
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಅವರ ಮದುವೆ ಆಮಂತ್ರಣ ಪತ್ರಿಕೆ ಹೊರಬಿದ್ದಿದೆ. ಈಗಾಗಲೇ ಈ ನ್ಯೂಸ್ ಕರ್ನಾಟಕದ ಮನೆಮನೆಗಳಲ್ಲೂ ಹರಡಿದೆ. ಆದರೆ, ಅನುಶ್ರೀ ಅಭಿಮಾನಿಗಳಿಗೆ ಮದುವೆ ಆಮಂತ್ರಣ ಪತ್ರ ನೋಡುವ ಸಹಜ ಕುತೂಹಲ ಇದ್ದೇಇರುತ್ತೆ ಅಲ್ವಾ? ಅದಕ್ಕೆ ಇದೀಗ ಇನ್ವಿಟೇಶನ್ ಕೂಡ ಹೊರಜಗತ್ತಿಗೆ ಅನಾವರಣ ಆಗಿದೆ. ನೀವೇನಾದ್ರೂ ಆಂಕರ್ ಅನುಶ್ರೀ ಫ್ಯಾನ್ ಆಗಿದ್ರೆ ಇಲ್ಲಿದೆ ನೋಡಿ ಆಮಂತ್ರಣ ಪತ್ರಿಕೆ!
`ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ… 'ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ’ ಎಂದು ಆಮಂತ್ರಣ ಪತ್ರಿಕೆಯಲ್ಲಿ ಅನುಶ್ರೀ ಬರೆಯಿಸಿದ್ದಾರೆ.
ಹೌದು, ನಟಿ, ನರೂಪಕಿ ಅನುಶ್ರೀ ಮದುವೆ ಬಗ್ಗೆ ಅವರಿಗಿಂತಲೂ ಹೆಚ್ಚಾಗಿ ಬೇರೆ ಹಲವರಿಗೆ ತಲೆಬಿಸಿ ಆಗಿತ್ತು ಎನ್ನಬಹುದು. ಅನುಶ್ರೀ ಅವರು ಹೋದಲ್ಲಿ ಬಂದಲ್ಲಿ, ಕುಂತಲ್ಲಿ ನಿಂತಲ್ಲಿ ಎಲ್ಲೇ ಹೋದ್ರೂ ಅವರ ಮದುವೆ ಬಗ್ಗೆಯೇ ಪ್ರಶ್ನೆ ಕೇಳಲಾಗುತ್ತಿತ್ತು. ಆ ಕ್ಷಣಕ್ಕೆ ಏನೋ ಒಂದು ಹೇಳಿ ನಟಿ ಅನುಶ್ರೀ ಅವರು ಜಾರಿಕೊಳ್ಳುತ್ತಿದ್ದರು. ಹಲವು ವರ್ಷಗಳನ್ನು ಹೀಗೆಯೇ ಕಳೆದಿದ್ದರು ಅನುಶ್ರೀ. ಆದರೆ ಈ ವರ್ಷದ ಪ್ರಾರಂಭದಿಂದಲೇ ಅನುಶ್ರೀ ಅವರು ಮದುವೆ ಆಗುವ ಮುನ್ಸೂಚನೆ ಕೊಟ್ಟಿದ್ದರು.
ಆ ಬಳಿಕ, ಅಂದರೆ ಕಳೆದ ತಿಂಗಳು ಆಂಕರ್ ಅನುಶ್ರೀ ಮದುವೆ ಸುದ್ದಿ ಮೊದಲು ಗಾಸಿಪ್ ರೂಪ ಪಡೆದು ಹೊರಬಿತ್ತು. ಆ ಬಳಿಕ ಸ್ವತಃ ಅನುಶ್ರೀ ಅವರೇ ತಮ್ಮ ಮದುವೆ ಫಿಕ್ಸ್ ಆಗಿರೋ ಬಗ್ಗೆ ಅಧೀಕೃತವಾಗಿ ಮಾಹಿತಿ ನೀಡಿದ್ದಾರೆ. ಇದೀಗ ಈ ಸುದ್ದಿ ಆಮಂತ್ರಣ ಪತ್ರಿಕೆ ಮೂಲಕವೇ ಮಾಧ್ಯಮಗಳಿಗೆ ತಲುಪಿವೆ. ಇದೇ ತಿಂಗಳು 28ಕ್ಕೆ ಅನುಶ್ರೀ ಮದುವೆ ಬೆಂಗಳೂರಿನ ಕಗ್ಗಲಿಪುರದಲ್ಲಿ ನಡೆಯಲಿದೆ. ಅನುಶ್ರೀ ಕೈಹಿಡಯಲಿರುವ ವರ ರೋಶನ್ (Roshan). ಹೆಚ್ಚಿನ ಮಾಹಿತಿಗೆ ಇನ್ವಿಟೇಶನ್ ನೋಡಬಹುದು.
