
ಬಿಗ್ ಬಸ್ 12 ರ ಮನೆ ಪ್ರವೇಶ ಮಾಡಿದಾಗಿನಿಂದ ಕ್ರಿಕೆಟಿಗ ಶ್ರೀಶಾಂತ್ ಮನೆಯೊಳಗಿನ ಅನೇಕರೊಂದಿಗೆ ಸಂಘರ್ಷ ಮಾಡಿಕೊಂಡೇ ಬಂದಿದ್ದಾರೆ. ರೋಮಿಲ್ ಚಕ್ರವರ್ತಿ ಮತ್ತು ಸುರಭಿ ರಾಣಾ ಅವರೊಂದಿಗಿನ ಕಿತ್ತಾಟ ಅವರನ್ನು ಸಿಕ್ರೇಟ್ ರೂಂ ತನಕ ತೆಗೆದುಕೊಂಡು ಹೋಗಿತ್ತು.
ಇದೀಗ ಮನೆಗೆ ಮತ್ತೆ ಹಿಂದಿರುಗುತ್ತಲೇ ದೀಪಿಕಾ ಕಾರ್ಕರ್ ಬಣ್ಣ ಬಯಲು ಮಾಡುತ್ತೇನೆ ಎಂದು ಗುಡುಗಿದ ಶ್ರೀಶಾಂತ್ ಪಾಠ ಕಲಿಸಲು ಮುಂದಾಗಿದ್ದರು.
ಆದರೆ ಬಿಗ್ ಬಾಸ್ ನೀಡಿದ ಲಕ್ಸುರಿ ಟಾಸ್ಕ್ ನಲ್ಲಿ ಕ್ರಿಕೆಟಿಗ ಉಲ್ಟಾ ಹೊಡೆದುದ್ದು ಅದೇ ದೀಪಿಕಾಗೆ ಸಹಾಯ ಹಸ್ತ ಚಾಚಿದರು. ಇದು ಮನೆಯವರೆಲ್ಲರ ವಿರೋಧಕ್ಕೆ ಕಾರಣವಾಗಿದೆ. ಶ್ರೀಶಾಂತ್ ನೆರವಿನಿಂದ ಈ ಟಾಸ್ಕ್ ನಲ್ಲಿ ದೀಪಿಕಾ ಜಯ ಗಳಿಸಿದರು.
ಆದರೆ ಮನೆಯವರು ಶ್ರೀಶಾಂತ್ ಡಬಲ್ ಸ್ಟಾಂಡರ್ಡ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು ಅಲ್ಲದೇ ಇನ್ನು ಮುಂದೆ ಯಾವ ಕಾರಣಕ್ಕೂ ನೆರವು ನೀಡುವುದಿಲ್ಲ ಎಂದು ಹೇಳಿದ್ದಾರೆ. ಶ್ರೀಶಾಂತ ಮಾನಸಿಕ ಹಿಡಿತ ಕಳೆದುಕೊಂಡಿದ್ದಾರೆ ಎಂದು ಸುರಭಿ ರಾಣಾ ಆರೋಪ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.