ಸಿನಿಮಾ ಬಿಡುಗಡೆ ಮುನ್ನವೆ ಬಾಹುಬಲಿಯನ್ನು ಕಟ್ಟಪ್ಪ ಕೊಂದ ರಹಸ್ಯ ಲೀಕ್ ಆಯ್ತು!

Published : Apr 24, 2017, 05:30 PM ISTUpdated : Apr 11, 2018, 12:50 PM IST
ಸಿನಿಮಾ ಬಿಡುಗಡೆ ಮುನ್ನವೆ ಬಾಹುಬಲಿಯನ್ನು ಕಟ್ಟಪ್ಪ ಕೊಂದ ರಹಸ್ಯ ಲೀಕ್ ಆಯ್ತು!

ಸಾರಾಂಶ

ಈ ವಾರ ಏ.28ರಂದು ಬಾಹುಬಲಿ -2 ಬಿಡುಗಡೆಯಾಗಲಿದೆ. ಚಿತ್ರ ನೋಡಿದ ಮೇಲೆ ಬಾಹುಬಲಿಯನ್ನು ಕೊಂದ ರಹಸ್ಯ ಗೊತ್ತಾಗಲಿದೆ ಎಂಬುವವರಿಗೆ ಸ್ವಲ್ಪ ಖುಷಿಯ ಸುದ್ದಿ. ಬಾಹುಬಲಿಯನ್ನು ಕೊಂದ ರಹಸ್ಯ ಈಗಾಗಲೆ ಹೈದರಾಬಾದ್'ನಾದ್ಯಂತ ಹರಿದಾಡುತ್ತಿದೆ.

ಹೈದರಾಬಾದ್(ಏ.24): ಬಾಹುಬಲಿ-1 ಚಿತ್ರ ಬಿಡುಗಡೆಯಾದಾಗಿನಿಂದ ಚಿತ್ರದ ಪ್ರಮುಖ ಪಾತ್ರಧಾರಿ ಹಾಗೂ ನಿಷ್ಠಾವಂತನಾದ ಕಟ್ಟಪ್ಪ ಏಕೆ ಬಾಹುಬಲಿಯನ್ನು ಕೊಂದ ಎಂಬ ಪ್ರಶ್ನೆ ಚಿತ್ರ ನೋಡಿದ ಎಲ್ಲರಿಗೂ ಕಾಡುತ್ತಲೆ ಇದೆ.

ಈ ವಾರ ಏ.28ರಂದು ಬಾಹುಬಲಿ -2 ಬಿಡುಗಡೆಯಾಗಲಿದೆ. ಚಿತ್ರ ನೋಡಿದ ಮೇಲೆ ಬಾಹುಬಲಿಯನ್ನು ಕೊಂದ ರಹಸ್ಯ ಗೊತ್ತಾಗಲಿದೆ ಎಂಬುವವರಿಗೆ ಸ್ವಲ್ಪ ಖುಷಿಯ ಸುದ್ದಿ. ಬಾಹುಬಲಿಯನ್ನು ಕೊಂದ ರಹಸ್ಯ ಈಗಾಗಲೆ ಹೈದರಾಬಾದ್'ನಾದ್ಯಂತ ಹರಿದಾಡುತ್ತಿದೆ.

ಜನರಾಡುವ ರಹಸ್ಯ ಸುದ್ದಿ ಈಗಿದೆ 'ಶಿವಗಾಮಿಯಿಂದಲೆ ಬಾಹುಬಲಿಯನ್ನು ಕಟ್ಟಪ್ಪ ಸಾಯಿಸಿದ್ದು.ಬಾಹುಬಲಿ ವಿರುದ್ಧವಾಗಿ ಶಿವಗಾಮಿಗೆ ಬಲ್ಲಾಳ ದೇವ ಹಾಗೂ ಆತನ ತಂದೆ ಬಿಜ್ಜಳ ದೇವ ಸುಳ್ಳು ಹೇಳುತ್ತಾರಂತೆ. ಅದನ್ನು ನಂಬಿದ ಶಿವಗಾಮಿ,ಬಾಹುಬಲಿಯನ್ನು ಸಾಯಿಸುವಂತೆ ಕಟ್ಟಪ್ಪನಿಗೆ ಆದೇಶಸುತ್ತಾರಂತೆ. ಇದುವೇ ಬಾಹುಬಲಿಯನ್ನು ಕಟ್ಟಪ್ಪ ಸಾಯಿಸಲು ಪ್ರಮುಖ ಕಾರಣ.

ಆದರೆ ಇದು ಎಷ್ಟರ ಮಟ್ಟಿಗೆ ನಿಜವೋ ಎಂಬುದನ್ನು ಏ.28ರಂದು ಸಿನಿಮಾ ಬಿಡುಗಡೆಯಾದಾಗಲೆ ಕಾಯಬೇಕು. ಏಕೆಂದರೆ ಸಿನಿಮಾ ಪ್ರಪಂಚದಲ್ಲಿ ಗಾಸಿಪ್ ಸುದ್ದಿಗಳಿಗೆ ಬರವಿಲ್ಲ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!