‘ಮೂತ್ರ ವಿಸರ್ಜನೆಗೂ ಬಿಡದ ಸೆಲೆಬ್ರಿಟಿ ಲೈಫು ಯಾರಿಗೂ ಬ್ಯಾಡ‘

Published : Nov 05, 2018, 08:27 PM IST
‘ಮೂತ್ರ ವಿಸರ್ಜನೆಗೂ ಬಿಡದ ಸೆಲೆಬ್ರಿಟಿ ಲೈಫು ಯಾರಿಗೂ ಬ್ಯಾಡ‘

ಸಾರಾಂಶ

ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ನವರಸ ನಾಯಕ ಜಗ್ಗೇಶ್ ಸುದೀಪ್ ರೊಂದಿಗೆ ಮಾತಿನ ಮಂಟಪವನ್ನೇ ಕಟ್ಟಿದರು. ತಮ್ಮ ಜೀವನದ ಘಟನೆಗಳನ್ನು ತಮ್ಮದೆ ಶೈಲಿಯಲ್ಲಿ ಹೇಳುತ್ತ ಬಂದ ಜಗ್ಗೇಶ್ ಸುದೀಪ್ ಅವರನ್ನು ಹಾಡಿ ಹೊಗಳಿದರು. ಸೆಲೆಬ್ರಿಟಿಗಳ ಜೀವನ ಎದುರಿಸುವ ಕಷ್ಟ ನಷ್ಟಗಳನ್ನು ಹಂಚಿಕೊಂಡರು.

ಬಿಗ್ ಬಾಸ್ ವೇದಿಕೆಯಲ್ಲಿ ನವರಸ ನಾಯಕ ಜಗ್ಗೇಶ್ ಸೆಲೆಬ್ರಿಟಿ ಜೀವನ ಯಾರಿಗೂ ಬೇಡ.. ಅಭಿಮಾನವಿದ್ದರೆ ಕೈ ಮಾಡಿ, ಹಾಯ್ ಮಾಡಿ ..ಕಣ್ಣು ಹೊಡೆಯಿರಿ ದಯವಿಟ್ಟು ಸೆಲ್ಫಿ ತೆಗೆದುಕೊಳ್ಳಲು ಮಾತ್ರ ಬರಬೇಡಿ ಎಂದರು.

ಕಲಾವಿದರನ್ನು ಕಂಡರೆ ಜನ ಮೆಚ್ಚಿ ಈ ಮೊಬೈಲ್ ಕಾಳದಲ್ಲಿ ಫೋಟೋ ತೆಗೆದುಕೊಳ್ಳಲು ಪ್ರತಿಯೊಬ್ಬರು ಬರುತ್ತಾರೆ. ಬಂದಿದ್ದು ಅಲ್ಲದೇ ಕ್ಯಾಮರಾ ಫೋಕಸ್ ಸರಿ ಮಾಡಿಕೊಳ್ಳುತ್ತಾರೆ. ದೊಡ್ಡ ಕಲಾವಿದನಿಗೆ ಪರ್ಸನಲ್ ಲೈಫೆ ಇಲ್ಲವಾಗಿದೆ.

ಮೊದಲು ಒಬ್ಬ ಸೆಲ್ಫಿ ತೆಗೆಯಲು ಬರುತ್ತಾನೆ. ಬೇಡ ಬೇಡ ಅಂದರೂ ಕೇಳಲ್ಲ. ಆಮೇಲೆ ಜನ ಗುಂಪು ಕಟ್ಟಿಕೊಳ್ಳುತ್ತಾರೆ. 5 ತಾಸು ಹಾಗೆ ನಿಂತುಕೊಳ್ಳಬೇಕಾದ ಅನಿವಾರ್ಯ ಎದುರಾಗುತ್ತದೆ. ಪೋಸ್ ಕೊಟ್ಟರೆ ಒಳ್ಳೆಯವ.. ಇಲ್ಲವಾದರೆ ಬೈಸಿಕೊಳ್ಳಬೇಕಾಗುತ್ತದೆ. ಸೆಲ್ಫಿ ಹೊಡತಕ್ಕೆ ಸಿಲುಕಿ ನಿಸರ್ಗದ ಕರೆಯನ್ನು ಪೂರೈಸಿಕೊಳ್ಳಬೇಕಾಗುತ್ತದೆ. ಎಂದು ತಮ್ಮ ಆತಂಕ-ನೋವು ತೊಡಿಕೊಂಡರು.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!
BBK 12 Video: ಸ್ನಾನ ಮಾಡದೇ ತೆಪ್ಪಗೆ ಕುಳಿತ ಸೂರಜ್; ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸಪಟ್ಟ ರಕ್ಷಿತಾ ಶೆಟ್ಟಿ!