
ಬೆಂಗಳೂರು : ನಟ ರಕ್ಷಿತ್ ಶೆಟ್ಟಿಜತೆಗಿನ ಬ್ರೇಕಪ್ ಸುದ್ದಿಯನ್ನು ನಟಿ ರಶ್ಮಿಕಾ ಮಂದಣ್ಣ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಮೊಟ್ಟಮೊದಲ ಬಾರಿಗೆ ತೆಲುಗು ಮಾಧ್ಯಮಗಳ ಮುಂದೆ ಮಾತನಾಡಿರುವ ರಶ್ಮಿಕಾ ಮಂದಣ್ಣ, ನಾನು ಮತ್ತು ರಕ್ಷಿತ್ ಶೆಟ್ಟಿಪರಿಚಯವಾಗಿದ್ದು ಕಿರಿಕ್ ಪಾರ್ಟಿ ಚಿತ್ರದ ಮೂಲಕ.
ನಮ್ಮ ಈ ವೃತ್ತಿ ಪರಿಚಯ ಪ್ರೀತಿಯಾಗಿ ಬದಲಾಗುವುದಕ್ಕೆ ತುಂಬಾ ದಿನ ಹಿಡಿಯಲಿಲ್ಲ. ಕೊನೆಗೆ ನಮ್ಮಿಬ್ಬರ ಪ್ರೀತಿಯ ವಿಷಯವನ್ನು ನಾನೇ ಮೊದಲು ನಮ್ಮ ತಾಯಿ ಅವರ ಬಳಿ ಹೇಳಿಕೊಂಡೆ. ನಮ್ಮಿಬ್ಬರ ಪ್ರೀತಿ ವಿಷಯಕ್ಕೆ ನಮ್ಮ ತಾಯಿ ಯಾವುದೇ ರೀತಿಯಲ್ಲೂ ವಿರೋಧ ವ್ಯಕ್ತಪಡಿಸಲಿಲ್ಲ. ಸಂತೋಷವಾಗಿ ಒಪ್ಪಿಕೊಂಡರು ಎಂದು ಹೇಳಿದ್ದಾರೆ.
ಎರಡು ಕುಟುಂಬಗಳ ಒಪ್ಪಿಗೆಯಿಂದಲೇ ನಾವಿಬ್ಬರೂ ನಿಶ್ಚಿತಾರ್ಥ ಕೂಡ ಮಾಡಿಕೊಂಡೆವು. ಆದರೆ ಬರಬರುತ್ತಾ ನಮ್ಮಿಬ್ಬರ ನಡುವೆ ಕೆಲವು ಕಾರಣಗಳಿಗೆ ಮನಸ್ತಾಪ ಉಂಟಾಯಿತು. ಈ ಮನಸ್ತಾಪದಿಂದ ಇಬ್ಬರು ಜೊತೆಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅನಿಸಿತು. ಈ ಕಾರಣಕ್ಕೋಸ್ಕರ ನಾನು ಮತ್ತು ರಕ್ಷಿತ್ ಶೆಟ್ಟಿದೂರವಾಗಿದ್ದು ಈ ಬಗ್ಗೆ ಯಾರಿಗೂ ಏನೂ ಯಾರಿಗೂ ಏನೂ ಬೇಸರವಿಲ್ಲ. ಖುಷಿಯಿಂದಲೇ ದೂರವಾಗಿದ್ದೇವೆ ಎಂದು ರಶ್ಮಿಕಾ ಹೇಳಿದ್ದಾರೆ. ಈಗ ನನಗೆ ಸಿನಿಮಾ ಸಿನಿಮಾ ಬಿಟ್ಟು ಬೇರೆ ಯಾವುದೇ ರೀತಿಯ ಯೋಜನೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.