ನಾನು ಸನಾತನ ಧರ್ಮ ಪಾಲಿಸುವ ಹಿಂದೂ, ನನ್ನ ಹಿಂದೆ ಆಂಜನೇಯ ಇದ್ದಾನೆ: ಪುಷ್ಪ ನಟಿ ಹೇಳಿಕೆ ವೈರಲ್

Published : Aug 14, 2026, 11:36 PM IST
Anasuya Bharadwaj

ಸಾರಾಂಶ

ಸನಾತನ ಧರ್ಮದ ಬಗ್ಗೆ ತಾನು ನೀಡಿದ್ದ ಹೇಳಿಕೆ ಕುರಿತು ನಟಿ ಅನಸೂಯಾ ಭಾರದ್ವಾಜ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಮಾತುಗಳನ್ನು ತಿರುಚಿ ಪ್ರಚಾರ ಮಾಡಲಾಗುತ್ತಿದೆ, ಯಾವುದೇ ಧರ್ಮವನ್ನು ಅವಮಾನಿಸುವ ಉದ್ದೇಶ ನನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ

ನಟಿ ಮತ್ತು ಖ್ಯಾತ ನಿರೂಪಕಿ ಅನಸೂಯಾ ಭಾರದ್ವಾಜ್ (Anasuya Bharadwaj) ಅವರು ಸನಾತನ ಧರ್ಮ, ಹಿಂದೂ ಧರ್ಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಟ್ರೋಲಿಂಗ್ ಬಗ್ಗೆ ನೀಡಿದ ಹೇಳಿಕೆಗಳು ದೊಡ್ಡ ವಿವಾದಕ್ಕೆ ಕಾರಣವಾಗಿವೆ. "ಜೈ ಶ್ರೀ ರಾಮ್ ಎಂದ ಮಾತ್ರಕ್ಕೆ ಎಲ್ಲರೂ ಒಳ್ಳೆಯವರಲ್ಲ, ಅವರಲ್ಲಿ ಕೆಲವರು ಒಳ್ಳೆಯವರಿದ್ದರೆ, ಇನ್ನು ಕೆಲವರು ದಾಳಿ ಮಾಡುವವರೂ ಇರುತ್ತಾರೆ" ಎಂದು ಅವರು ಹೇಳಿದ್ದಾರೆ ಎನ್ನಲಾದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ದೊಡ್ಡ ಚರ್ಚೆಗೆ ಕಾರಣವಾಯಿತು. ಅವರು ಸನಾತನ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದರು. ಈ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಅನಸೂಯಾ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕೆಲವರು ಉದ್ದೇಶಪೂರ್ವಕವಾಗಿ ನನ್ನ ಮಾತುಗಳನ್ನು ತಿರುಚಿ ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಅನಸೂಯಾ ತಮ್ಮ ಪೋಸ್ಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ತಾನು ಯಾವುದೇ ಒಂದು ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಸಿಕೊಂಡು ಆ ಹೇಳಿಕೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ಮೇಲೆ ಅಸಭ್ಯ ಕಾಮೆಂಟ್‌ಗಳನ್ನು ಮಾಡುತ್ತಾ, ವೈಯಕ್ತಿಕವಾಗಿ ದಾಳಿ ಮತ್ತು ಬೆದರಿಕೆ ಹಾಕುತ್ತಿದ್ದ ಕೆಲವರ ನಡವಳಿಕೆಯನ್ನು ಮಾತ್ರ ತಾನು ಪ್ರಶ್ನಿಸಿದ್ದಾಗಿ ಅವರು ಹೇಳಿದ್ದಾರೆ. ಅಸಲಿ ವಿಷಯವನ್ನು ಬದಿಗಿಟ್ಟು, ಅರ್ಧಂಬರ್ಧ ಎಡಿಟ್ ಮಾಡಿದ ವಿಡಿಯೋ ಕ್ಲಿಪ್‌ಗಳೊಂದಿಗೆ ತನ್ನ ಹೇಳಿಕೆಯನ್ನು ಸನಾತನ ಧರ್ಮಕ್ಕೆ ತಳುಕು ಹಾಕಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ತಾನೂ ಕೂಡ ಸನಾತನ ಧರ್ಮವನ್ನು ಪಾಲಿಸುವ ಒಬ್ಬ ಅಪ್ಪಟ ಹಿಂದು ಎಂದು ಅನಸೂಯಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ತನ್ನ ಧರ್ಮ, ಸಂಸ್ಕೃತಿ ಮತ್ತು ಸನಾತನ ಮೌಲ್ಯಗಳ ಬಗ್ಗೆ ತನಗೆ ಅಪಾರ ಗೌರವವಿದೆ, ಆ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಮಾಜದಲ್ಲಿ ಧೈರ್ಯವಾಗಿರುವುದು, ಸತ್ಯದ ಪರ ನಿಲ್ಲುವುದು, ತಪ್ಪು ನಡೆದಾಗ ಅದನ್ನು ಧೈರ್ಯವಾಗಿ ಖಂಡಿಸುವುದು ಮತ್ತು ಸಹಮಾನವರನ್ನು ಗೌರವಿಸುವುದನ್ನು ತನ್ನ ಧರ್ಮವೇ ಕಲಿಸಿದೆ ಎಂದು ಅವರು ನೆನಪಿಸಿಕೊಂಡಿದ್ದಾರೆ. ಹನುಮಂತನು ತೋರಿದ ಧೈರ್ಯ ಮತ್ತು ಶಕ್ತಿಯೇ ನನಗೆ ನಿರಂತರ ಸ್ಫೂರ್ತಿ ಎಂದು ಅವರು ತಿಳಿಸಿದ್ದಾರೆ.

