ಬೇಡದ ಜಾಗದಲ್ಲಿ ಬೇಡದ ವಿಷ್ಯ ಮಾತಾಡಿರೋದು ಸರಿಯಲ್ಲ‌: ಕಮಲ್ ಹಾಸನ್ ವಿವಾದಕ್ಕೆ ಎಂಟ್ರಿ ಕೊಟ್ಟ ವಸಿಷ್ಠ ಸಿಂಹ!

Published : May 30, 2025, 03:27 PM ISTUpdated : May 30, 2025, 04:44 PM IST
Vasishta Simha Kamal Haasan

ಸಾರಾಂಶ

'ಕಮಲ್ ಹಾಸನ್ ಕ್ಷಮೆ ಕೇಳಿ ದೊಡ್ಡೋರು ಆಗಬಹುದಿತ್ತು.. ಬೇಡದ ಜಾಗದಲ್ಲಿ.. ಬೇಡದ ವಿಷ್ಯ ಮಾತಾಡಿರೋದು ಸರಿಯಲ್ಲ‌.. ಪ್ರೀತಿ ಇರೋ ಕಡೆ.. ಕ್ಷಮೆ ಮತ್ತು ಗೌರವನೂ ಇರಬೇಕು. ಈ ಥರಾ ಹೇಳಿಕೆಯಿಂದ ಬೇರೆ ನಟರಿಗೂ ತೊಂದರೆ…

 

ತಮಿಳು ನಟ ಕಮಲ್ ಹಾಸನ್ (Kamal Haasan) ಅವರು ಕನ್ನಡ ಭಾಷೆಗೆ ಅವಮಾನ ಮಾಡಿರುವ ವಿವಾದಕ್ಕೆ ಈಗ ಕ್ಷಣಕ್ಕೊಂದು ತಿರುವು ತೆಗೆದುಕೊಳ್ಳುತ್ತಿದೆ. ಇದೀಗ ಈ ವಿವಾದಕ್ಕೆ ಕನ್ನಡ ಮೂಲದ ಬಹುಭಾಷಾ ನಟ ವಸಿಷ್ಠ ಸಿಂಹ (Vasishta Simha) ಎಂಟ್ರಿ ಕೊಟ್ಟಿದ್ದಾರೆ. ಅಂದ್ರೆ, ಅವರೇನೂ ವಿವಾದಾತ್ಮಕ ಹೇಳಿಕೆ ನೀಡಿಲ್ಲ, ಬದಲಾಗಿ ಒಬ್ಬ ನಟರಾಗಿ, ಕಲಾವಿದರಾಗಿ ಅವರೆಲ್ಲ ಅನುಭವಿಸುತ್ತಿರುವ ಸೂಕ್ಷ್ಮ ಪರಿಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ಹಾಗಿದ್ದರೆ ನಟ ವಸಿಷ್ಠ ಸಿಂಹ ಅವರು ಅದೇನು ಹೇಳಿದ್ದಾರೆ? ನೋಡಿ..

'ಈ ಭಾಷೆ ಗಲಾಟೆ: ನಟರಿಗೆ ಸಂದಿಗ್ಧ ಪರಿಸ್ಥಿತಿ' ಎನ್ನುವ ಧಾಟಿಯಲ್ಲಿ ನಟ ವಸಿಷ್ಠ ಸಿಂಹ ಮಾತನ್ನಾಡಿದ್ದಾರೆ. ಕಮಲ್‌ ಹಾಸನ್ ಹೇಳಿಕೆ ನಟ ವಸಿಷ್ಠ ಸಿಂಹ ರಿಯಾಕ್ಷನ್ ಕೊಟ್ಟಿದ್ದಾರೆ. 'ಕಮಲ್ ಹಾಸನ್ ಕ್ಷಮೆ ಕೇಳಿ ದೊಡ್ಡೋರು ಆಗಬಹುದಿತ್ತು.. ಬೇಡದ ಜಾಗದಲ್ಲಿ.. ಬೇಡದ ವಿಷ್ಯ ಮಾತಾಡಿರೋದು ಸರಿಯಲ್ಲ‌.. ಪ್ರೀತಿ ಇರೋ ಕಡೆ.. ಕ್ಷಮೆ ಮತ್ತು ಗೌರವನೂ ಇರಬೇಕು. ಈ ಥರಾ ಹೇಳಿಕೆಯಿಂದ ಬೇರೆ ನಟರಿಗೂ ತೊಂದರೆ ಆಗಲಿದೆ.. ಯಾರೋ ಒಬ್ಬರ ಹೇಳಿಕೆಯಿಂದ ಇಡೀ ವಾತಾವರಣ ಹಾಳಾಗಲಿದೆ..

