ದರ್ಶನ್'ಗಾಗಿ ಪುನೀತ್ ತ್ಯಾಗ : ಒಬ್ಬರನ್ನೊಬ್ಬರು ಬಿಟ್ಟುಕೊಡದ ಸ್ಟಾರ್ಸ್, ಏನಿದರ ಮರ್ಮ?

Published : Sep 12, 2017, 07:25 PM ISTUpdated : Apr 11, 2018, 12:57 PM IST
ದರ್ಶನ್'ಗಾಗಿ ಪುನೀತ್ ತ್ಯಾಗ : ಒಬ್ಬರನ್ನೊಬ್ಬರು ಬಿಟ್ಟುಕೊಡದ ಸ್ಟಾರ್ಸ್, ಏನಿದರ ಮರ್ಮ?

ಸಾರಾಂಶ

ಈ ಹಿಂದೆ ಪುನೀತ್ ರಾಜ್ ಕುಮಾರ್ ನಟಿಸಿದ್ದ ರಾಜಕುಮಾರ ಸಿನಿಮಾ ರಿಲೀಸ್ ಆಗಿ, ಮೂರು ವಾರಗಳ ನಂತರ ದರ್ಶನ್ ಚಕ್ರವರ್ತಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ಪವರ್'ಸ್ಟಾರ್'ಗೆ ದರ್ಶನ್ ಸಹಾಯ ಮಾಡಿದ್ದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಒಂದು ತ್ಯಾಗ ಮಾಡ್ತಾ ಇದ್ದಾರೆ. ಅದು ಏನು ಅಂತಾ ಕೇಳಿದರೆ ದರ್ಶನ್ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಥ್ರಿಲ್ ಆಗೋದು ಗ್ಯಾರಂಟಿ. ಕಳೆದ ಬಾರಿ ಪುನೀತ್'ಗೆ ದರ್ಶನ್ ಸಹಾಯ ಮಾಡಿದ್ದು. ಆದರೆ ಈ ಬಾರಿ ಪವರ್'ಸ್ಟಾರ್ ದರ್ಶನ್'ಗಾಗಿ ಆ ತ್ಯಾಗ ಮಾಡ್ತಾ ಇದ್ದಾರೆ.

ಈ ವರ್ಷದ ದಸರಾ ಹಬ್ಬಕ್ಕೆ ದರ್ಶನ್ ಅಭಿನಯದ ತಾರಕ್ ಹಾಹೂ ಪುನೀತ್ ನಟಿಸಿರೋ ಅಂಜನೀಪುತ್ರ ರಿಲೀಸ್ ಆಗುತ್ತೆ ಅಂತಾ ಹೇಳಲಾಗುತ್ತಿದೆ. ಆದರೆ ದರ್ಶನ್ ತಾರಕ್ ಸಿನಿಮಾ ರಿಲೀಸ್ ನಂತರ, ಪುನೀತ್ ರಾಜ್ ಕುಮಾರ್ ಅಂಜನೀಪುತ್ರ ರಿಲೀಸ್ ಮಾಡುವ ಮೂಲಕ ಪವರ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್'ಗೆ ತ್ಯಾಗ ಮಾಡ್ತಾ ಇದ್ದಾರೆ.

ಈ ಹಿಂದೆ ಪುನೀತ್ ರಾಜ್ ಕುಮಾರ್ ನಟಿಸಿದ್ದ ರಾಜಕುಮಾರ ಸಿನಿಮಾ ರಿಲೀಸ್ ಆಗಿ, ಮೂರು ವಾರಗಳ ನಂತರ ದರ್ಶನ್ ಚಕ್ರವರ್ತಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ಪವರ್'ಸ್ಟಾರ್'ಗೆ ದರ್ಶನ್ ಸಹಾಯ ಮಾಡಿದ್ದರು. ಇದೀಗ ಪುನೀತ್ ದರ್ಶನ್ ತಾರಕ್ ಬಂದ ಮೇಲೆ ತಾನು ಬರುವುದಾಗಿ ಹೇಳಿದ್ದಾರೆ. ಸ್ಟಾರ್ ನಟರ ನಡುವೆ ಸ್ಪರ್ಧೆ ಇದೆ ಜೊತೆಗೆ ಇಂಥ ಒಳ್ಳೆಯ ಸ್ನೇಹವೂ ಇದೆ ಅನ್ನೋದಕ್ಕೆ ಇದೇ ಸಾಕ್ಷಿ. ಅದೇ ರೀತಿ ಈ ಬಾರಿ ದರ್ಶನ್ ಸಿನಿಮಾ ರಿಲೀಸ್ ನಂತರ ಪುನೀತ್ ಅಂಜನೀಪುತ್ರ ಎರಡು ವಾರಗಳ ಗ್ಯಾಪ್​ನಲ್ಲಿ ರಿಲೀಸ್ ಆಗಲಿದೆ. ಇದು ಸಾಕು ಅಲ್ವಾ ಪುನೀತ್ ಮತ್ತು ದರ್ಶನ್ ಒಳ್ಳೆಯ ಸ್ನೇಹಿತರು ಅನ್ನೋದಿಕ್ಕೆ.

- ರವಿಕುಮಾರ್ ಎಂಕೆ, ಸುವರ್ಣ ನ್ಯೂಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!