ಎಡಕಲ್ಲು ಗುಡ್ಡದ ಮೇಲೆ ಚಿತ್ರದ ನಾಯಕಿ ಪುನರಾಗಮನ!

By Web DeskFirst Published Apr 4, 2019, 10:35 AM IST
Highlights

ಎಡ​ಕಲ್ಲು ಗುಡ್ಡದ ಮೇಲೆ ಸಿನಿಮಾ ನಾಯಕಿ ಎಲ್ಲಿ ಹೋದ​ರು? ಈ ಪ್ರಶ್ನೆ ಕೇಳಿದರೆ ಜಯಂತಿ ತಕ್ಷಣ ನೆನಪಾಗುತ್ತಾರೆ. ಆದರೆ, ಇದು ಹಳೆಯ ಗುಡ್ಡದ ಕತೆ​ಯಲ್ಲ. ವಿವಿನ್‌ ಸೂರ್ಯ ನಿರ್ದೇ​ಶ​ನದ ‘ಎಡ​ಕಲ್ಲು ಗುಡ್ಡದ ಮೇಲೆ’ ಚಿತ್ರದ ಮೂಲಕ ಹಿರಿ​ತೆ​ರೆಗೆ ಪರಿ​ಚ​ಯ​ಗೊಂಡ ನಟಿ ಸ್ವಾತಿ ಶರ್ಮಾ ಅವರ ಬಗ್ಗೆ.

 ಸ್ವಾತಿ ಈಗ ಶಿವರಾಜ್‌​ಕು​ಮಾರ್‌ ಅವ​ರೊಂದಿಗೆ ನಟಿ​ಸುವ ಅವ​ಕಾಶ ಗಿಟ್ಟಿ​ಸಿ​ಕೊಂಡಿ​ದ್ದಾರೆ. ಪ್ರಮೋದ್‌ ನಿರ್ದೇ​ಶ​ನದ ‘ದ್ರೋಣ’ ಚಿತ್ರ​ದಲ್ಲಿ ಶಿವಣ್ಣ ಪ್ರಾಧ್ಯ​ಪ​ಕ​ರಾಗಿ ಕಾಣಿ​ಸಿ​ಕೊಂಡರೆ, ಸ್ವಾತಿ ಶರ್ಮಾ ವಿದ್ಯಾ​ರ್ಥಿನಿ ಪಾತ್ರ ಮಾಡು​ತ್ತಿ​ದ್ದಾರೆ. ಆರಂಭದ ದಿನ​ಗ​ಳಲ್ಲೇ ದೊಡ್ಡ ಸ್ಟಾರ್‌ ನಟನ ಚಿತ್ರ​ದಲ್ಲಿ ನಟಿ​ಸುವ ಅವ​ಕಾಶ ಪಡೆ​ದು​ಕೊಂಡಿ​ರು​ವು​ದಕ್ಕೆ ಸ್ವಾತಿ ಶರ್ಮಾ ಸಿಕ್ಕಾ​ಪಟ್ಟೆಖುಷಿ ಆಗಿ​ದ್ದಾರೆ. ಈ ಕುರಿತು ಅವರು ಹೇಳಿದ್ದು ಇಲ್ಲಿದೆ.

1. ನಾನು ಶಿವಣ್ಣ ಅವ​ರೊಂದಿಗೆ ನಟಿ​ಸು​ತ್ತಿ​ರು​ವುದು ಇದೇ ಮೊದಲು. ಅವರು ಮೇಷ್ಟು್ರ, ನಾನು ವಿದ್ಯಾರ್ಥಿ ಪಾತ್ರ. ಹೀಗಾಗಿ ತುಂಬಾ ದೃಶ್ಯ​ಗಳು ನಮ್ಮ ಇಬ್ಬರ ಕಾಂಬಿ​ನೇ​ಷ​ನ್‌​ನಲ್ಲೇ ಬಂದಿವೆ.

2. ಮೊದ​ಲೆ​ರಡು ದಿನ ತುಂಬಾ ಹೆದ​ರಿಕೆ ಆಯಿತು. ಯಾಕೆಂದರೆ ದೊಡ್ಡ ಸ್ಟಾರ್‌ ನಟ. ಅವರ ಮುಂದೆ ನಾನು ಹೇಗೆ ನಟಿ​ಸು​ವುದು ಎನ್ನುವ ಭಯ ಕಾಡು​ತ್ತಲೇ ಇತ್ತು. ಆದರೆ, ಮೊದಲ ಚಿತ್ರೀ​ಕ​ರಣ ಮುಗಿ​ದಾ​ಗಲೇ ಶಿವಣ್ಣ, ಸ್ಟಾರ್‌ ಜತೆಗೆ ಸಿಂಪಲ್‌ ವ್ಯಕ್ತಿ ಅಂತ ಗೊತ್ತಾ​ಯಿತು. ಮುಂದೆ ಅವರ ಜತೆ ನಟಿ​ಸು​ವು​ದಕ್ಕೆ ಹೆದ​ರಿಕೆ ಆಗ​ಲಿ​ಲ್ಲ.

3. ಸಹ ಕಲಾ​ವಿ​ದ​ರಿಗೆ ಒಳ್ಳೆಯ ಗೈಡ್‌ ಎಂದರೆ ಶಿವಣ್ಣ. ಚಿತ್ರೀ​ಕ​ರ​ಣದ ಸ್ಥಳ​ದಲ್ಲಿ ತುಂಬಾ ಸಲ​ಹೆ​ಗ​ಳನ್ನು ನೀಡು​ತ್ತಾರೆ. ನನಗೂ ಅದೇ ಅನು​ಭವ ಆಯಿತು. ಚಿಕ್ಕ​ವರು, ದೊಡ್ಡ​ವರು ಅಂತ ನೋಡಲ್ಲ. ಎಲ್ಲ​ರನ್ನು ಸ್ನೇಹ, ಪ್ರೀತಿ​ಯಿಂದಲೇ ನಡೆ​ಸಿ​ಕೊ​ಳ್ಳು​ತ್ತಾರೆ.

4. ಈ ಚಿತ್ರ​ದಲ್ಲಿ ನಾನು ಹಳ್ಳಿ​ಯಿಂದ ಬರುವ ಹುಡುಗಿ ಪಾತ್ರ. ಅಂದರೆ ಓದು​ವು​ದಕ್ಕೆ ತುಂಬಾ ಆಸಕ್ತಿ ಇರು​ತ್ತದೆ. ಆದರೆ, ಅದು ನನಗೆ ಕೈಗೂ​ಡ​ಲ್ಲ. ಕಷ್ಟ​ಗ​ಳಿಂದ ಆಚೆ ಬಂದು ನಾನು ಹೇಗೆ ವಿದ್ಯಾ​ಭ್ಯಾಸ ಮಾಡು​ತ್ತೇನೆ ಎಂಬು​ದನ್ನು ನನ್ನ ಪಾತ್ರದ ಮೂಲಕ ಹೇಳ​ಲಾ​ಗಿ​ದೆ.

click me!