ಈ ನನ್ನ ತಮಿಳು ಸಿನಿಮಾ ಬಿಡುಗಡೆಗೆ ಸಿದ್ಧವಿದೆ.. ನಾನು ಅಲ್ಲಿಗೆ ಹೋದಾಗ ಅವ್ರು ಬೇಕು ಅಂತಲೇ ಟ್ರಿಗರ್ ಮಾಡಬಹುದು.. ಇಷ್ಟರಲ್ಲೇ ರಜಿನಿಕಾಂತ್ ಸಿನಿಮಾನೂ ಬಿಡುಗಡೆಗೆ ಸಿದ್ಧವಿದೆ.. ಅವ್ರ ಸಿನಿಮಾಗೂ ತೊಂದರೆ ಆಗಬಹುದು.. ಆದ್ರಿಂದ ಭಾಷೆ ಅನ್ನೋ ಸೆನ್ಸಿಟಿವ್ ವಿಚಾರವನ್ನು ಮಾತಾಡುವಾಗ ಹುಷಾರಾಗಿ ಇರಬೇಕು. ಯಾರನ್ನೂ ಕೆಣಕುವಂತ ಹೇಳಿಕೆ ನೀಡಬಾರದು..' ಎಂದಿದ್ದಾರೆ ನಟ ವಸಿಷ್ಠ ಸಿಂಹ.

ಕನ್ನಡಕ್ಕೆ ಅವಮಾನ ಮಾಡಿದ್ದ ತಮಿಳು ನಟ ಕಮಲ್ ಹಾಸನ್ (Kamal Haasan) , ಮತ್ತೆ ತಾವು 'ಕ್ಷಮೆ ಕೇಳೋದಿಲ್ಲ' ಎಂದಿದ್ದಾರೆ. ಅಷ್ಟೇ ಅಲ್ಲ, ನಾನೇನೂ ತಪ್ಪು ಮಾಡಿಲ್ಲ, ಆದರೆ ನ್ಯಾಯದ ಮೇಲೆ ನಂಬಿಕೆ ಇದೆ, ನಾನ್ ಹೇಳಿದ್ದೇ ಸರಿ ಎಂದಿದ್ದಾರೆ ನಟ ಕಮಲ್ ಹಾಸನ್. ನಟ ಕಮಲ್ ಹಾಸನ್ ಕನ್ನಡಪರ ಹೋರಾಟಗಾರರ ಪ್ರತಿಭಟನೆಗೆ ಬಗ್ಗದೇ ಮತ್ತೆ ತಮ್ಮ ಮೊಂಡಾಟ ಮುಂದುವರಿಸಿದ್ದಾರೆ. ತಮ್ಮ ಮೊದಲಿನ ಹೇಳಿಕೆಗೇ ಸ್ಟಿಕ್ ಆಗಿರುವ ನಟ ಕಮಲ್ ಹಾಸನ್ ಅವರು ಇದೀಗ ಇನ್ನೂ ಹೆಚ್ಚು ತಮ್ಮ ಮಾತಿಗೆ ಅಂಟಿಕೊಂಡಿದ್ದು, ತಮ್ಮ ವರಸೆ ಮುಂದುವರಿಸಿದ್ದಾರೆ.

"ಇದು ಪ್ರಜಾಪ್ರಭುತ್ವ ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ... ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿಯೂ ನಿಜ... ಯಾರೂ ಇದನ್ನು ಅನುಮಾನಿಸುವುದಿಲ್ಲ... ನನಗೆ ಈ ಹಿಂದೆಯೂ ಬೆದರಿಕೆ ಹಾಕಲಾಗಿತ್ತು... ತಪ್ಪಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ.. ತಪ್ಪೇ ಮಾಡಿಲ್ಲ ಎಂದಮೇಲೆ ಕ್ಷಮೆ ಕೇಳಬೇಕಿಲ್ಲ... ನನ್ನ‌ನಿರ್ಧಾರಕ್ಕೆ ಬದ್ಧವಾಗಿದ್ದೇನೆ" ಎಂದಿದ್ದಾರೆ.

