ಲಕ್ಷ್ಮೀ ದೇವಿಯೊಂದಿಗೆ ವಿಷ್ಣುವಿನ ಪ್ರೇಮ ಪ್ರಸಂಗದ ಮೂಲಕ ಆರಂಭವಾದ ಧಾರವಾಹಿ 'ಶ್ರೀ ವಿಷ್ಣು ಅವತಾರ'ಗಳಾದ ಮತ್ಸ್ಯಾವತಾರ, ಕೂರ್ಮಾವತಾರ, ವರಹಾವತಾರವನ್ನು ಮುಗಿಸಿದೆ. ಈಗ ನರಸಿಂಹಾವತಾರ ಆರಂಭವಾಗಿದೆ.
ನರಸಿಂಹಾವತಾರ ಎಂದಾಕ್ಷಣ ಜ್ಞಾಪಕಕ್ಕೆ ಬರುವುದು ಹಿರಣ್ಯ ಕಶ್ಯಪ ಹಾಗೂ ಆತನ ರೌದ್ರತನ. ಧಾರವಾಹಿಯಲ್ಲಿ ಈ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಕಿರುತೆರೆಯ ನಿರ್ದೇಶಕ ಹಾಗೂ ನಟ ನವೀನ್ ಕೃಷ್ಣ. ಇನ್ನು ಪ್ರಹ್ಲಾದನ ಪಾತ್ರದಲ್ಲಿ ಡ್ರಾಮ ಜ್ಯೂನಿಯರ್ಸ್ ಪ್ರತಿಭೆ ಚಿಂತೆ ಇಲ್ಲದ ಅಚಿಂತ್ಯ.
ಈ ಪಾತ್ರಕ್ಕ ಹೆಚ್ಚು ಪ್ರಮುಖ್ಯತೆ ಇದ್ದು, ನವೀನ್ ತಮ್ಮ ದೇಹ, ಭಾಷೆ ಹಾಗೂ ಉಗ್ರ ನೋಟಕ್ಕೆ ತಯಾರಾಗುತ್ತಿದ್ದಾರೆ. ಇನ್ನು ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪತ್ತೇದಾರಿ ಪ್ರತಿಭಾ' ಧಾರವಾಹಿಯನ್ನು ನಿರ್ದೇಶಿಸುತ್ತಿದ್ದರು ನವೀನ್.
ಈ ಅವತಾರ ಇಂದಿನಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.