ಬಿಗ್‌ಬಾಸ್ ಮನೆಗೂ ಐಟಿ ದಾಳಿಯಾಗುತ್ತಾ? ಸುದೀಪ್ ಹೇಳಿದ ಕತೆ!

By Web DeskFirst Published Jan 6, 2019, 9:39 PM IST
Highlights

ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾತನಾಡಿದ್ರಾ?  ಭಾನುವಾರದ ಸುಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮ  ನೋಡಿದವರೆಲ್ಲ ಹೌದೌದು ಎನ್ನುತ್ತಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಮೋಡ ಕವಿದ ವಾತಾವರಣ ಆಗಿ 4 ಕಲಾವಿದರು ಒಂಥರಾ ರಜಾ ತಗೊಂಡಿದ್ದರು. ಕೆಲವರಿಗೆ ನಿನ್ನೆ ಮುಕ್ತಿಯಾದರೆ ಹಲವರಿಗೆ ಇಂದು ಮುಕ್ತಿಯಾಯಿತು. ಕೊಂಚ ಎಚ್ಚರ ತಪ್ಪಿದರೆ ನಿಮ್ಮನ್ನು ಕರೆಯೋಲೆ ಬರೋರೆ ಇರ್ತಿರಲಿಲ್ಲ.

ಬಿಗ್ ಬಾಸ್ ಮನೆಯಲ್ಲಿ 74 ದಿನ ಕಳೆದು ಹೊರಬಂದ ಒಗ್ಗರಣೆ ಡಬ್ಬಿ ಮುರಳಿ ಅವರೊಂದಿಗೆ ಸುದೀಪ್ ಮಾತನಾಡುತ್ತಿದ್ದರು.  ಈ ವೇಳೆ  ಮುರುಳಿ 30 ಕೋಟಿ ವೆಚ್ಚದ ಕಾರ್ಯಕ್ರಮದಲ್ಲಿ ಭಾಗವಹಿಸಿರೋದು ಅಂದ್ರೆ ಸುಮ್ನೆನಾ ಅಂದ್ರು..... ಅದಕ್ಕೆ ಸುದೀಪ್ ಅಯ್ಯೋ ಅಂಗೆಲ್ಲ ಹೇಳ್ಬೇಡಿ, ಈಗಾಗಲೇ ಮನೆ ಹತ್ರ ಯಾರೋ ಬಂದಿದ್ರು, ಅಮೇಲೆ ಬಿಗ್‌ಬಾಸ್ ಮನೆಗೆ ಬಂದ್ಬಿಟ್ಟಾರು! ಎಂದು ಸುದೀಪ್ ಹೇಳಿದರು.

click me!