ಅನ್ಯಾಯ ಅಥವಾ ಕಿರುಕುಳ ನಡೆದಾಗ ಮೌನವಾಗಿರುವುದು ಸರಿಯಲ್ಲ, ಅದಕ್ಕಾಗಿಯೇ ತಾನು ಅಸಭ್ಯವಾಗಿ ಕಾಮೆಂಟ್ ಮಾಡುವವರನ್ನು ಪ್ರಶ್ನಿಸಿದ್ದೇನೆ ಎಂದು ಅನಸೂಯಾ ವಿವರಿಸಿದ್ದಾರೆ. ಧರ್ಮದ ಆಧಾರದ ಮೇಲೆ ತಾನು ಯಾರ ಬಗ್ಗೆಯೂ ಅಭಿಪ್ರಾಯ ರೂಪಿಸಿಲ್ಲ, ಕೇವಲ ವೈಯಕ್ತಿಕವಾಗಿ ನಿಂದಿಸುವವರನ್ನು ಮಾತ್ರ ವಿರೋಧಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಇತರರ ಮೇಲೆ ದಾಳಿ ಮಾಡುವುದು ಅಥವಾ ಬೆದರಿಕೆ ಹಾಕುವುದು ಸರಿಯಾದ ಕ್ರಮವಲ್ಲ ಎಂದು ಅವರು ಹೇಳಿದ್ದಾರೆ.

ಎಡಿಟ್ ಮಾಡಿದ ಕ್ಲಿಪ್‌ಗಳು

ಕೊನೆಯದಾಗಿ, ಅನಸೂಯಾ ನೆಟ್ಟಿಗರು ಮತ್ತು ಅಭಿಮಾನಿಗಳಿಗೆ ಒಂದು ಪ್ರಮುಖ ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಎಡಿಟ್ ಮಾಡಿದ ಕ್ಲಿಪ್‌ಗಳು ಮತ್ತು ಅರ್ಧಸತ್ಯದ ಕಥೆಗಳ ಬಲೆಗೆ ಬೀಳಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ. ಯಾವುದೇ ವಿಷಯದ ಬಗ್ಗೆ ಅಭಿಪ್ರಾಯಕ್ಕೆ ಬರುವ ಮೊದಲು ಪೂರ್ತಿ ಸತ್ಯ ಮತ್ತು ಸಂದರ್ಭವನ್ನು ತಿಳಿದುಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ. ಸತ್ಯವನ್ನು ಅರಿಯದೆ ಅನಗತ್ಯವಾಗಿ ದ್ವೇಷವನ್ನು ಹರಡಬೇಡಿ ಎಂದು ಕೇಳಿಕೊಳ್ಳುವ ಮೂಲಕ ಅನಸೂಯಾ ತಮ್ಮ ಸುದೀರ್ಘ ವಿವರಣೆಯನ್ನು ಮುಗಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Vishwanath and Sons Review: ಸೂರ್ಯ ಅಭಿನಯಕ್ಕೆ ಫಿದಾ, ಆದರೆ ಸಿನಿಮಾ ಎಲ್ಲೆಲ್ಲಿ ಎಡವಿದೆ?
ಧೈರ್ಯ ಇದ್ದರೆ ಮಾತ್ರ ನೋಡಿ: ನೋಡಿದ ಮೇಲೂ ತಲೆಯಿಂದ ಹೊರಹೋಗಲ್ಲ ಈ ಹಾರರ್ ಸಿನಿಮಾ!