಮಾಡಬೇಕು. ಬಡವರಿಗೆ ದಾನ ಮಾಡಿದ್ರೆ ಹೆಚ್ಚಿನ ಫಲವನ್ನು ಪಡೆಯಬಹುದು. 

ತುಲಾ ರಾಶಿ : ತುಲಾ ರಾಶಿಯ ಶುಕ್ರನಾದ್ದರಿಂದ ಈ ರಾಶಿಯವರು ಸರಸ್ವತಿಗೆ ಬಿಳಿ ಬಣ್ಣದ ವಸ್ತುಗಳನ್ನು ನೀಡಬೇಕು. ಬಡವರಿಗೆ ಬಿಳಿ ಬಣ್ಣದ ವಸ್ತ್ರಗಳನ್ನು ದಾನ ಮಾಡಬೇಕು. ಇದರಿಂದ ನಿಮ್ಮ ಆಸೆಗಳೆಲ್ಲ ನೆರವೇರಿ ವಿಶೇಷ ಫಲ ಸಿಗುತ್ತದೆ.

ವೃಶ್ಚಿಕ ರಾಶಿ : ವಸಂತಿ ಪಂಚಮಿಯಂದು ಈ ರಾಶಿಯವರು ಸರಸ್ವತಿಗೆ ಕೆಂಪು ಹಳದಿ ಬಣ್ಣದ ದಾವಣಿಯನ್ನು ಅರ್ಪಿಸಿ ಕೆಂಪು ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ನಿಮ್ಮ ಎಲ್ಲ ಕೆಲಸಗಳೂ ಯಶಸ್ವಿಯಾಗುತ್ತವೆ.

ಧನು ರಾಶಿ : ಈ ರಾಶಿಯ ಅಧಿಪತಿ ಗುರುವಾದ್ದರಿಂದ ಈ ದಿನ ನೀವು ಹಳದಿ ಬಣ್ಣದ ವಸ್ತುಗಳನ್ನು ದೇವಿಗೆ ಅರ್ಪಿಸಬೇಕು ಹಾಗೂ ದಾನ ಮಾಡಬೇಕು. ಕಡಲೆಹಿಟ್ಟಿನ ಉಂಡೆಯನ್ನು ದೇವರಿಗೆ ನೈವೇದ್ಯ ಕೊಡಬೇಕು.

MAGH MASA 2023: ಈ ಮಾಸದಲ್ಲಿಯೇ ಬರಲಿದೆ ಶಿವರಾತ್ರಿ, ವಸಂತ ಪಂಚಮಿ

ಮಕರ ರಾಶಿ :  ವಸಂತ ಪಂಚಮಿಯಂದು ಸರಸ್ವತಿಗೆ ಹಳದಿ ಅನ್ನ ನೈವೇದ್ಯ ಮಾಡಿ ಹಳದಿ ಬಣ್ಣದ ವಸ್ತುಗಳನ್ನು ಬಡವರಿಗೆ ದಾನ ಮಾಡಬೇಕು. ಇದರಿಂದ ಎಲ್ಲ ಬಯಕೆಗಳೂ ಇಡೇರುವುದು ಖಂಡಿತ.

ಕುಂಭ ರಾಶಿ : ಕುಂಭ ರಾಶಿಯವರು ವಸಂತ ಪಂಚಮಿಯಂದು ಸರಸ್ವತಿಯ ಪೂಜೆ ಮಾಡಿ ಬಿಳಿ ಬಣ್ಣದ ವಸ್ತ್ರವನ್ನು ದಾನ ಮಾಡಬೇಕು. ಇದರಿಂದ ವಿದ್ಯೆ (Education) ಲಭಿಸುತ್ತದೆ ಮತ್ತು ಸರಸ್ವತಿಯ ಆಶೀರ್ವಾದ (Blessing) ಯಾವಾಗಲೂ ಇರುತ್ತದೆ.

Idol Vastu : ದೇವರ ಮನೆಯಲ್ಲಿ ಈ ಮೂರ್ತಿ ಇಟ್ರೆ ನಷ್ಟ ನಿಮಗೆ

ಮೀನ ರಾಶಿ : ಮೀನ ರಾಶಿಯವರು ವಸಂತ ಪಂಚಮಿಯಂದು ಕಡಲೆಹಿಟ್ಟಿನಿಂದ ತಯಾರಿಸಿದ ಹಲ್ವಾವನ್ನು ದೇವಿಗೆ ನೈವೇದ್ಯ ಮಾಡಬೇಕು.

click me!