ಝೀ ವಾಹಿನಿಯಲ್ಲಿ ‘ಕನ್ನಡದ ಕಣ್ಮಣಿ’ ರಿಯಾಲಿಟಿ ಶೋ!

Published : Feb 21, 2019, 09:35 AM IST
ಝೀ ವಾಹಿನಿಯಲ್ಲಿ ‘ಕನ್ನಡದ ಕಣ್ಮಣಿ’ ರಿಯಾಲಿಟಿ ಶೋ!

ಸಾರಾಂಶ

ಝೀ ಕನ್ನಡ ವಾಹಿನಿಯಲ್ಲಿ ‘ಕನ್ನಡದ ಕಣ್ಮಣಿ’ ರಿಯಾಲಿಟಿ ಶೋ ಶುರುವಾಗುತ್ತಿದೆ. ಕನ್ನಡದ ಕಣ್ಮಣಿ ಅಪ್ಪಟ ಕನ್ನಡ ನೆಲದ ಟಾಕ್‌ ಶೋ ಆಗಿದ್ದು, ಇಲ್ಲಿ ಪ್ರತಿಭಾವಂತ ಮಕ್ಕಳು ಪ್ರೇಕ್ಷಕರಿಗೆ ಮನೋರಂಜನೆ ನೀಡುವ ಜೊತೆಗೆ ಸಾಕಷ್ಟುಮಾಹಿತಿಗಳನ್ನು ಕೂಡಾ ನೀಡುತ್ತಾರೆ. 

ಅಭಿನವ ಬೀಚಿ ಗಂಗಾವತಿ ಪ್ರಾಣೇಶ್‌, ಸಾಹಿತಿ ಜಯಂತ್‌ ಕಾಯ್ಕಿಣಿ ಮತ್ತು ಜಗ್ಗೇಶ್‌ ತೀರ್ಪುಗಾರರು. ಕಿರಿಕ್‌ ಕೀರ್ತಿ ಈ ಕಾರ್ಯಕ್ರಮದ ನಿರೂಪಕ.

ಈ ಕನ್ನಡದ ಕಣ್ಮಣಿ ರಿಯಾಲಿಟಿ ಕಾರ್ಯಕ್ರಮ ಇದೇ ಫೆæ. 23ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 5 ಗಂಟೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಮೇಲಿನ ಪ್ರೇಮ ಹಾಗೂ ಅಭಿಮಾನದ ಪ್ರತೀಕವಾಗಿ ಶುರುವಾಗುತ್ತಿರುವ ಈ ಹೊಸ ರಿಯಾಲಿಟಿ ಶೋಗಾಗಿ ಕರ್ನಾಟಕ ರಾಜ್ಯದ ಹತ್ತು ಜಿಲ್ಲಾ ಕೇಂದ್ರಗಳಲ್ಲಿ ಭಾಗವಹಿಸಿದ್ದ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಆಡಿಷನ್‌ ಮೂಲಕ ಸೂಕ್ತ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳನ್ನು ಮೂರು ಹಂತಗಳಲ್ಲಿ ಪರೀಕ್ಷೆಗೊಳಪಡಿಸಿ ಮತ್ತೆ ಅವರಲ್ಲಿ 14 ಜನ ಪ್ರತಿಭಾವಂತ ಮಕ್ಕಳನ್ನು ಆಯ್ಕೆಮಾಡಿಕೊಂಡು ವೇದಿಕೆಗೆ ಕರೆತರಲಾಗುತ್ತಿದೆ.

ಋತ್ವಿಕ್ ಕಂಠ ನಿಷ್ಕಲ್ಮಶ: ಕಣ್ಣು ಕೊಡ್ತಿನಿ ಎಂದ ಅಜ್ಜ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬೆನ್ನಲ್ಲಿಯೇ ಸ್ಪರ್ಧಿ ಮೇಲೆ ಗಂಭೀರ ಆರೋಪ ಮಾಡಿದ ಡಿಸೈನರ್‌!
Bigg Boss Kannada 12: ಏನೂ ಮಾಡಲ್ಲ, ವೇಸ್ಟ್ ಎಂದಿದ್ದ ಗಿಲ್ಲಿ ನಟ; ಠಕ್ಕರ್‌ ಕೊಡೋ ಕೆಲಸ ಮಾಡಿದ ಕಾವ್ಯ ಶೈವ!