ಭೂಲೋಕದ ಅಪ್ಸರೆಗೆ ಸಿಂಗಾಪುರ್ ನಲ್ಲಿ ರೆಡಿಯಾಯ್ತು ಮೇಣದ ಪ್ರತಿಮೆ!

Published : Sep 04, 2019, 04:03 PM ISTUpdated : Sep 04, 2019, 05:33 PM IST
ಭೂಲೋಕದ ಅಪ್ಸರೆಗೆ ಸಿಂಗಾಪುರ್ ನಲ್ಲಿ ರೆಡಿಯಾಯ್ತು ಮೇಣದ ಪ್ರತಿಮೆ!

ಸಾರಾಂಶ

ಬಾಲಿವುಡ್ ಎಂದೂ ಮರೆಯಲಾಗದ ನಟಿ, ಭೂ ಲೋಕದ ಅಪ್ಸರೆ ಶ್ರೀದೇವಿ ಜನಮಾನಸದಲ್ಲಿ ಯಾವತ್ತಿಗೂ ಉಳಿಯುವ ನಟಿ. ಆಕೆಯ ಸ್ಮರಣಾರ್ಥ ಸಿಂಗಾಪೂರ್ ನಲ್ಲಿ ಮೇಣದ ಪ್ರತಿಮೆಯೊಂದನ್ನು ನಿರ್ಮಿಸಲಾಗಿದೆ. 

ಬಾಲಿವುಡ್ ಎಂದೂ ಮರೆಯಲಾಗದ ನಟಿ, ಭೂ ಲೋಕದ ಅಪ್ಸರೆ ಶ್ರೀದೇವಿ ಜನಮಾನಸದಲ್ಲಿ ಯಾವತ್ತಿಗೂ ಉಳಿಯುವ ನಟಿ. ಆಕೆಯ ಸ್ಮರಣಾರ್ಥ ಸಿಂಗಾಪೂರ್ ನಲ್ಲಿ ಮೇಣದ ಪ್ರತಿಮೆಯೊಂದನ್ನು ನಿರ್ಮಿಸಲಾಗಿದೆ. 

ಪತಿ ಬೋನಿ ಕಪೂರ್, ಪುತ್ರಿಯರಾದ ಜಾಹ್ನವಿ,  ಹಾಗೂ ಖುಷಿ ಮೇಣದ ಪ್ರತಿಮೆಯನ್ನು ಇಂದು ಅನಾವರಣಗೊಳಿಸಿದರು. ಬೋನಿ ಕಪೂರ್ ಜೊತೆ ಸಹೋದರ ಸಂಜಯ್ ಕಪೂರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಶ್ರೀದೇವಿಗೆ ಸ್ಟಾರ್ ಪಟ್ಟ ತಂದು ಕೊಟ್ಟ ಮಿಸ್ಟರ್ ಇಂಡಿಯಾ ಸಿನಿಮಾದ ‘ಹವಾ ಹವಾಯಿ’ ಹಾಡಿನಲ್ಲಿ ಹೇಗೆ ಕಾಣಿಸುತ್ತಿದ್ದರೋ ಅದೇ ರೀತಿ ಮೇಣದ ಪ್ರತಿಮೆಗೆ ಅಲಂಕಾರ ಮಾಡಲಾಗಿದೆ. ಸುಮಾರು 20 ಮಂದಿ ನುರಿತ ಕಲಾವಿದರು ಕೆಲಸ ಮಾಡಿದ್ದಾರೆ. 

ಬೋನಿ ಕಪೂರ್ ಪ್ರತಿಮೆ ವಿಡಿಯೋವನ್ನು ಶೇರ್ ಮಾಡುತ್ತಾ, " ಶ್ರೀದೇವಿ ನಮ್ಮ ಮನಸ್ಸಿನಲ್ಲಿ ಮಾತ್ರವಲ್ಲ, ಮಿಲಿಯನ್ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಸಿಂಗಾಪುರ್ ನಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಕಾತರದಿಂದ ಕಾಯುತ್ತಿದ್ದೇನೆ' ಎಂದು ಕೆಲದಿನಗಳ ಹಿಂದೆ ಎಕ್ಸೈಟ್ ಮೆಂಟ್ ವ್ಯಕ್ತಪಡಿಸಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?