ಇನ್ನು, ಕಮಲ್ ಹಾಸನ್ ಮತ್ತೆ ಮೊಂಡಾಟದ ಹೇಳಿಕೆ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber) ಖಂಡನೆ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, 'ಇಡೀ ಕರ್ನಾಟಕ ಕಮಲ್ ಹಾಸನ್ ವಿರುದ್ಧ ಕೆರಳಿದೆ. ಚಿತ್ರಮಂದಿರದವರೇ ಈಗ ಸಿನಿಮಾ ರಿಲೀಸ್ ಮಾಡಲ್ಲ ಅಂತಾ ಹೇಳಿದ್ದಾರೆ. ವಿತರಕರು ಕೂಡ ಇದೇ ನಿರ್ಧಾರಕ್ಕೆ ಬಂದಿದ್ದಾರೆ. ಈಗ ಮತ್ತೆ ಕ್ಷಮೆ ಕೇಳಲ್ಲ ಅಂತ ಹೇಳಿದ್ದಾರೆ.

ನಟ ಕಮಲ್ ಹಾಸನ್ ಅವರಿಗೆ ರಾಜಕೀಯ ಕಾರಣ ಇರಬಹುದು. ಏನಾದ್ರೂ ಕಾರಣ ಇರುತ್ತೆ. ಈ ತರ ಹಿಂದೆ ಘಟನೆಗಳು ಆದಾಗ ಅನೇಕರು ಕ್ಷಮೆಯಾಚನೆ ಮಾಡಿದ್ದಾರೆ. ರಜನೀಕಾಂತ್ ಸೇರಿದಂತೆ ಸೋನು ನಿಗಮ್ ಕೂಡ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ, ಕಮಲ್ ಹಾಸನ್ ಈಗ್ಲೂ ಕೂಡ ನಾನು ಕ್ಷಮೆ ಕೇಳಲ್ಲ ಅಂತ ಹೇಳುತ್ತಿದ್ದಾರೆ. ಯಾಕೆ ಇಂತಹ ನಿರ್ಧಾರ ಅಂತ ಗೊತ್ತಿಲ್ಲ!

ಅಂದೊಮ್ಮೆ ನಮ್ಮ ರಜನಿಕಾಂತ್ ಕೂಡ ಕ್ಷಮೆ ಕೇಳಿದ್ರು. ಆದ್ರೆ ಕಮಲ್ ಹಾಸನ್ ನಾನು ತಪ್ಪೆ ಮಾಡಲ್ಲ ಕ್ಷಮೆ ಕೇಳಲ್ಲ ಅಂತಾರೆ. ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ರಿಲೀಸ್ ಮಾಡಲ್ಲ ಅಂತ ಹೇಳುತ್ತಿಲ್ಲ, ಕನ್ನಡಪರ ಹೋರಾಟಗಾರರ ಜೊತೆ ನಮ್ಮ ಕನ್ನಡ ಸಿನಿಮಾ ರಂಗ ಇರುತ್ತೆ. ನಾವು ಕಾನೂನು ಪರವಾಗಿ ಏನು ಹೇಳ್ತಾ ಇಲ್ಲ

'ಇಲ್ಲಿ ಗಲಾಟೆ ಆಗ್ತಾ ಇದೆ. ನಾವು ಸಿನಿಮಾ ರಿಲೀಸ್ ಮಾಡಲ್ಲ ಅಂತ ವಿತರಕರು ಪ್ರದರ್ಶಕರು ಹೇಳ್ತಾ ಇದ್ದಾರೆ. ನಮ್ಮ ಕನ್ನಡ ಪರ ಹೋರಾಟಗಾರರು ರಾಜಕಾರಣಿಗಳು ಕಮಲ್ ಹಾಸನ್ ವಿರುದ್ಧ ಸಿಟ್ಟಾಗಿದ್ದಾರೆ..' ಎಂದು ಫಿಲ್ಮ್ ಛೇಂಬರ್ ಅಧ್ಯಕ್ಷ ನರಸಹುಲು ಹೇಳಿಕೆ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!