
ಅಕ್ಷರಾ ಈ ಚಿತ್ರದ ನಾಯಕಿ. ಮೈಸೂರು ರಮಾನಂದ, ಶಿವಕುಮಾರ್ ಆರಾಧ್ಯ, ಜ್ಯೋತಿ ಮರೂರು, ಕುಷನ್ ಗೌಡ, ವಿಜಯಲಕ್ಷ್ಮಿ ಪಾತ್ರಧಾರಿಗಳು. ಚಿತ್ರತಂಡ ಇದೀಗ ಆಡಿಯೋ ಸೀಡಿ ಬಿಡುಗಡೆ ಮಾಡಿದೆ. ‘ಅವನೊಬ್ಬನೇ..’ಎನ್ನುವ ಈ ಚಿತ್ರದ ಟೈಟಲ್ಗೆ ‘ಮರೆಯಾದರು ನೀನು, ಮರೆಯಲಾರೆ ನಾನು’ ಎನ್ನುವ ಟ್ಯಾಗ್ ಲೈನ್ ಮೂಲಕ ದೇವನೊಬ್ಬನೇ ಎನ್ನುವುದನ್ನು ಹೇಳಹೊರಟಿದ್ದಾರಂತೆ ನಿರ್ದೇಶಕರು. ಅವರ ಪ್ರಕಾರ ಈ ಕತೆ ಹುಟ್ಟಿದ್ದೇ ವಿಶೇಷ. ‘ಅದು ರಾಜ್ಕುಮಾರ್ ಸ್ಮಾರಕದಲ್ಲಿ ಅವರ ಹುಟ್ಟು ಹಬ್ಬದ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ. ಅಲ್ಲಿಗೆ ದೂರದ ಊರಿನಿಂದ ಬಂದಿದ್ದ ಅಣ್ಣಾವ್ರ ಅಭಿಮಾನಿಯೊಬ್ಬ ಒಂದು ಕತೆ ಹೇಳಿದ. ಆ ಕತೆಯೇ ಚಿತ್ರಕ್ಕೆ ಸ್ಫೂರ್ತಿ ಆಯಿತು. ಅಮಾಯಕ ಹುಡುಗನೊಬ್ಬ ಗೊತ್ತಿಲ್ಲದೇ ಒಂದು ಸಂಚಿನ ಸುಳಿಯಲ್ಲಿ ಸಿಲುಕುತ್ತಾನೆ. ಆ ಮೂಲಕ ಆತ ಹೇಗೆಲ್ಲ ಸಂಕಷ್ಟ ಎದುರಿಸಿದ, ಅಲ್ಲಿಂದ ಹೇಗೆ ಹೊರಬಂದ ಎನ್ನುವುದು ಆ ಕತೆಯ ಒಂದು ಎಳೆ. ಅದನ್ನೇ ಚಿತ್ರಕತೆ ರೂಪಕ್ಕೆ ತಂದು ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ವಿವೇಕ್ ಚಕಾರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.