3 ಮದುವೆ, 17 ವರ್ಷ ಹಾಳುಮಾಡಿಕೊಂಡೆ: ಜೀವನದ ಕಹಿ ಸತ್ಯ ಬಿಚ್ಚಿಟ್ಟ ನಟಿ ಮೀರಾ!

Published : May 13, 2026, 07:02 PM IST
Meera Vasudevan

ಸಾರಾಂಶ

ಮೂರು ದಡ್ಡ ಮದುವೆಗಳಿಗಾಗಿ ನಾನು 17 ವರ್ಷಗಳನ್ನು ವೇಸ್ಟ್ ಮಾಡಿದೆ ಅಂತ ನಟಿ ಮೀರಾ ವಾಸುದೇವನ್ ಹೇಳಿದ್ದಾರೆ. ಧನ್ಯಾ ವರ್ಮಾ ಜೊತೆಗಿನ ಸಂದರ್ಶನದಲ್ಲಿ ಮೀರಾ ಈ ರೀತಿ ಮಾತನಾಡಿದ್ದಾರೆ.

ನಟಿ ಮೀರಾ ವಾಸುದೇವನ್ ತಮ್ಮ ಮೂರು ಮದುವೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮೂರು ದಡ್ಡ ಮದುವೆಗಳಿಗಾಗಿ ಜೀವನದ 17 ವರ್ಷಗಳನ್ನು ಹಾಳುಮಾಡಿಕೊಂಡೆ. ಈ ಸಮಯದಲ್ಲಿ ನನ್ನ ಕೆರಿಯರ್, ಫಿಟ್ನೆಸ್ ಹಾಗೂ ಕುಟುಂಬದ ಜೊತೆ ಸಮಯ ಕಳೆಯಬಹುದಿತ್ತು ಎಂದು ಹೇಳಿದ್ದಾರೆ. ಮೋಹನ್‌ಲಾಲ್ ನಟನೆಯ 'ತನ್ಮಾತ್ರ' ಸಿನಿಮಾ ಮೂಲಕ ಫೇಮಸ್ ಆದ ನಟಿ ಮೀರಾ ವಾಸುದೇವನ್, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

'ತನ್ಮಾತ್ರ' ಮಾತ್ರವಲ್ಲದೆ, ಮಲಯಾಳಂ ಮತ್ತು ತಮಿಳಿನ ಹಲವು ಸಿನಿಮಾಗಳಲ್ಲಿ ಮೀರಾ ಒಳ್ಳೊಳ್ಳೆ ಪಾತ್ರಗಳನ್ನು ಮಾಡಿದ್ದಾರೆ. ಆದರೆ, ಇತ್ತೀಚೆಗೆ ತಮ್ಮ ಮದುವೆ, ಡೈವೋರ್ಸ್ ಹಾಗೂ ಕೆರಿಯರ್ ಬಗ್ಗೆ ಅವರು ಆಡಿರುವ ಮಾತುಗಳು ಈಗ ಚರ್ಚೆಗೆ ಬಂದಿವೆ. ತಾನು ಸಿಂಗಲ್ ಹಾಗೂ ವಿಚ್ಛೇದಿತೆ ಅಂತ ಮೀರಾ ಈ ಹಿಂದೆಯೇ ಹೇಳಿಕೊಂಡಿದ್ದರು.

ಮೂರು ದಡ್ಡ ಮದುವೆಗಳಿಗಾಗಿ ನಾನು 17 ವರ್ಷಗಳನ್ನು ವೇಸ್ಟ್ ಮಾಡಿದೆ ಅಂತ ಮೀರಾ ವಾಸುದೇವನ್ ಹೇಳಿದ್ದಾರೆ. ಈ ಸಮಯದಲ್ಲಿ ತಮಗೆ ಇಷ್ಟವಾದ ಕೆಲಸಗಳನ್ನು ಮಾಡಬಹುದಿತ್ತು, ಅಪ್ಪ-ಅಮ್ಮನ ಜೊತೆ ಹೆಚ್ಚು ಸಮಯ ಕಳೆಯಬಹುದಿತ್ತು ಅಂತ ಮೀರಾ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಜೀವನದಲ್ಲಿ ಇದಕ್ಕಿಂತ ಹೆಚ್ಚಿನದನ್ನು ನಾನು ಸಾಧಿಸಬಹುದಿತ್ತು ಅಂತಾನೂ ಅವರು ಹೇಳಿದ್ದಾರೆ.

