
ಅಭಿಮಾನದ ಹೆಸರಲ್ಲಿ ಅಪಾಯಕ್ಕೆ ಸಿಲುಕಬೇಡಿ ಅಂತ ರಜನಿಕಾಂತ್ ಯುವಕರಿಗೆ ಎಚ್ಚರಿಸಿದ್ದಾರೆ. ಓದು, ಭವಿಷ್ಯದ ಕಡೆ ಗಮನ ಕೊಡಿ. ಕುಡಿತ, ಡ್ರಗ್ಸ್ಗೆ ದಾಸರಾಗಬೇಡಿ. ಹೀರೋಗಳ ಹಿಂದೆ ಬಿದ್ದು ಏನಾದ್ರೂ ಹೆಚ್ಚು ಕಮ್ಮಿಯಾದ್ರೆ ನಷ್ಟ ನಿಮಗೇನೇ, ಹಾಗಾಗಿ ನಿಮ್ಮ ಸುರಕ್ಷತೆಗೆ ಮೊದಲ ಆದ್ಯತೆ ಕೊಡಿ ಅಂತ ಅವರು ನೆನಪಿಸಿದ್ದಾರೆ. ಸ್ಟಾರ್ಗಳ ಮೇಲಿನ ಅತಿಯಾದ ಅಭಿಮಾನದ ಬಗ್ಗೆ ಸೂಪರ್ಸ್ಟಾರ್ ರಜನಿಕಾಂತ್ ಯುವಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಯುವಕರು ತಮ್ಮ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕು, ಡ್ರಗ್ಸ್ ಅಥವಾ ಮದ್ಯಕ್ಕೆ ಅಡಿಕ್ಟ್ ಆಗಬಾರದು ಅಂತ ಅವರು ಹೇಳಿದ್ದಾರೆ. ನಟ ವಿಜಯ್ ಅಭಿಮಾನಿಗಳ ಕರೂರು ದುರಂತವನ್ನು ನೆನಪಿಸಿಕೊಂಡು, ಹೀರೋಗಳ ಹಿಂದೆ ಬಿದ್ದು ಏನಾದ್ರೂ ಗಾಯ ಮಾಡಿಕೊಂಡರೆ ನಷ್ಟ ಅವರಿಗೇ ಹೊರತು ಬೇರೆಯವರಿಗಲ್ಲ ಅಂತ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.
"ಯುವಕರು ತಮ್ಮ ಓದು ಮತ್ತು ಭವಿಷ್ಯದ ಬಗ್ಗೆ ಸೀರಿಯಸ್ ಆಗಿ ಯೋಚಿಸಬೇಕು. ಈ ವಯಸ್ಸಿನಲ್ಲಿ ಓದಿನ ಕಡೆ ಗಮನ ಹರಿಸುವುದೇ ಅವರ ಮುಖ್ಯ ಜವಾಬ್ದಾರಿ. ಯುವಕರು ಸ್ವಲ್ಪ ಜಾಗರೂಕರಾಗಿರಬೇಕು. ಈ ರೀತಿ ಹೀರೋಗಳ ಹಿಂದೆ ಬಿದ್ದು ಏನಾದ್ರೂ ಗಾಯ ಮಾಡಿಕೊಂಡರೆ, ನಷ್ಟ ಆಗೋದು ನಿಮಗೇ. ಯಾವಾಗಲೂ ಸುರಕ್ಷತೆಗೆ ಮೊದಲ ಆದ್ಯತೆ ಕೊಡಬೇಕು. ನೀವು ಯಾವಾಗಲೂ ಓದಿನ ಮೇಲೆ ಗಮನ ಇಟ್ಟು, ಆರೋಗ್ಯವಾಗಿರಬೇಕು. ದಯವಿಟ್ಟು ಡ್ರಗ್ಸ್ ಅಥವಾ ಕುಡಿತಕ್ಕೆ ದಾಸರಾಗಬೇಡಿ.
ಇದರಿಂದ ನಿಮ್ಮ ಲೈಫ್ ಮಾತ್ರವಲ್ಲ, ನಿಮ್ಮ ಪೋಷಕರು ಮತ್ತು ಪ್ರೀತಿಪಾತ್ರರ ಜೀವನವೂ ನರಕವಾಗಬಹುದು," ಎಂದು ರಜನಿಕಾಂತ್ ಹೇಳಿದ್ದಾರೆ. ಇನ್ನು ರಜನಿಕಾಂತ್ ಅವರ ಮುಂದಿನ ಸಿನಿಮಾ ಬಗ್ಗೆ ಹೇಳುವುದಾದರೆ, ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ 'ಜೈಲರ್ 2' ಚಿತ್ರದಲ್ಲಿ ಅವರು ನಟಿಸಲಿದ್ದಾರೆ. ಈ ಚಿತ್ರದಲ್ಲಿ ಮೋಹನ್ಲಾಲ್, ಶಾರುಖ್ ಖಾನ್, ಶಿವರಾಜ್ಕುಮಾರ್, ವಿಜಯ್ ಸೇತುಪತಿ, ವಿನಾಯಕನ್, ಸೂರಜ್ ವೆಂಜರಮೂಡು ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.