ವೀರಯೋಧ ಗುರು ಮನೆ ಸ್ಥಿತಿ ಕಂಡು ಕಣ್ಣೀರಾದ ಹರಿಪ್ರಿಯಾ

Published : Feb 17, 2019, 07:20 PM ISTUpdated : Feb 17, 2019, 08:30 PM IST
ವೀರಯೋಧ ಗುರು ಮನೆ ಸ್ಥಿತಿ ಕಂಡು ಕಣ್ಣೀರಾದ ಹರಿಪ್ರಿಯಾ

ಸಾರಾಂಶ

ಮಂಡ್ಯದ ವೀರ ಯೋಧ ಗುರು ಅವರ ಮನೆಗೆ ಬೆಲ್ ಬಾಟಮ್ ಚಿತ್ರ ತಂಡ ಭೇಟಿ ನೀಡಿತ್ತು. ಯೋಧನ ಮನೆಯವರ ಸ್ಥಿತಿ ಕಂಡು ನಟಿ ಹರಿಪ್ರಿಯಾ ಕಣ್ಣೀರಾದರು.

ಮಂಡ್ಯ[ಫೆ.17] ಅಗಲಿದ ಯೋಧ ಗುರು ಅವರ  ಮನೆ ಮತ್ತು ಪತ್ನಿಯ ಪರಿಸ್ಥಿತಿಯನ್ನು ನೋಡಿ ಸಿನಿಮಾ ನಟಿ ಹರಿಪ್ರಿಯಾ ಕಣ್ಣೀರಾಗಿದ್ದಾರೆ. ಕಣ್ಣೀರು ಹಾಕುತ್ತಲೇ ಮಾತನಾಡಿದ ಹರಿಪ್ರಿಯಾ ಸಿನಿಮಾ ಶೂಟಿಂಗ್ ವೇಳೆ  ದೇಶದ ಗಡಿ ನೋಡಿದ್ದೇನೆ. ಗಡಿ ಕಾಯುವವರು ಸತ್ತಾಗ ನೋವಾಗುತ್ತೆ ಎಂದರು.

ನಮ್ಮಿಂದ ಉತ್ತರ ಕೊಡಬೇಕು. ಮತ್ತೆ ಈ ರೀತಿ ಆಗಬಾರದು. ಅವರ ಪತ್ನಿ ಸ್ಥಿತಿ ನೋಡಲು ಆಗುತ್ತಿಲ್ಲ. ಚಿತ್ರೀಕರಣಕ್ಕೆ ಹೋಗಿ ಬಂದಿದ್ದಕ್ಕೆ ನನ್ನ ತಾಯಿ ಭಯಪಟ್ಟಿದ್ದರು. ಇನ್ನು ದೇಶ ಕಾಯುವ ಯೋಧರ ತಾಯಂದಿರ ಪರಿಸ್ಥಿತಿ ಹೇಗಿರಬಹುದು? ಎಂದರು.

ಮಂಡ್ಯದ ಗಂಡುಗಲಿ ಗುರು ಜೀವನ ಸಾಧನೆ

ಪಾಕಿಸ್ತಾಕ್ಕೆ ಜೈಕಾರ ಕೂಗುವವರಿಗೆ ನಮ್ಮ ದೇಶದಲ್ಲಿ ಇರುವ ಅರ್ಹತೆ ಇಲ್ಲ. ಎಲ್ಲ ತಾಯಂದಿರಿಗೆ ಸಹಾಯ ಮಾಡಲು ನಾವಿದ್ದೇವೆ. ಅವರು ತಮ್ಮ ಮಕ್ಕಳನ್ನು ದೇಶ ಕಾಯಲು ಕಳುಹಿಸಿದ್ದಕ್ಕೆ ನಾವು ಇಷ್ಟು ಆರಾಮಾಗಿದ್ದೇವೆ. ಹೀಗಾಗಿ ಅವರಿಗೆಲ್ಲ ಒಂದು ಸೆಲ್ಯೂಟ್ ಎಂದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!