ಅಣ್ಣಾವ್ರ ಕುಟುಂಬದ ಆಸ್ತಿ ಹಂಚಿಕೆಯಾಯ್ತಾ..?

Published : Oct 17, 2016, 07:23 AM ISTUpdated : Apr 11, 2018, 12:35 PM IST
ಅಣ್ಣಾವ್ರ ಕುಟುಂಬದ ಆಸ್ತಿ ಹಂಚಿಕೆಯಾಯ್ತಾ..?

ಸಾರಾಂಶ

ತಾಳವಾಡಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದು ನಿಜ, ಆಸ್ತಿ ಪಾಲು ಮಾಡಿಕೊಳ್ಳಲು ಅಲ್ಲ. ನಮ್ಮ ಮಧ್ಯೆ ಯಾವುದೇ ತೊಂದರೆ ಇಲ್ಲ. ಒಗ್ಗಟ್ಟಿನಿಂದಲೇ ಇದ್ದೇವೆ. ಅಷ್ಟೇ ಚೆನ್ನಾಗಿಯೂ ಇದ್ದೇವೆ. ಆಂತಾ ಸುವರ್ಣ ನ್ಯೂಸ್`ಗೆ ಪೋನ್ ಮೂಲಕ ಹೇಳಿಕೆ ಕೊಟ್ಟಿದ್ದಾರೆ ರಾಘವೇಂದ್ರ ರಾಜ್​ ಕುಮಾರ್.

ಬೆಂಗಳೂರು(ಅ.17): ಡಾ. ರಾಜ್​ ಕುಮಾರ್ ಮಕ್ಕಳು. ಆಸ್ತಿಯನ್ನ ಹಂಚಿಕೊಂಡಿದ್ದಾರೆ. ಸಮ ಪಾಲು ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ರಾಜ್ ಫ್ಯಾಮಿಲಿ ಡಿವೈಡ್ ಆಗಿದೆ. ಇಂತಹ ಸುದ್ದಿಗಳೂ ಹರಿದಾಡುತ್ತಿವೆ.

ಈ ಒಂದು ಬೆಳವಣಿಗೆಗೆ ಕಾರಣವೂ ಇದೆ. ಗಾಂಧಿನಗರದ ವಜ್ರೇಶ್ವರಿ ಆಫೀಸ್ ರಿನೋವೇಷನ್ ನಡೆಯುತ್ತಿದೆ. ಅದಕ್ಕೆ ಈ ಮಾತು ಕೇಳಿಬರುತ್ತಾ ಇದೆ. ಇಂದು ತಾಳವಾಡಿಯ ಸಬ್ ರಿಜಿಸ್ಟ್ರಾರ್ ಆಫೀಸ್` ಗೂ ಶಿವರಾಜ್​ ಕುಮಾರ್, ರಾಘವೇಂದ್ರ ರಾಜ್​ ಕುಮಾರ್ ಹಾಗೂ ಪುನೀತ್ ರಾಜ್​ ಕುಮಾರ್ ತೆರೆಳಿದ್ದರು. ಇದರಿಂದ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.

ಆದರೆ, ರಾಘವೇಂದ್ರ ರಾಜ್ ಕುಮಾರ್ ಹೇಳೊದೇ ಬೇರೆ. ತಾಳವಾಡಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದು ನಿಜ, ಆಸ್ತಿ ಪಾಲು ಮಾಡಿಕೊಳ್ಳಲು ಅಲ್ಲ. ನಮ್ಮ ಮಧ್ಯೆ ಯಾವುದೇ ತೊಂದರೆ ಇಲ್ಲ. ಒಗ್ಗಟ್ಟಿನಿಂದಲೇ ಇದ್ದೇವೆ. ಅಷ್ಟೇ ಚೆನ್ನಾಗಿಯೂ ಇದ್ದೇವೆ ಆಂತಾ ಸುವರ್ಣ ನ್ಯೂಸ್`ಗೆ ಪೋನ್ ಮೂಲಕ ಹೇಳಿಕೆ ಕೊಟ್ಟಿದ್ದಾರೆ ರಾಘವೇಂದ್ರ ರಾಜ್​ ಕುಮಾರ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪಘಾತದಲ್ಲಿ ತಂದೆ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ರಾಜ್ಯ ಪ್ರಶಸ್ತಿ ವಿಜೇತ ಯುವ ನಟ ಶವವಾಗಿ ಪತ್ತೆ
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