
ಸಾಮಾನ್ಯವಾಗಿ ಸಿನಿಮಾ ಕಾರ್ಯಕ್ರಮಗಳಿಂದ ದೂರವೇ ಉಳಿಯುವ ನಯನತಾರಾ, ಪತಿ ವಿಘ್ನೇಶ್ ಶಿವನ್ ಅವರ 'ಲವ್ ಇನ್ಶೂರೆನ್ಸ್ ಕಂಪನಿ' ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ವೇದಿಕೆ ಏರಿದ್ದಾರೆ. ಪತ್ನಿಯಾಗಿ ಅವರು ವೇದಿಕೆಗೆ ಬಂದಿದ್ದು, ಈ ಜೋಡಿಯ ಭಾವುಕ ಕ್ಷಣಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ಏಪ್ರಿಲ್ 10 ರಂದು ತೆರೆಗೆ ಬರಲಿದೆ. ನಯನತಾರಾ ಬಗ್ಗೆ ಗೊತ್ತಿರುವವರಿಗೆ ಅವರ ಒಂದು ರೂಲ್ಸ್ ಕೂಡ ಚೆನ್ನಾಗಿ ಗೊತ್ತು. ಅದೇನೆಂದರೆ, ಅವರು ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ.
ಇದು ಅವರ ಸಿನಿಮಾ ಕಾಂಟ್ರ್ಯಾಕ್ಟ್ನಲ್ಲಿರೋ ಒಂದು ಕಡ್ಡಾಯ ಷರತ್ತು ಕೂಡ ಹೌದು. ಆದರೆ, ತಮ್ಮ ಪತಿ ವಿಘ್ನೇಶ್ ಶಿವನ್ಗಾಗಿ ನಯನತಾರಾ ಈ ನಿಯಮವನ್ನು ಮುರಿದಿದ್ದಾರೆ. ಏಪ್ರಿಲ್ 8 ರಂದು ನಡೆದ 'ಲವ್ ಇನ್ಶೂರೆನ್ಸ್ ಕಂಪನಿ' ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಅವರು ವೇದಿಕೆ ಏರಿದರು. ವಿಶೇಷ ಅಂದರೆ, ಅವರು ಈ ಸಿನಿಮಾದ ನಿರ್ಮಾಪಕಿಯಾಗಿ ಅಲ್ಲ, ಬದಲಾಗಿ ವಿಘ್ನೇಶ್ ಪತ್ನಿಯಾಗಿ ವೇದಿಕೆಗೆ ಬಂದಿದ್ದು ಎಲ್ಲರನ್ನೂ ಭಾವುಕರನ್ನಾಗಿಸಿತು.
ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವಿಘ್ನೇಶ್ ಶಿವನ್, ತಮ್ಮ ಚಿತ್ರತಂಡವನ್ನು ವೇದಿಕೆಗೆ ಕರೆದರು. ಈ ವೇಳೆ, 'ನಟಿ' ನಯನತಾರಾ ಅವರನ್ನು ವೇದಿಕೆಗೆ ಕರೆಯುವಷ್ಟು ಶಕ್ತಿ ನನಗಿಲ್ಲ, ಯಾಕಂದ್ರೆ ಅವರು ಇಂಥ ಕಾರ್ಯಕ್ರಮಗಳಿಗೆ ಬರುವುದಿಲ್ಲ ಎಂದು ತಮಾಷೆ ಮಾಡಿದರು. ನಂತರ, ಈ ಸಿನಿಮಾದ ನಿರ್ಮಾಪಕಿಯಾಗಿ ಮತ್ತು ನನ್ನ ಪತ್ನಿಯಾಗಿ ವೇದಿಕೆಗೆ ಬರಬಹುದು ಎಂದು ಆಹ್ವಾನಿಸಿದರು. ಆದರೆ, ನಯನತಾರಾ ಇನ್ನೂ ಅಲ್ಲೇ ಇದ್ದಾರಾ ಇಲ್ವಾ ಅಂತ ಅವರಿಗೆ ಖಚಿತವಿರಲಿಲ್ಲ.
