
ಇದೀಗ ನಿರ್ದೇಶಕರು ಬದಲಾಗಿರುವ ಸುದ್ದಿ ಬಂದಿದೆ. ಉಳಿದವರು ಕಂಡಂತೆ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಪಿಕೆ ರಾಹುಲ್ ಹೊಸ ನಿರ್ದೇಶಕರು. ರಾಹುಲ್ ಈಗಷ್ಟೇ ಉತ್ತರಾ ಎಂಬ ಕಿರುಚಿತ್ರ ನಿರ್ದೇಶಿಸಿದ್ದಾರೆ. ಅದರಲ್ಲಿ ಬಾಲಾಜಿ ಮನೋಹರ್ ಮತ್ತು ಪ್ರಮೋದ್ ನಟಿಸಿದ್ದಾರೆ. ಪಿಕೆ ರಾಹುಲ್ ಬಗ್ಗೆ ರಕ್ಷಿತ್ಗೂ ವಿಶೇಷ ಮೆಚ್ಚುಗೆ. ಚಾರ್ಲಿ ಚಿತ್ರದ ನಂತರ ಶುರುವಾಗಲಿರುವ ‘ರಿಚ್ಚಿ’ಯ ಕತೆಯನ್ನು ಬರೆದವರು ರಕ್ಷಿತ್. ರಾಹುಲ್ ಜೊತೆ ಚಂದ್ರಜಿತ್ ಸೇರಿ ಚಿತ್ರಕತೆ ಸಂಭಾಷಣೆ ಬರೆಯುತ್ತಿದ್ದಾರೆ. ಪುಷ್ಕರ್ ನಿರ್ಮಾಣದ ಈ ಸಿನಿಮಾದ ತಂತ್ರಜ್ಞರ ಹೆಸರು ಒಂಚೂರು ಬೇಗ ಘೋಷಣೆ ಆಗಿದೆ. ಯಾಕೆಂದರೆ, ಸಿನಿಮಾ ಶುರುವಾಗುವುದಕ್ಕೆ ಇನ್ನೂ ಒಂದು ವರ್ಷ ಕಾಯಬೇಕು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.