ರಾಜ್ಯದೆಲ್ಲೆಡೆ ‘ಜಾಗ್ವಾರ್’ ಸಿನಿಮಾ ಬಿಡುಗಡೆ: ದೇವೇಗೌಡರ ಆಗಮನಕ್ಕೆ ಡೊಳ್ಳು ಕುಣಿತದ ಸಂಭ್ರಮ

Published : Oct 06, 2016, 03:58 AM ISTUpdated : Apr 11, 2018, 12:36 PM IST
ರಾಜ್ಯದೆಲ್ಲೆಡೆ ‘ಜಾಗ್ವಾರ್’ ಸಿನಿಮಾ ಬಿಡುಗಡೆ: ದೇವೇಗೌಡರ ಆಗಮನಕ್ಕೆ ಡೊಳ್ಳು ಕುಣಿತದ ಸಂಭ್ರಮ

ಸಾರಾಂಶ

ಬೆಂಗಳೂರು(ಅ.06): ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಲ್ ಅಭಿನಯದ ಚೊಚ್ಚಲ ಚಿತ್ರ  ವಿಶ್ವದಾದ್ಯಂತ ಜಾಗ್ವಾರ್ ಚಿತ್ರ ರಿಲೀಸ್ ಆಗಿದೆ. ಬೆಂಗಳೂರಿನ ಸಂತೋಷ್​​​ ಚಿತ್ರ ಮಂದಿರದಲ್ಲಿ ಜಾಗ್ವರ್​​ ಸಿನಿಮಾ ಬಿಡುಗಡೆಯಾಗಿದ್ದು, ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಚಿತ್ರಮಂದಿರಕ್ಕೆ ಆಗಮಿಸಿದರು.

ದೇವೇಗೌಡರ ಆಗಮನ ಹಿನ್ನೆಲೆಯಲ್ಲಿ ಡೊಳ್ಳ ಕುಣಿತದ ಸಂಭ್ರಮ ಮನೆ ಮಾಡಿದೆ. ಸಂತೋಷ್​​ ಚಿತ್ರಮಂದಿರದ ಮುಂದೆ ನಿಖಿಲ್​​ ಹಾಗೂ ಹೆಚ್ಡಿಕೆ ಕಟೌಟ್​​ ಹಾಕಲಾಗಿದೆ.

ಇತ್ತ ಮಂಡ್ಯದಲ್ಲಿ ಜಾಗ್ವಾರ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ಕಂಡಿದ್ದು, ಗುರುಶ್ರೀ ಚಿತ್ರಮಂದಿರ ಬಳಿ ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ಮಾಡಲಾಯಿತು.

ಸಂಸದ ಪುಟ್ಟರಾಜುನಿಂದ ನಿಖಿಲ್ ಅಭಿಮಾನಿ ಸಂಘದ ಕಚೇರಿ ಉದ್ಘಾಟನೆ ಮಾಡಲಾಯ್ತು. ಮೊದಲ ಪ್ರದರ್ಶನ ಚಿತ್ರವೀಕ್ಷಣೆಗೆ ಬಂದ ಪ್ರೇಕ್ಷಕರಿಗೆ ಜೆಡಿಎಸ್ ಕಾರ್ಯಕರ್ತರು ಕಬ್ಬಿನ ಹಾಲು ಹಾಗೂ ಲಾಡು ನೀಡಲಾಯಿತು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಈ ವಾರ ಮಾತ್ರ ಕಿಚ್ಚ ಸುದೀಪ್‌ ಈ ವಿಷ್ಯ ಮಾತಾಡ್ಬೇಕು; ಇಲ್ಲ ಅಂದ್ರೆ ಸಮಸ್ಯೆ ತಪ್ಪಿದ್ದಲ್ಲ!
ಡಾ ರಾಜ್‌ಕುಮಾರ್‌, ಸರಿತಾ ಯುಗವನ್ನು ನೆನಪಿಸಿದ ಶಿವರಾಜ್‌ಕುಮಾರ್‌, ಸರಿತಾ! ವೀಕ್ಷಕರಿಂದ ಮೆಚ್ಚುಗೆ