ನಟಿಗೆ ಮೋಸ ಮಾಡಿ ‘ಗೀತಾ’ ಹಿಟ್ ಆಯ್ತಾ? ಶಾನ್ವಿ ಬರೆದ್ರು ಅಸಮಾಧಾನ ಪತ್ರ!

Published : Oct 04, 2019, 02:13 PM IST
ನಟಿಗೆ ಮೋಸ ಮಾಡಿ ‘ಗೀತಾ’ ಹಿಟ್ ಆಯ್ತಾ? ಶಾನ್ವಿ ಬರೆದ್ರು ಅಸಮಾಧಾನ ಪತ್ರ!

ಸಾರಾಂಶ

ಗೋಕಾಕ್‌ ಚಳವಳಿಯ ಹಿನ್ನೆಲೆಗೆ ಕನೆಕ್ಟ್ ಆದ ಕತೆ ಎನ್ನುವ ಕಾರಣಕ್ಕೆ ಆರಂಭದಿಂದ ಸಾಕಷ್ಟುನಿರೀಕ್ಷೆ ಹುಟ್ಟಿಸಿ, ಸಕ್ಸಸ್ ಜೊತೆ ಮುನ್ನುಗ್ಗುತ್ತಿರುವ ಸಿನಿಮಾ ‘ಗೀತಾ’. ಈ ಚಿತ್ರದ ನಟಿ ಶಾನ್ವಿ ಶ್ರೀವಾಸ್ತವ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏನದು? ಇಲ್ಲಿದೆ ನೋಡಿ 

ರಕ್ಷಿತ್ ಶೆಟ್ಟಿ ಜೊತೆ ಅವನೇ ಶ್ರೀಮನ್ನಾರಾಮಯಣ, ಗೋಲ್ಡನ್ ಗಣಿ ಜೊತೆ ಗೀತಾ , ರವಿಚಂದ್ರನ್ ಜೊತೆ ರವಿಚಂದ್ರ ಸಿನಿಮಾದಲ್ಲಿ ನಟಿಸಿರುವ ವಾರಣಾಸಿ ಮೂಲದ ಚೆಲುವೆ ಶಾನ್ವಿ ಶ್ರೀವಾಸ್ತವ್. 

ಎರಡು ವರ್ಷದ ಬಳಿಕ ಎರಡು ಶೇಡ್ ನಲ್ಲಿ ಶಾನ್ವಿ!

ಶಾನ್ವಿ ಶ್ರೀವಾಸ್ತವ್, ಗೋಲ್ಟನ್ ಗಣಿ ಜೊತೆ ಮಾಡಿರುವ ‘ಗೀತಾ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಗೀತಾ ಯಶಸ್ಸಿನ ಖುಷಿಯಲ್ಲಿದ್ದಾರೆ ಮಾಸ್ಟರ್ ಪೀಸ್ ಚೆಲುವೆ. ಕನ್ನಡ ಸಿನಿಮಾ ಬಗ್ಗೆ ದಿಢೀರನೇ ಪೋಸ್ಟೊಂದನ್ನು ಹಾಕಿದ್ದು ಕುತೂಹಲಕ್ಕೆ ಕಾರಣವಾಗಿದೆ. 

ನಾವು ಒಳ್ಳೆಯ ಸಿನಿಮಾಗಳನ್ನು ಮಾಡಿದರೆ ನೋಡುವುದಕ್ಕೆ ಯಾರಿಗಿಷ್ಟವಿಲ್ಲ ಹೇಳಿ? ಪ್ರೇಕ್ಷಕರಿಗಾಗಿ ಒಳ್ಳೆಯ ಸಿನಿಮಾಗಳನ್ನು ಮಾಡಲು ಯಾರು ಬಯಸುವುದಿಲ್ಲ ಹೇಳಿ? ಸೋಲು-ಗೆಲುವನ್ನು ಲೆಕ್ಕಿಸದೇ ಒಳ್ಳೆಯ ಸಿನಿಮಾಗಳನ್ನು ನಾವು ಕೊಡಬೇಕು ಎಂದಿದ್ದಾರೆ. 

ಸಿನಿಮಾ ಮಾಡುವಾಗ ಕಲಾವಿದರಿಗೆ ನಿರ್ದೇಶಕರು ಕಥೆಯನ್ನು ಸರಿಯಾಗಿ ವಿವರಿಸಬೇಕು. ತೆರೆ ಮೇಲೆ ಹೇಗೆ ಬರುತ್ತದೆ ಎಂಬುದನ್ನೂ ವಿವರಿಸಬೇಕು. ಕಲಾವಿದರಿಗೆ ತಿಳಿಸದೇ ಬದಲಾವಣೆಗಳನ್ನು ಮಾಡಿದರೆ ಅದು ಅವರಿಗೆ ಅವಮಾನ ಮಾಡಿದಂತೆ. ಚಿತ್ರದ ಬಗ್ಗೆ ಸುಳ್ಳು ಭರವಸೆ ಕೊಟ್ಟು ನಟರಿಗೆ ಮೋಸ ಮಾಡಬಾರದು. ಇದು ಸಹಿಸಿಕೊಳ್ಳುವಂತಹ ವಿಚಾರವಲ್ಲ. ಒಳ್ಳೆಯ ರೀತಿಯಲ್ಲಿ ಸಿನಿಮಾ ಮಾಡಲು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಶಾನ್ವಿ ಯಾಕೆ ಇದ್ದಕ್ಕಿದ್ದಂತೆ ಈ ಪೋಸ್ಟ್ ಹಾಕಿದ್ರು ಅನ್ನೋದು ಇನ್ನೂ ಗೊತ್ತಾಗಿಲ್ಲ. ಯಾಕೆ ಬೇಸರ ವ್ಯಕ್ತಪಡಿಸಿದ್ರು ಎಂಬ ಕುತೂಹಲ ಮೂಡಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?