ಬಾಹುಬಲಿಯ ಶಿವಗಾಮಿ ಪಾತ್ರಕ್ಕೆ ರಾಜಮೌಳಿ ಮೊದಲು ಸಂಪರ್ಕಿಸಿದ್ದು ಯಾರನ್ನು ಗೊತ್ತೇ? ಇವರ ಸಂಭಾವನೆ ಕೇಳಿ ನಿರ್ದೇಶಕ ದಂಗು!

Published : May 08, 2017, 06:06 AM ISTUpdated : Apr 11, 2018, 01:12 PM IST
ಬಾಹುಬಲಿಯ ಶಿವಗಾಮಿ ಪಾತ್ರಕ್ಕೆ ರಾಜಮೌಳಿ ಮೊದಲು ಸಂಪರ್ಕಿಸಿದ್ದು ಯಾರನ್ನು ಗೊತ್ತೇ? ಇವರ ಸಂಭಾವನೆ ಕೇಳಿ ನಿರ್ದೇಶಕ ದಂಗು!

ಸಾರಾಂಶ

ಬಾಹುಬಲಿ-2 ಭಾರೀ ಯಶಸ್ಸಿನೊಂದಿಗೆ ಬಾಕ್ಸಾಫೀಸ್ ನಲ್ಲಿ ಮುನ್ನುಗ್ಗುತ್ತಿದೆ. ಜಗತ್ತಿನಲ್ಲಿ 1000 ಕೋಟಿ ಗಳಿಸಿದ ಭಾರತದ ಮೊದಲ ಚಿತ್ರ ಇದಾಗಿದೆ. ಚಿತ್ರದ ಎಲ್ಲಾ ಪಾತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ರಮ್ಯಕೃಷ್ಣ ಅಭಿನಯದ ಶಿವಗಾಮಿ ಪಾತ್ರವಂತೂ ಮೋಸ್ಟ್ ಪವರ್ ಫುಲ್! ರಮ್ಯಕೃಷ್ಣರನ್ನು ಹೊರತುಪಡಿಸಿ ಆ ಪಾತ್ರದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳಲು ಅಸಾಧ್ಯ ಎನ್ನುವಷ್ಟು ಪಾತ್ರಕ್ಕೆ ಜೀವ ತುಂಬಿದ್ದಾರೆ.

ಬಾಹುಬಲಿ-2 ಭಾರೀ ಯಶಸ್ಸಿನೊಂದಿಗೆ ಬಾಕ್ಸಾಫೀಸ್ ನಲ್ಲಿ ಮುನ್ನುಗ್ಗುತ್ತಿದೆ. ಜಗತ್ತಿನಲ್ಲಿ 1000 ಕೋಟಿ ಗಳಿಸಿದ ಭಾರತದ ಮೊದಲ ಚಿತ್ರ ಇದಾಗಿದೆ. ಚಿತ್ರದ ಎಲ್ಲಾ ಪಾತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ರಮ್ಯಕೃಷ್ಣ ಅಭಿನಯದ ಶಿವಗಾಮಿ ಪಾತ್ರವಂತೂ ಮೋಸ್ಟ್ ಪವರ್ ಫುಲ್! ರಮ್ಯಕೃಷ್ಣರನ್ನು ಹೊರತುಪಡಿಸಿ ಆ ಪಾತ್ರದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳಲು ಅಸಾಧ್ಯ ಎನ್ನುವಷ್ಟು ಪಾತ್ರಕ್ಕೆ ಜೀವ ತುಂಬಿದ್ದಾರೆ.

ಅಚ್ಚರಿ ವಿಚಾರವೆಂದರೆ ರಮ್ಯಕೃಷ್ಣ ರಾಜಮೌಳಿಯವರ ಮೊದಲ ಆಯ್ಕೆಯಾಗಿರಲಿಲ್ಲವಂತೆ. ಬಾಲಿವುಡ್ ಖ್ಯಾತ ನಟಿ ಶ್ರೀದೇವಿಯನ್ನು ಈ ಪಾತ್ರ ಮಾಡುವಂತೆ ಕೇಳಿಕೊಂಡಿದ್ದರಂತೆ. ಆ ಪಾತ್ರ ಮಾಡುವುದಕ್ಕೆ ಶ್ರೀದೇವಿ ಇಟ್ಟ ಡಿಮ್ಯಾಂಡ್ ಕೇಳಿ ಚಿತ್ರ ನಿರ್ದೇಶಕರು ದಂಗು! ಆಕೆ ಕೇಳಿದ್ದು ಬರೋಬ್ಬರಿ 6 ಕೋಟಿ. ಕೊನೆಗೆ ರಮ್ಯಕೃಷ್ಣ  ಶಿವಗಾಮಿಯಾಗಲು ಒಪ್ಪಿಕೊಂಡರಂತೆ. ಆಕೆ ಕೇಳಿದ್ದು 2.5 ಕೋಟಿ ರೂ. ಒಟ್ಟಿನಲ್ಲಿ ಒಬ್ಬರ ನಷ್ಟ ಇನ್ನೊಬ್ಬರಿಗೆ ಲಾಭ ಎನ್ನುವಂತಾಯಿತು.

ಕಳೆದ ತಿಂಗಳು ನಡೆದ ಪತ್ರಿಕಾಗೋಷ್ಟಿಯೊಂದರಲ್ಲಿ, ಶಿವಗಾಮಿ ಪಾತ್ರಕ್ಕೆ ಮೊದಲು ರಮ್ಯಕೃಷ್ಣರನ್ನು ಅಪ್ರೋಚ್ ಮಾಡದಿದ್ದದ್ದಕ್ಕೆ ರಾಜಮೌಳಿ ಬೇಸರ ವ್ಯಕ್ತಪಡಿಸಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!