ಅಂಬರೀಶ್ ಆಪ್ತ ಅಪಘಾತದಲ್ಲಿ ಸಾವು | ರಫೀಕ್ ಎಂಬುವವರು ಮೃತ ದುರ್ದೈವಿ | ಅಂಬರೀಶ್ ಪುತ್ರನ ಹುಟ್ಟುಹಬ್ಬಕ್ಕೆ ತೆರಳುವ ವೇಳೆ ದುರ್ಘಟನೆ
ಮಂಡ್ಯ (ಅ. 03): ಲಾರಿ ಹರಿದು ಭೀಕರ ಅಪಘಾತದಲ್ಲಿ ನಟ ಅಂಬರೀಶ್ ಆಪ್ತ ರಫೀಕ್ ಎಂಬುವವರು ಸಾವನ್ನಪ್ಪಿದ್ದಾರೆ.
ರಫೀಕ್ ಸಾಕಷ್ಟು ವರ್ಷ ಗಳಿಂದ ಅಂಬರೀಶ್ ಕಟ್ಟಾ ಬೆಂಬಲಿಗರಾಗಿದ್ದರು.ಮಂಡ್ಯ ನಗರಸಭೆಯ ಮಾಜಿ ಸದಸ್ಯನಾಗಿ ನಿಷ್ಟಾವಂತ ಕೈ ಕಾರ್ಯಕರ್ತನಾಗಿದ್ದರು. ರಫೀಕ್ ಅಂತ್ಯಕ್ರಿಯೆ ಮಧ್ಯಾಹ್ನ ವೇಳೆಗೆ ನಡೆಯಲಿದ್ದು ಅಂಬರೀಶ್ ಕೂಡ ಕಾರ್ಯದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ.
ಇಂದು ಅಂಬರೀಶ್ ಪುತ್ರ ಅಭಿಜಿತ್ ಹುಟ್ಟುಹಬ್ಬವಿದ್ದು ರಫೀಕ್ ಅದಕ್ಕಾಗಿ ಬೆಂಗಳೂರಿಗೆ ತೆರೆಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.