ಬ್ಯಾಕ್ಸ್ಟೇಜ್ ಕಡೆ ನೋಡುತ್ತಾ, "ಏನ್ ಹೇಳಬೇಕು ಗೊತ್ತಾಗ್ತಿಲ್ಲ. ಅವರು ಹೊರಟು ಹೋದ್ರಾ? ಕೆಲವೊಮ್ಮೆ ಕಾರ್ಯಕ್ರಮ ಶುರುವಾದ ಮೇಲೆ ಅವರು ಹೊರಟು ಹೋಗ್ತಾರೆ" ಎಂದು ವಿಘ್ನೇಶ್ ಹೇಳಿದರು. ಆಗ ಅನಿರೀಕ್ಷಿತವಾಗಿ ನಯನತಾರಾ ತಮ್ಮ ಇಬ್ಬರು ಸಹಾಯಕಿಯರೊಂದಿಗೆ ವೇದಿಕೆಗೆ ಎಂಟ್ರಿ ಕೊಟ್ಟರು. ಇದನ್ನು ನೋಡಿ ವಿಘ್ನೇಶ್ ಶಿವನ್ ಒಂದು ಕ್ಷಣ ಶಾಕ್ ಆಗಿ, ಭಾವುಕರಾದರು. ನಂತರ ಇಬ್ಬರೂ ಪರಸ್ಪರ ಅಪ್ಪಿಕೊಂಡು ಅಭಿಮಾನಿಗಳಿಗೆ ಒಂದು ಸುಂದರ ಕ್ಷಣವನ್ನು ಕಟ್ಟಿಕೊಟ್ಟರು.
ವಿಘ್ನೇಶ್, ನಯನತಾರಾ ಅವರ ಹಣೆಗೆ ಮುತ್ತಿಕ್ಕಿ ತಮ್ಮ ಮಾತು ಮುಂದುವರಿಸಿದರು. ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಲು ಕೇಳಿದಾಗ, ನಯನತಾರಾ ವಿಘ್ನೇಶ್ ಮತ್ತು ತಂಡದ ಹಿಂದೆ ನಿಂತು ಕೈಮುಗಿದು ನಮಸ್ಕರಿಸಿದರು. ವಿಘ್ನೇಶ್ ನಿರ್ದೇಶನದ 'ಲವ್ ಇನ್ಶೂರೆನ್ಸ್ ಕಂಪನಿ' (LIK) ಒಂದು ಸೈನ್ಸ್ ಫಿಕ್ಷನ್ ಸಿನಿಮಾ. ಇದರಲ್ಲಿ ಪ್ರದೀಪ್ ರಂಗನಾಥನ್ ಮತ್ತು ಕೃತಿ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಗೌರಿ ಕಿಶನ್, ಯೋಗಿ ಬಾಬು, ಸೀಮನ್, ಶಾ ರಾ, ಮಿಸ್ಕಿನ್, ಆನಂದರಾಜ್ ಮತ್ತು ಸುನಿಲ್ ರೆಡ್ಡಿ ಪೋಷಕ ಪಾತ್ರಗಳಲ್ಲಿದ್ದಾರೆ.
ನಯನತಾರಾ ಮತ್ತು ವಿಘ್ನೇಶ್ ತಮ್ಮ 'ರೌಡಿ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಸ್ಎಸ್ ಲಲಿತ್ ಕುಮಾರ್ ಅವರ 'ಸೆವೆನ್ ಸ್ಕ್ರೀನ್ ಸ್ಟುಡಿಯೋ' ಕೂಡ ನಿರ್ಮಾಣದಲ್ಲಿ ಕೈಜೋಡಿಸಿದೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ಈ ಸಿನಿಮಾ, ಹಲವು ಬಾರಿ ಮುಂದೂಡಲ್ಪಟ್ಟು, ಕೊನೆಗೂ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.