ಸುಮ್ಮನೆ ಹಾಳುಮಾಡಿಕೊಂಡೆ

ನನ್ನ ಮಗನ ಹತ್ರ ನಾನು ಹೇಳ್ತಿರ್ತೀನಿ - 'ಮೂರು ದಡ್ಡ ಮದುವೆಗಳಿಗೋಸ್ಕರ ನಾನು 17 ವರ್ಷಗಳನ್ನು ಸುಮ್ಮನೆ ಹಾಳುಮಾಡಿಕೊಂಡೆ'. ಆ ಸಮಯದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ದರೆ, ನಾನು ಇಷ್ಟಪಡುವ ಸಿನಿಮಾ, ಫಿಟ್ನೆಸ್, ಒಳ್ಳೆ ಸ್ನೇಹ ಬಳಗ... ಹೀಗೆ ಎಷ್ಟೋ ಕೆಲಸಗಳನ್ನು ಮಾಡಬಹುದಿತ್ತು. ನನ್ನ ಜೀವನದಲ್ಲಿ ಇದಕ್ಕಿಂತ ಎಷ್ಟೋ ಹೆಚ್ಚಿನದನ್ನು ಸಾಧಿಸಬಹುದಿತ್ತು. ಆದರೆ ನನಗೆ ಆಗಲಿಲ್ಲ. ನಮ್ಮ ಅಪ್ಪ, ಅಮ್ಮ, ಅಕ್ಕನ ಜೊತೆ ಹೆಚ್ಚು ಸಮಯ ಕಳೆಯಬಹುದಿತ್ತು.

ಅದನ್ನೆಲ್ಲಾ ಬಿಟ್ಟು ಬೇರೆಯವರಿಗೋಸ್ಕರ ಸಮಯ ಹಾಳುಮಾಡಿದೆ. ನನ್ನನ್ನು ಗೌರವಿಸದ, ನನ್ನನ್ನು ಕೀಳಾಗಿ ಕಂಡವರ ಜೊತೆಗಿನ ಸಂಬಂಧದಲ್ಲಿ ನಾನು ಸುಮ್ಮನೆ ಸಮಯ ಕಳೆದೆ ಎಂದು ಮೀರಾ ಹೇಳಿದ್ದಾರೆ. ಧನ್ಯಾ ವರ್ಮಾ ಜೊತೆಗಿನ ಸಂದರ್ಶನದಲ್ಲಿ ಮೀರಾ ಈ ರೀತಿ ಮಾತನಾಡಿದ್ದಾರೆ. ಇನ್ನು ನನ್ನಿಂದ ತಪ್ಪುಗಳಾಗಿವೆ, ಅದರಲ್ಲಿ ಮುಚ್ಚಿಡಲು ಏನೂ ಇಲ್ಲ, ಈಗ ಜೀವನದಲ್ಲಿ ಮುಂದೆ ಸಾಗಬೇಕು ಅಂತ ಮೀರಾ ವಾಸುದೇವನ್ ಇತ್ತೀಚೆಗೆ ಮತ್ತೊಂದು ಸಂದರ್ಶನದಲ್ಲಿ ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೇರಳದ ದೇವಸ್ಥಾನದಲ್ಲಿ ನಟ ರವಿ ಮೋಹನ್‌ಗೆ 'ದೇವಿ ರತ್ನಂ' ಪ್ರಶಸ್ತಿ: ಕೆನಿಶಾ ಸಂಗೀತಕ್ಕೆ ಜನ ಫಿದಾ
ಏನಮ್ಮಾ Trisha Krishnan ಇದು? ಆಗ ಆ ನಟನ ಜೊತೆ- ಈಗ ವಿಜಯ್ ಜೊತೆ: ನಡುವೆ ಉದ್ಯಮಿ ಜೊತೆ