
ಈಗವರು ಸೀರಿಯಲ್ ನಲ್ಲಿ ಬ್ಯುಸಿ ಆಗಿದ್ದಾರೆ. ‘ಮಹಾದೇವಿ’ ನಂತರ ಸ್ಟಾರ್ ಸುವರ್ಣ ವಾಹಿನಿಯ ‘ಶ್ರೀ’ ಸೀರಿಯಲ್ಗೆ ನಾಯಕಿ ಆಗಿದ್ದಾರೆ. ಸದ್ಯಕ್ಕೀಗ ಅದರ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗಿದೆ.
ಜುಲೈ ೨ರಿಂದ ಪ್ರಸಾರವಾಗಲಿರುವ ‘ಶ್ರೀ’ ತಾಯಿ-ಮಗಳ ಕಥಾನಕ. ಮಾನಸ ಜೋಷಿ ಅವರಿಗೆ ತಮ್ಮ ಸಿರೀಯಲ್ ಜರ್ನಿಯ ಮಟ್ಟಿಗೆ ಇದೊಂದು ಹೊಸ ಬಗೆಯ ಪಾತ್ರ ಎನ್ನುವ ಖುಷಿಯಿದೆ. ‘ಸಿನಿಮಾ ಮತ್ತು ಸೀರಿಯಲ್ಮಟ್ಟಿಗೆ ವೆರೈಟಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಾ ಬರುತ್ತಿದ್ದೇನೆ. ಇದೊಂದು ಒಳ್ಳೆಯ ಪಾತ್ರ ಎನ್ನುವ ಕಾರಣಕ್ಕೆ ಒಪ್ಪಿಕೊಂಡಿದ್ದೇನೆ. ಆದ್ರೆ, ನನ್ನ ಗಮನ ಸಿನಿಮಾ ಕಡೆಗೇ ಇದೆ. ತೆಲುಗು ಸಿನಿಮಾವೊಂದರ ಆಫರ್ ಬಂದಿದೆ. ಯಾವುದು ಫೈನಲ್ ಆಗಿಲ್ಲ’ ಎನ್ನುತ್ತಾರೆ ಮಾನಸ ಜೋಷಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.