ಸ್ಪರ್ಧಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಬಿಗ್‌ ಬಾಸ್‌, ವಿಚಿತ್ರ ಮ್ಯಾನರಿಸಂ ವ್ಯಕ್ತಿ ಹೊರಕ್ಕೆ

By Web DeskFirst Published Dec 1, 2018, 10:11 PM IST
Highlights

ಬಿಗ್ ಬಾಸ್ ಮನೆಯಿಂದ ಸಾಮಾನ್ಯ ಸ್ಪರ್ಧಿಯೊಬ್ಬರು ಹೊರನಡೆದಿದ್ದಾರೆ. ನವೀನ್, ರಾಕೇಶ್, ಕವಿತಾ, ಜಯಶ್ರೀ, ಆನಂದ್, ಸೋನು ನಾಮಿನೇಟ್ ಆಗಿದ್ದರು. ಕಳೆದ ವಾರ ಜಿಮ್‌ ರವಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದರು. ಈ ಬಾರಿ ಆನಂದ್ ಸರದಿ.

ಬಿಎಂಟಿಸಿ ಚಾಲಕರಾಗಿ ಮನೆ ಪ್ರವೇಶ ಪಡೆದಿದ್ದ ಆನಂದ್ ತಮ್ಮ ವಿಭಿನ್ನ ಮ್ಯಾನರಿಸಂನಿಂದ ಗುರುತಿಸಿಕೊಂಡಿದ್ದರು. ಮಸಿ ಬಳಿಯುವ ಟಾಸ್ಕ್ ನಲ್ಲಿ ದೊಡ್ಡ ನಾಮಿನೇಶನ್‌ನಿಂದ ಪಾರಾದ ಆ್ಯಂಡಿ ಮುಂದಿನ ವಾರಕ್ಕೆ ತಮ್ಮ ಆಟ ಕಾಯ್ದುಕೊಂಡರು.

ವಾರದ ಕತೆ ಕಿಚ್ಚನ ಜತೆಯಲ್ಲಿ ಈ ವಾರ ಮತ್ತು ಕಳೇದ ವಾರದ ಕೆಲವು ಘಟನಾವಳಿಗಳ ಚರ್ಚೆ ಮತ್ತು ಪರಾಮರ್ಶೆ ಆದವು.  ಗಂಡ ಹೆಂಡತಿ ಹೇಳಿಕೆ, ಆ್ಯಂಡಿ ಪಾಯಸಕ್ಕೆ ಮೆಣಸಿನ ಪುಡಿ ಹಾಕಿದ್ದು ಎಲ್ಲವನ್ನು ಸುದೀಪ್ ನಿಭಾಯಿಸಿದರು.

ಇಲ್ಲಿಗೆ ಬಿಗ್‌ ಬಾಸ್ ಮನೆ 41 ದಿನ ಮುಗಿಸಿದೆ. ಕನ್ನಡಿಗರನ್ನು ಅಂಬರೀಶ್ ಅಗಲಿದ ವಿಚಾರ ಮನೆ ಒಳಗಿನ ಮಂದಿಗೆ ಗೊತ್ತಿರಲಿಲ್ಲ. ಆದರೆ ಬಿಗ್ ಬಾಸ್ ಇಂದು ಆ ವಿಚಾರ ತಿಳಿಸಿದರು.  ಮನೆ ಮಂದಿಯೆಲ್ಲ ಭಾವುಕರಾದರು.

 

 

 

 

click me!