
- ರುದ್ರಪ್ರಯಾಗ ನನ್ನ ಮುಂದಿನ ನಿರ್ದೇಶನದ ಚಿತ್ರ. ಕತೆ ಸಿದ್ಧವಾಗಿದೆ. ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಶೂಟಿಂಗ್ಗೆ ಹೊರಡುತ್ತೇನೆ.
- ಈ ಚಿತ್ರದಲ್ಲಿ ನಾನು ನಿರ್ದೇಶಕ ಮಾತ್ರ. ನಟನೆ ಮಾಡಲ್ಲ. ಬೇರೆ ಬೇರೆ ಸಾಕಷ್ಟುಮಂದಿ ಕಲಾವಿದರು ನಟಿಸುತ್ತಿದ್ದಾರೆ. ಎಲ್ಲರಿಗೂ ಕತೆ ಹೇಳಿ ಅವರು ಒಪ್ಪಿದ ಮೇಲೆಯೇ ಚಿತ್ರದ ತಾರಾಗಣ ಹೇಳುತ್ತೇನೆ.
- ಸಂಗಮ ಎನ್ನುವ ಅರ್ಥ ಬರುವ ಈ ಚಿತ್ರದ ಕತೆ ಬೆಳಗಾವಿ ಹಿನ್ನೆಲೆಯಲ್ಲಿ ಸಾಗುತ್ತದೆ. ರುದ್ರಪ್ರಯಾಗ ಮತ್ತು ಬೆಳಗಾವಿಗೆ ಹೇಗೆ ನಂಟು ಎಂಬುದನ್ನು ನೀವು ಸಿನಿಮಾ ನೋಡಿ ಹೇಳಬೇಕು.
- ಯಾರೋ ಒಬ್ಬರು ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಲ್ಲ. ಕಂಟೆಂಟ್ ಆಧರಿಸಿ ಸೆಟ್ಟೇರಲಿರುವ ಸಿನಿಮಾ. ಜಯಣ್ಣ ಕಂಬೈನ್ಸ್ನಲ್ಲಿ ನಮ್ಮ ಎಲ್ಲಾ ಸಿನಿಮಾಗಳು ಬಿಡುಗಡೆ ಆಗಿವೆ. ಎಲ್ಲವೂ ಗೆದ್ದಿವೆ. ಹೀಗಾಗಿ ಅವರೇ ನನ್ನ ಚಿತ್ರಕ್ಕೆ ನಿರ್ಮಾಪಕರಾಗಬೇಕು ಎಂಬುದು ನನ್ನ ಆಸೆ.
- ಸದ್ಯಕ್ಕೆ ಒಂದು ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ಆ ಬಗ್ಗೆ ಈಗಲೇ ವಿವರಣೆ ಹೇಳಲಾರೆ. ಇನ್ನೂ ‘ನಾಥೂರಾಮ್’ ಚಿತ್ರಕತೆ ಅಂತಿಮಗೊಂಡಿಲ್ಲ. ಟೆಸ್ಟ್ ಶೂಟ್ ಮಾತ್ರ ಮಾಡಲಾಗಿದೆ. ಅದು ಯಾವಾಗ ಸ್ಕಿ್ರಪ್ಟ್ ಪೂರ್ತಿ ಆಗುತ್ತದೋ ನೋಡಬೇಕು.
ರಿಷಬ್ ಶೆಟ್ರ ಮುಂದಿನ ಸಿನಿಮಾ ಟೈಟಲ್ಲೇ ಡಿಫರೆಂಟ್! ಏನಿದು ‘ರುದ್ರಪ್ರಯಾಗ’?
- ಬೆಲ್ ಬಾಟಂ ಚಿತ್ರಕ್ಕೆ 125 ದಿನಗಳ ಸಂಭ್ರಮ. ಮುಂದಿನ ವರ್ಷ ಬೆಲ್ ಬಾಟಂ-2 ಸಿನಿಮಾ ಸೆಟ್ಟೇರಬಹುದು. ಇದರ ಜತೆಗೆ ಸಮಥ್ರ್ ಕಡಕೋಳ ನಿರ್ದೇಶನದ ‘ಆ್ಯಂಟಗನಿ ಶೆಟ್ಟಿ’ ಇದೆ. ಕಥಾಸಂಗಮ ತೆರೆಗೆ ಬರಬೇಕಿದೆ. ಕರಣ್ ಅನಂತ್ ನಿರ್ದೇಶನದ ಸಿನಿಮಾ ಶುರುವಾಗಬೇಕಿದೆ.
- ಸದ್ಯಕ್ಕೆ ನಾನು ಬೇರೆಯವರ ನಿರ್ದೇಶನದ ಚಿತ್ರದಲ್ಲಿ ನಟನೆ ಹಾಗೂ ರುದ್ರಪ್ರಯಾಗ ಸಿನಿಮಾ ತಯಾರಿಗಳಲ್ಲಿ ಬ್ಯುಸಿ ಆಗಿದ್ದೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.