ವಿದೇಶದಿಂದ ಶೂಟಿಂಗ್ ಬಿಟ್ಟು ಬಚ್ಚನ್ ಭಾರತಕ್ಕೆ ಬಂದಿದ್ದೇಕೆ..?

Published : Aug 06, 2018, 12:57 PM IST
ವಿದೇಶದಿಂದ ಶೂಟಿಂಗ್ ಬಿಟ್ಟು ಬಚ್ಚನ್ ಭಾರತಕ್ಕೆ ಬಂದಿದ್ದೇಕೆ..?

ಸಾರಾಂಶ

ವಿದೇಶದಲ್ಲಿ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತಕ್ಷಣವೇ ಭಾರತಕ್ಕೆ ಆಗಮಿಸಿದ್ದಾರೆ. ಪುತ್ರಿ ಶ್ವೇತಾ ನಂದಾ ಅವರ ಮಾವ ನಿಧನದ ಹಿನ್ನೆಲೆಯಲ್ಲಿ ತುರ್ತಾಗಿ ಆಗಮಿಸಿದ್ದಾರೆ. 

ಮುಂಬೈ :  ಅಮಿತಾಭ್ ಬಚ್ಚನ್ ಪುತ್ರಿ ಶ್ವೇತ ಬಚ್ಚನ್ ಅವರ ಮಾವ ರಾಜನ್ ನಂದಾ ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ.  ಎಸ್ಕಾರ್ಟ್  ಗ್ರೂಪ್ ಮುಖ್ಯಸ್ಥರಾದ ನಂದಾ ಅವರ ನಿಧನಕ್ಕೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. 

ಇನ್ನು ಸಂಬಂಧಿ ಹಾಗೂ ಅತ್ಯಾಪ್ತರಾದ ನಂದಾ ಅವರನ್ನು ಕಳೆದುಕೊಂಡಿರುವುದು  ತಮಗೆ ಅತ್ಯಂತ ನೋವಾಗಿದೆ ಎಂದು ಬಾಲಿವುಡ್ ಬಿಗ್ ಬಿ ಅಮಿತಾಭ್  ಬಚ್ಚನ್ ಅವರು ಬ್ಲಾಗಲ್ಲಿ ಬರೆದುಕೊಂಡಿದ್ದಾರೆ. 

ಇನ್ನು ಬಲ್ಗೇರಿಯಾದಲ್ಲಿ ಚಿತ್ರದ ಶೂಟಿಂಗ್ ನಲ್ಲಿ  ಇದ್ದ ಬಚ್ಚನ್ ಅವರು ನಂದಾ ಅವರ ನಿಧನ ಹಿನ್ನೆಲೆಯಲ್ಲಿ ತುರ್ತಾಗಿ ಭಾರತಕ್ಕೆ ಆಗಮಿಸಿದ್ದಾರೆ. 

ಅಲ್ಲದೇ ಅನೇಕರು ನಂದಾ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದು ಈ ನಿಟ್ಟಿನಲ್ಲಿ ಎಲ್ಲರಿಗೂ ಧನ್ಯವಾದ ಎಂದು ಬಚ್ಚನ್ ಹೇಳಿದ್ದಾರೆ. 

ಬಿಗ್ ಬಿ ಪುತ್ರ ಶ್ವೇತಾ ಬಚ್ಚನ್ ಅವರನ್ನು ರಾಜನ್ ನಂದಾ ಅವರ ಪುತ್ರ ನಿಖಿಲ್ ನಂದಾ ಅವರಿಗೆ ವಿವಾಹ ಮಾಡಿ ಕೊಡಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!