
‘ಇದೊಂದು ಇಂಟ್ರಡಕ್ಷನ್ ಸಾಂಗ್. ಚಿತ್ರದ ಟೈಟಲ್ ಭರಾಟೆ ಪದದ ನಿಜ ಅರ್ಥವನ್ನು ಹೇಳುವುದರ ಜತೆಗೆ ಚಿತ್ರವೇನು ಅಂತ ವರ್ಣಿಸುವ ಹಾಡು. ನನ್ನದೇ ಸಾಹಿತ್ಯ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಆ ಹಾಡಿಗೆ ಓರ್ವ ಜನಪ್ರಿಯ ನಟಿಯನ್ನು ಕರೆ ತರಬೇಕೆನ್ನುವುದು ನನ್ನ ಯೋಚನೆ ಆಗಿತ್ತು. ಯಾರು ಸೂಕ್ತ ಅಂತ ಸಾಕಷ್ಟುಆಲೋಚಿಸಿದೆ. ಕೊನೆಗೆ ಸೂಕ್ತ ಎನಿಸಿದ್ದು ರಚಿತಾ ರಾಮ್. ಅವರ ಆಗಮನವೇ ಒಂಥರ ಖುಷಿ ಕೊಟ್ಟಿದೆ’ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.
ಹಾಡಿನ ಚಿತ್ರೀಕರಣವನ್ನು ಅದ್ಧೂರಿಯಾಗಿ ಚಿತ್ರೀಕರಿಸಲು ಚಿತ್ರ ತಂಡ ಫ್ಲ್ಯಾನ್ ಹಾಕಿಕೊಂಡಿದೆ. ಅದ್ಧೂರಿ ಸೆಟ್ ರೆಡಿ ಆಗಿದೆ. ಮೋಹನ್ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಸಹ ಕಲಾವಿದರು ಸಾಥ್ ನೀಡುತ್ತಿದ್ದಾರೆ. ‘ಭರಾಟೆ’ಗೆ ಇನ್ನು ನಾಲ್ಕೈದು ದಿನಗಳ ಚಿತ್ರೀಕರಣ ಬಾಕಿಯಿದೆ. ಅದು ಮುಗಿದರೆ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಡಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.