ಹನುಮಂತು ತಂಗಿಗೆ ನೆರವಾದ ಸರಿಗಮಪ ವೇದಿಕೆ!

Published : Feb 03, 2019, 01:49 PM ISTUpdated : Feb 03, 2019, 02:12 PM IST
ಹನುಮಂತು ತಂಗಿಗೆ  ನೆರವಾದ ಸರಿಗಮಪ ವೇದಿಕೆ!

ಸಾರಾಂಶ

ಕನ್ನಡ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮದ ವೇದಿಕೆ ಹನುಮಂತು ತಂಗಿ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಕಾನ್ಫಿಡೆಂಟ್ ಗ್ರೂಪ್ ಹನುಮಂತು ತಂಗಿ ಓದಿಗೆ, ಕೆಲಸಕ್ಕೆ ನೆರವಾಗಲು ಮುಂದಾಗಿದೆ.

ಸರಿಗಮಪ ಸೀಸನ್ 15 ಫ್ಯಾಮಿಲಿ ರೌಂಡ್ ನಲ್ಲಿ ಹನುಮಂತು ಹಾಗೂ ಅವರ ತಂಗಿ 'ಬಡತನದ ಮನಿಯೊಳಗೆ ಹೆಣ್ಣು ಹುಟ್ಟಬಾರದು' ಎಂಬ ಉತ್ತರ ಕರ್ನಾಟಕದ ಜನಪ್ರಿಯ ಗೀತೆ ಹಾಡಿದರು. ಈ ಹಾಡು ಎಲ್ಲರ ಮನ ಮುಟ್ಟುವಂತಿತ್ತು.

ಆ್ಯಂಕರ್ ಅನುಶ್ರೀ, ಹನುಮಂತು ತಂಗಿಗೆ ' ಬೆಂಗಳೂರಿನಿಂದ ಮನೆಗೆ ಬಂದಾಗ ಹನುಮಂತು ನಿಮಗೆ ಏನು ತಂದು ಕೊಟ್ಟ' ಎಂದು ಕೇಳಿದ್ದಕ್ಕೆ ಆಕೆ ' 100 ರೂಪಾಯಿ ಕೊಟ್ಟು ಹೋದ ಎಂದು ಹೇಳುತ್ತಾಳೆ. ಆ ಹಣದಲ್ಲಿ ಏನು ಮಾಡಿದ್ರಿ ಎಂದಿದಕ್ಕೆ 'ನೋಟ್ಸ್ ತೆಗೆದುಕೊಂಡೆ ' ಎಂದು ಮುಗ್ಧವಾಗಿ ಹೇಳುತ್ತಾಳೆ. ಇದು ಎಲ್ಲರನ್ನೂ ಭಾವುಕರನ್ನಾಗಿಸಿತು.

ಫ್ಯಾಮಿಲಿ ರೌಂಡ್ ನೋಡಲು ಕಾನ್ಫಿಡೆಂಟ್ ಗ್ರೂಪ್ ಮಾಲಿಕರು ಆಗಮಿಸಿದ್ದರು. ಇವರ ಕಷ್ಟವನ್ನು ಕಂಡ ಅವರು ಆಕೆಯ ವಿದ್ಯಾಭ್ಯಾಸಕ್ಕೆ 50 ಸಾವಿರ ರೂಪಾಯಿ ಹಾಗೂ ಓದು ಮುಗಿದ ನಂತರ ಕೆಲಸವನ್ನು ತಾವೇ ನೀಡುವುದಾಗಿ ಜನರ ಮುಂದೆ ಮಾತು ನೀಡಿದರು.

ಫ್ಯಾಮಿಲಿ ರೌಂಡ್ ನೋಡಲು ಕಾನ್ಫಿಡೆಂಟ್ ಗ್ರೂಪ್ ಮಾಲಿಕರು ಆಗಮಿಸಿದ್ದರು. ಇವರ ಕಷ್ಟವನ್ನು ಕಂಡ ಅವರು ಆಕೆಯ ವಿದ್ಯಾಭ್ಯಾಸಕ್ಕೆ 50 ಸಾವಿರ ರೂಪಾಯಿ ಹಾಗೂ ಓದು ಮುಗಿದ ನಂತರ ಕೆಲಸವನ್ನು ತಾವೇ ನೀಡುವುದಾಗಿ ಜನರ ಮುಂದೆ ಮಾತು ನೀಡಿದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​