
ಮುಂಬೈ (ಆ. 06): ಸಂಜಯ್ ಲೀಲಾ ಬನ್ಸಾಲಿಯ ಬ್ಲಾಕ್ ಬಸ್ಟರ್ ಚಿತ್ರ ಪದ್ಮಾವತ್ ಚಿತ್ರ ಬಾಕ್ಸಾಫೀಸ್’ನಲ್ಲಿ ಕೊಳ್ಳೆ ಹೊಡೆದಿದೆ. ರಾಜಸ್ತಾನಿ ಸಂಪ್ರದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜಪೂತ ಕರ್ಣಿ ಸೇನೆ ಪ್ರತಿಭಟನೆಯನ್ನು ಮಾಡಿತ್ತು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಯ್ತು. ಇದರ ಮಧ್ಯೆ ಒಂದು ಕುತೂಹಲಕಾರಿ ವಿಚಾರ ಹೊರ ಬಿದ್ದಿದೆ.
ರಾಣಿ ಪದ್ಮಾವತಿ ಪಾತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ಮೊದಲು ಐಶ್ವರ್ಯಾ ರೈಯನ್ನು ಆಯ್ಕೆ ಮಾಡಿದ್ದರಂತೆ. ಇದನ್ನು ಸ್ವತಃ ಐಶ್ವರ್ಯಾ ರೈ ಖಚಿತಪಡಿಸಿದ್ದಾರೆ.
ಪದ್ಮಾವತಿ ಪಾತ್ರಕ್ಕಾಗಿ ನನ್ನನ್ನು ಅಪ್ರೋಚ್ ಮಾಡಿದ್ದರು. ಆದರೆ ನನಗೆ ಬಾಜಿರಾವ್ ಸಿಗಲಿಲ್ಲ. ಹಾಗಾಗಿ ನಾನು ಪದ್ಮಾವತಿಯಾಗಲು ಸಾಧ್ಯವಾಗಲಿಲ್ಲ ಎಂದು ಐಶ್ವರ್ಯಾ ರೈ ಹೇಳಿದ್ದಾರೆ.
ಮೂಲಗಳ ಪ್ರಕಾರ, ಬನ್ಸಾಲಿ, ಬಾಜಿರಾವ್ ಮಸ್ತಾನಿ ಚಿತ್ರವನ್ನು ಐಶ್ವರ್ಯಾ ರೈ ನತ್ತು ಸಲ್ಮಾನ್ ಖಾನ್ ಹಾಕಿಕೊಂಡು ಮಾಡಬೇಕೆಂದಿದ್ದರು. ಆದರೆ ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಕೊನೆಗೆ ರಣವೀರ್ ಮತ್ತು ದೀಪಿಕಾ ಮಾಡಬೇಕಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.