ಅಪಾದಮಸ್ತಕ ರಸಹೀನ

Published : Aug 11, 2018, 02:36 PM ISTUpdated : Sep 09, 2018, 08:35 PM IST
ಅಪಾದಮಸ್ತಕ ರಸಹೀನ

ಸಾರಾಂಶ

‘ಪಾದರಸ’ ಎಂಬ ಒಬ್ಬ ಚುರುಕಿನ ಮನುಷ್ಯನ ಕಥೆಯನ್ನು ಹೇಳಲು ಎರಡೂವರೆ ಗಂಟೆ ತೆಗೆದುಕೊಂಡಿದ್ದಾರೆ ನಿರ್ದೇಶಕ. ನೀವು ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದರೆ ಚಿತ್ರ ನೋಡಬೇಕು. 

ಒಂದೂವರೆ ವರ್ಷದ ಪುಟ್ಟ ಮಗು ಕೂತಿದೆ. ಅದರ ಎದುರುಗಡೆ ನಾಯಕನಿದ್ದಾನೆ. ಅವನು ಸಿಗರೇಟು ಸೇದುತ್ತಿದ್ದಾನೆ. ಸಿಗರೇಟಿನ ಹೊಗೆ ಆ ಮಗುವಿನ ಮುಖಕ್ಕೆ ಬಡಿಯುತ್ತಿದೆ. ಅಂಥಾ ಸಂವೇದನಾರಹಿತ ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ ಸಂಚಾರಿ ವಿಜಯ್. ಆ ಮಟ್ಟಿಗೆ ಅವರನ್ನು ಈ ಚಿತ್ರ ಬದಲಿಸಿದೆ ಎಂದರೆ ತಪ್ಪೇನಿಲ್ಲ. ಇಷ್ಟೊಂದು ಬದಲಾಗಿದ್ದು ಅವರ ಹೆಗ್ಗಳಿಕೆಯೂ ಹೌದು. ‘ಪಾದರಸ’ ಎಂಬ ಒಬ್ಬ ಚುರುಕಿನ ಮನುಷ್ಯನ ಕಥೆಯನ್ನು
ಹೇಳಲು ಎರಡೂವರೆ ಗಂಟೆ ತೆಗೆದುಕೊಂಡಿದ್ದಾರೆ ನಿರ್ದೇಶಕ. 

ಅವನ ಪೋಲಿತನ, ತುಂಟಾಟ, ಪ್ರೇಮ ಇವೆಲ್ಲದರ ಜೊತೆಗೆ ಒಂದರ್ಧ ಕೆಜಿ ಒಳ್ಳೆಯತನವನ್ನೂ ಕಟ್ಟಿಕೊಟ್ಟಿದ್ದಾರೆ. ಆ ಪಾತ್ರದ ಜರ್ನಿಯ ಜೊತೆಗಾರರು ವೈಷ್ಣವಿ ಮತ್ತು ನಿರಂಜನ್. ಒಬ್ಬ ಮನುಷ್ಯ ಒಳಗೆ ಎಷ್ಟೇ ನೋವಿದ್ದರೂ ಹೊರಗೆ
ನಗುನಗುತ್ತಾ ಇರುತ್ತಾನೆ ಅನ್ನುವ ಒಂದು ಪಾಯಿಂಟು ಹೊರತುಪಡಿಸಿದರೆ ಎಡವಟ್ಟುಗಳೇ ಇಡೀ ಚಿತ್ರದ ಸರಕು. ತನ್ನದಲ್ಲದ ದೊಗಳೆ ಅಂಗಿಯನ್ನು ಹಾಕಿದಂತೆ ಕಾಣಿಸುವ ಸಂಚಾರಿ ವಿಜಯ್ ಯಾವುದೋ ಕೆಲವು ಆ್ಯಂಗಲ್ಲಿನಲ್ಲಿ
ನೀಟಾಗಿ ಕಾಣಿಸುತ್ತಾರೆ. ಉಳಿದಂತೆ ಅಂಗಿಯ ದೊಗಳೆತನ ಎದ್ದೆದ್ದು ಕಾಣುತ್ತದೆ. ಪಾತ್ರ ಒಳ್ಳೆಯದಾಗಿರದಿದ್ದರೂ ಪರವಾಗಿಲ್ಲ, ಸ್ಕ್ರಿಪ್ಟು ವಿಧಿಲೀಲೆಯಂತಿರಬೇಕು ಅನ್ನುವುದು ಈ ಕಥೆಯ ನೀತಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಯ್ಯ ಮಾಸ್ ಶೋ, ಆಕ್ಷನ್ ಡೋಸ್ ಜಾಸ್ತಿ: ಇಲ್ಲಿದೆ ಅಘೋರನ ಕಥೆ 'ಅಖಂಡ 2' ಸಂಪೂರ್ಣ ವಿಮರ್ಶೆ!
ಅಭಿಮಾನಿಗಳಿಗಾಗಿ ಮಾಡಿದ ದರ್ಶನೋತ್ಸವ.. ದಾಸನ ಡಬಲ್‌ ರೋಲ್‌ 'ದಿ ಡೆವಿಲ್' ಹೇಗಿದೆ?