
ಯಾವುದೇ ನಟನಿಗೆ ಒಂದೇ ಒಂದು ಸರಿಯಾದ ಸಿನಿಮಾ ಸಿಕ್ಕರೆ ಸಾಕು, ಅವರ ಹಣೆಬರಹವೇ ಬದಲಾಗಿಬಿಡುತ್ತೆ. ಪೋಸಾನಿ ಕೃಷ್ಣ ಮುರಳಿ ಲೇಖಕರಾಗಿ, ನಟರಾಗಿ ಗುರುತಿಸಿಕೊಂಡವರು. ಆದರೆ, ರಾಮ್ ಚರಣ್ ಅಭಿನಯದ 'ನಾಯಕ್' ಸಿನಿಮಾ ಅವರಿಗೆ ನಟನಾಗಿ ದೊಡ್ಡ ಬ್ರೇಕ್ ನೀಡಿತ್ತು. ಈ ಸಿನಿಮಾದಲ್ಲಿ ಪೋಸಾನಿ ಕಾಮಿಡಿ ರೌಡಿಯಾಗಿ ನಟಿಸಿದ್ದರು. ಮೂಲ ಚಿತ್ರಕಥೆಯ ಪ್ರಕಾರ, ಪೋಸಾನಿ ಅವರದ್ದು ಕೇವಲ ಎರಡು-ಮೂರು ದಿನಗಳ ಶೂಟಿಂಗ್ ಇರುವ ಸಣ್ಣ ಪಾತ್ರವಾಗಿತ್ತು.
ಆದರೆ ನಿರ್ದೇಶಕ ವಿ.ವಿ. ವಿನಾಯಕ್, ಆ ಪಾತ್ರವನ್ನು ಸಿನಿಮಾದ ದ್ವಿತೀಯಾರ್ಧ ಪೂರ್ತಿ ಬರುವಂತೆ ಬದಲಾಯಿಸಿದರಂತೆ. ಆ ಸಮಯದಲ್ಲಿ ನನಗೆ ನಟನೆಯ ಮೇಲೆ ಅಷ್ಟೊಂದು ಆಸಕ್ತಿ ಇರಲಿಲ್ಲ. ವಿ.ವಿ. ವಿನಾಯಕ್ ಫೋನ್ ಮಾಡಿ, 'ರಾಮ್ ಚರಣ್ ಸಿನಿಮಾದಲ್ಲಿ 3 ದಿನದ ಪಾತ್ರವಿದೆ, ಬಂದು ಮಾಡಿ' ಅಂತ ಕೇಳಿಕೊಂಡರು. ಮೊದಲ ದಿನದ ಶೂಟಿಂಗ್ನಲ್ಲಿ ನನ್ನ ಡೈಲಾಗ್ಗಳಿಗೆ ಕ್ಯಾಮೆರಾಮ್ಯಾನ್ ಚೋಟಾ ಕೆ. ನಾಯ್ಡು, ವಿನಾಯಕ್ ಸೇರಿದಂತೆ ಸೆಟ್ನಲ್ಲಿದ್ದವರೆಲ್ಲಾ ಬಿದ್ದು ಬಿದ್ದು ನಕ್ಕರು.
ರಶಸ್ ನೋಡಿದ ವಿ.ವಿ. ವಿನಾಯಕ್, 'ಈ ಪಾತ್ರ ದ್ವಿತೀಯಾರ್ಧ ಪೂರ್ತಿ ಇರಬೇಕು' ಎಂದು ಲೇಖಕ ಆಕುಲ ಶಿವ ಅವರಿಗೆ ಹೇಳಿದರು. ಹೀಗೆ 3 ದಿನದ ಪಾತ್ರ 13 ದಿನಗಳ ಪಾತ್ರವಾಯಿತು. ವಿನಾಯಕ್ ಈ ದೃಶ್ಯಗಳ ರಶಸ್ ಅನ್ನು ಚಿರಂಜೀವಿ ಅವರಿಗೂ ತೋರಿಸಿದರು. ಅವರು ಕೂಡ ಮತ್ತೆ ಮತ್ತೆ ನೋಡಿ ನಕ್ಕರು.
ನನ್ನ ದೃಶ್ಯಗಳನ್ನು ನೋಡಿದ ನಂತರ ಚಿರಂಜೀವಿ ಅವರು ವಿನಾಯಕ್ ಮತ್ತು ರಾಮ್ ಚರಣ್ಗೆ, 'ಪೋಸಾನಿ ಅವರ ಒಂದೇ ಒಂದು ದೃಶ್ಯವನ್ನೂ ಕತ್ತರಿಸಬೇಡಿ. ಈ ದೃಶ್ಯಗಳಿಂದಲೇ ಸಿನಿಮಾ ಹಿಟ್ ಆಗುತ್ತದೆ' ಎಂದು ಹೇಳಿದರಂತೆ. 'ನಾಯಕ್' ಬಿಡುಗಡೆಯಾದ ಒಂದೇ ವಾರದಲ್ಲಿ ನಾನು 36 ಸಿನಿಮಾಗಳಿಗೆ ಸಹಿ ಹಾಕಿದ್ದೆ. ಕೆಲ ನಿರ್ಮಾಪಕರು ದಿನಕ್ಕೆ 2 ಲಕ್ಷ ರೂಪಾಯಿ ಕೊಡ್ತೀವಿ, ಡೇಟ್ಸ್ ಕೊಡಿ ಅಂತಾನೂ ಕೇಳಿದ್ದರು' ಎಂದು ಪೋಸಾನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.