ಅನುಶ್ರೀ ಅವರು ರೋಷನ್ ಅವರ ಜೊತೆಗೆ ವಿವಾಹವಾಗುತ್ತಿದ್ದು, ಇದೊಂದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅಂತೆ. ಆಗಸ್ಟ್ 28ರಂದು ಅದ್ದೂರಿಯಾಗಿ ಮದುವೆ ಆಗ್ತಿದ್ದಾರೆ. ಅವರನ್ನು ಕೈ ಹಿಡಿಯುತ್ತಿರುವ ರೋಷನ್ ಇವರು ಕೂರ್ಗ್ ಮೂಲದ ಉದ್ಯಮಿಯಾಗಿದ್ದು ಪುನೀತ್ ರಾಜ್ಕುಮಾರ್ ಅವರ ಮನೆಯಲ್ಲೇ ಅನುಶ್ರೀಗೆ ರೋಷನ್ ಅವರ ಪರಿಚಯವಾಗಿತ್ತಂತೆ. ಪುನೀತ್ ರಾಜ್ಕುಮಾರ್ ಅವರ ‘ಗಂಧದ ಗುಡಿ’ ಪ್ರೀ - ರಿಲೀಸ್ ಈವೆಂಟ್ ವೇಳೆಗೇ ಇವರಿಬ್ಬರ ನಡುವೆ ಪ್ರೇಮ್ ಕಹಾನಿ ಶುರುವಾಯ್ತು ಎಂಬ ಮಾತೂ ಕೇಳಿ ಬರುತ್ತಿದೆ.
ಇನ್ನೊಂದೆಡೆ ಅನುಶ್ರೀ ಪೋಸ್ಟ್ ಮಾಡಿರೋ ಫೋಟೋದಲ್ಲಿ ಅವರ ಕೈಯಲ್ಲಿರುವ ಉಂಗುರ ಗಮನ ಸೆಳೆಯುತ್ತಿದೆ. ಇದು ತುಳುನಾಡಿನಲ್ಲಿ ಚಾಲ್ತಿಯಲ್ಲಿರುವ ಸಂಪ್ರದಾಯ. ಮದುವೆಗೂ ಮುನ್ನ ಈ ಉಂಗುರವನ್ನು ಮದುಮಗಳ ಕೈಗೆ ಹಾಕುವ ಸಂಪ್ರದಾಯವಿದೆ. ಈ ಉಂಗುರಕ್ಕೆ ಮಾಂಗಲ್ಯದಷ್ಟೇ ಮಹತ್ವವಿದೆ. ತುಳುನಾಡಿನ ನಾಗಾರಾಧನೆಯನ್ನು ಈ ಉಂಗುರ ಪ್ರತಿನಿಧಿಸುತ್ತದೆ.
ನೀವು ಐಶ್ವರ್ಯಾ ರೈ ಕೈ ಬೆರಳನ್ನು ನೋಡಿದರೆ ಅವರ ಬೆರಳಿನಲ್ಲೂ ಇಂಥಾದ್ದೇ ಉಂಗುರ ಇರೋದನ್ನು ನೋಡಬಹುದು. ಅವರು ಇವತ್ತಿಗೂ ಯಾವ ಸಂದರ್ಭದಲ್ಲೂ ಅದನ್ನು ತೆಗೆದಿಡೋದಿಲ್ಲ. ಆದರೆ ಆ ಉಂಗುರ ಮದುವೆಗೂ ಮೊದಲೇ ಅನುಶ್ರೀ ಕೈಗೆ ಹೇಗೆ ಬಂತು ಅನ್ನೋದು ಪ್ರಶ್ನೆ. ಕೆಲವರು ಹೇಳುವ ಪ್ರಕಾರ ಕೆಲವೆಡೆ ಅನಿವಾರ್ಯ ಸಂದರ್ಭಗಳಲ್ಲಿ ಇದನ್ನು ಮದುವೆಗೂ ಮೊದಲೇ ಹುಡುಗಿಯ ಆಪ್ತ ಸಂಬಂಧಿಗಳು ಹಾಕುತ್ತಾರಂತೆ. ಹಾಗೇನಾದರೂ ಅನುಶ್ರೀ ಕೈಗೆ ಈ ಉಂಗುರ ಬಿದ್ದಿರಬಹುದು. ಇಲ್ಲವಾದರೆ ಅದೇ ಮಾದರಿಯ ಉಂಗುರವನ್ನು ಅವರು ಹಾಕ್ಕೊಂಡಿರಬಹುದು. ಅದೇನೇ ಆಗಿರಲಿ, ಅವೆಲ್ಲಾ ಕುತೂಹಲ ಇರುವವರಿಗಷ್ಟೇ ಮ್ಯಾಟರ್ ಅಷ್ಟೇ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.