ಮೈನವಿರೇಳಿಸುವ ಬಾಹುಬಲಿ-2 ಟ್ರೇಲರ್; ಮೊದಲ ಭಾಗಕ್ಕಿಂತಲೂ ಉತ್ಕೃಷ್ಟವಾಗಿದೆ ದೃಶ್ಯವೈಭವ

Published : Mar 16, 2017, 07:45 AM ISTUpdated : Apr 11, 2018, 01:03 PM IST
ಮೈನವಿರೇಳಿಸುವ ಬಾಹುಬಲಿ-2 ಟ್ರೇಲರ್; ಮೊದಲ ಭಾಗಕ್ಕಿಂತಲೂ ಉತ್ಕೃಷ್ಟವಾಗಿದೆ ದೃಶ್ಯವೈಭವ

ಸಾರಾಂಶ

ಕಟ್ಟಪ್ಪ ಯಾಕೆ ಬಾಹುಬಲಿಯನ್ನ ಕೊಂದ ಎಂಬ ಪ್ರಶ್ನೆಗೆ ಟ್ರೇಲರ್'ನಲ್ಲಿ ಉತ್ತರದ ಸುಳಿವನ್ನೂ ಕೊಟ್ಟಿಲ್ಲ. ಮೊದಲ ಭಾಗದಿಂದ ಉಳಿದ ಕುತೂಹಲವನ್ನು ರಾಜಮೌಳಿ ಹಾಗೇ ಉಳಿಸಿಕೊಂಡು ಬಂದಿದ್ದಾರೆ.

ಹೈದರಾಬಾದ್(ಮಾ. 16): ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷೆಯ ಬಾಹುಬಲಿ-2 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್'ನಲ್ಲಿರುವ ದೃಶ್ಯಗಳನ್ನು ನೋಡಿದರೆ ಮೊದಲ ಭಾಗಕ್ಕಿಂತಲೂ ಇದು ದೊಡ್ಡ ನಿರೀಕ್ಷೆ ಹುಟ್ಟಿಸುವಂತಿದೆ. ಕ್ಷಣಕ್ಷಣವೂ ಮೈನವಿರೇಳಿಸುವ ದೃಶ್ಯಗಳ ಸಂಯೋಜನೆ ಈ ಟ್ರೇಲರ್'ನಲ್ಲಿದೆ. ಯೂಟ್ಯೂಬ್'ನಲ್ಲಿ ಅಪ್'ಲೋಡ್ ಆದ ಒಂದೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ದೃಶ್ಯದಲ್ಲಿ ವಿಎಫ್'ಎಕ್ಸ್ ಗ್ರಾಫಿಕ್ಸ್'ನ ಕೈಚಳಕ ಅದ್ಭುತವಾಗಿದೆ. ಪ್ರಭಾಸ್, ರಾಣಾ ದಗ್ಗುಬಾಟಿ ಎಂದಿನಂತೆ ತೀಕ್ಷ್ಣ ಅಭಿನಯ ನೀಡಿರುವಂತಿದೆ.

ಆದರೆ, ಕಟ್ಟಪ್ಪ ಯಾಕೆ ಬಾಹುಬಲಿಯನ್ನ ಕೊಂದ ಎಂಬ ಪ್ರಶ್ನೆಗೆ ಟ್ರೇಲರ್'ನಲ್ಲಿ ಉತ್ತರದ ಸುಳಿವನ್ನೂ ಕೊಟ್ಟಿಲ್ಲ. ಮೊದಲ ಭಾಗದಿಂದ ಉಳಿದ ಕುತೂಹಲವನ್ನು ರಾಜಮೌಳಿ ಹಾಗೇ ಉಳಿಸಿಕೊಂಡು ಬಂದಿದ್ದಾರೆ.

ಮುಂದಿನ ತಿಂಗಳು, ಏಪ್ರಿಲ್ 28ರಂದು ಬಾಹುಬಲಿ-2 ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರಭಾಸ್, ಅನುಷ್ಕಾ, ತಮನ್ನಾ, ರಾಣಾ ದಗ್ಗುಬಾಟಿ, ಸತ್ಯರಾಜ್, ರಮ್ಯಾ ಕೃಷ್ಣ ಮೊದಲಾದ ನಟರು ಅಭಿನಯಿಸಿರುವ ಈ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ರಾಶಿಕಾ ಶೆಟ್ಟಿಯನ್ನು ಮಗಳಾಗಿ ಪಡೆಯೋಕೆ ಎಷ್ಟು ಜನ್ಮದ ಪುಣ್ಯ ಮಾಡಿದ್ದೆವೋ; ಆ ಸೀಕ್ರೆಟ್‌ ಬಿಚ್ಚಿಟ್ಟ ತಾಯಿ
ಕೊಡಬಾರದ ಪರೀಕ್ಷೆ ಕೊಟ್ರೀ.. Bigg Boss; ಅಂದು ನಟ ರಮೇಶ್‌ ಅರವಿಂದ್‌ಗೆ ಬಂದ ಸ್ಥಿತಿ ಧನುಷ್‌ ಗೌಡಗೆ ಬಂತು,