ಕಾಲೇಜು ಕುಮಾರನಿಗೆ ಸಂಯುಕ್ತಾ ಕುಮಾರಿ

By Suvarna Web DeskFirst Published Apr 18, 2017, 4:10 AM IST
Highlights

ಎಂ ಆರ್‌ ಬ್ಯಾನರ್‌'ನಲ್ಲಿ ನಿರ್ದೇಶಕ ಸಂತು ಹೊಸ ಚಿತ್ರ ನಿರ್ದೇಶಿಸುತ್ತಿರುವುದು ಗೊತ್ತು. ಆ ಚಿತ್ರಕ್ಕೆ ಕೆಂಡಸಂಪಿಗೆ ವಿಕ್ಕಿ ನಾಯಕ ಅಂತನೂ ಗೊತ್ತು. ಪದ್ಮನಾಬ್‌ ನಿರ್ಮಾಪಕ ಎಂಬುದೂ ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ ಚಿತ್ರಕ್ಕೆ ನಾಯಕಿ ಮತ್ತು ಚಿತ್ರದ ಹೆಸರು ಪಕ್ಕಾ ಆಗಿದೆ. ಇನ್ನೇನು ಚಿತ್ರೀಕರಣಕ್ಕೆ ತೆರಳುವ ಹಂತದಲ್ಲಿರುವ ಈ ಚಿತ್ರಕ್ಕೆ ಸಂಯುಕ್ತ ಹೆಗ್ಡೆ ನಾಯಕಿ, ‘ಕಾಲೇಜು ಕುಮಾರ' ಅನ್ನೋದು ಚಿತ್ರದ ಟೈಟಲ್ಲು. ‘ಕಿರಿಕ್‌ ಪಾರ್ಟಿ' ಚಿತ್ರದಲ್ಲಿ ಸಿಕ್ಕಾಪಟ್ಟೆಕಿರಿಕ್‌ ಮಾಡಿದ ಹುಡುಗಿ ಈಕೆ. ಈ ಚಿತ್ರದ ನಂತರ ಆಲ್ಬಂ ಮಾಡಿ ಸುದ್ದಿಯಾದವರು. ಜತೆಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಒಂದಿಷ್ಟುಸದ್ದು ಮಾಡುತ್ತಿದ್ದ ಸಂಯುಕ್ತ ಹೆಗ್ಡೆ ಈಗ ಸಂತು ನಿರ್ದೇಶನದ, ವಿಕ್ಕಿ ನಟನೆ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈ ನಡುವೆ ‘ವಾಸು' ಚಿತ್ರಕ್ಕೆ ಕೂಡ ನಾಯಕಿ ಆಗಿರುವ ಸಂಯುಕ್ತಾ ಸೋಲೋ ನಾಯಕಿ ಆಗಿ ಎರಡನೇ ಅವಕಾಶ ಸಿಕ್ಕಂತಾಗಿದೆ.

ಎಂ ಆರ್‌ ಬ್ಯಾನರ್‌'ನಲ್ಲಿ ನಿರ್ದೇಶಕ ಸಂತು ಹೊಸ ಚಿತ್ರ ನಿರ್ದೇಶಿಸುತ್ತಿರುವುದು ಗೊತ್ತು. ಆ ಚಿತ್ರಕ್ಕೆ ಕೆಂಡಸಂಪಿಗೆ ವಿಕ್ಕಿ ನಾಯಕ ಅಂತನೂ ಗೊತ್ತು. ಪದ್ಮನಾಬ್‌ ನಿರ್ಮಾಪಕ ಎಂಬುದೂ ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ ಚಿತ್ರಕ್ಕೆ ನಾಯಕಿ ಮತ್ತು ಚಿತ್ರದ ಹೆಸರು ಪಕ್ಕಾ ಆಗಿದೆ. ಇನ್ನೇನು ಚಿತ್ರೀಕರಣಕ್ಕೆ ತೆರಳುವ ಹಂತದಲ್ಲಿರುವ ಈ ಚಿತ್ರಕ್ಕೆ ಸಂಯುಕ್ತ ಹೆಗ್ಡೆ ನಾಯಕಿ, ‘ಕಾಲೇಜು ಕುಮಾರ' ಅನ್ನೋದು ಚಿತ್ರದ ಟೈಟಲ್ಲು. ‘ಕಿರಿಕ್‌ ಪಾರ್ಟಿ' ಚಿತ್ರದಲ್ಲಿ ಸಿಕ್ಕಾಪಟ್ಟೆಕಿರಿಕ್‌ ಮಾಡಿದ ಹುಡುಗಿ ಈಕೆ. ಈ ಚಿತ್ರದ ನಂತರ ಆಲ್ಬಂ ಮಾಡಿ ಸುದ್ದಿಯಾದವರು. ಜತೆಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಒಂದಿಷ್ಟುಸದ್ದು ಮಾಡುತ್ತಿದ್ದ ಸಂಯುಕ್ತ ಹೆಗ್ಡೆ ಈಗ ಸಂತು ನಿರ್ದೇಶನದ, ವಿಕ್ಕಿ ನಟನೆ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈ ನಡುವೆ ‘ವಾಸು' ಚಿತ್ರಕ್ಕೆ ಕೂಡ ನಾಯಕಿ ಆಗಿರುವ ಸಂಯುಕ್ತಾ ಸೋಲೋ ನಾಯಕಿ ಆಗಿ ಎರಡನೇ ಅವಕಾಶ ಸಿಕ್ಕಂತಾಗಿದೆ.

‘ಅಲೆಮಾರಿ', ‘ಡಾರ್ಲಿಂಗ್‌' ಹಾಗೂ ‘ಡವ್‌' ಎನ್ನುವ ಪಕ್ಕಾ ಮಾಸ್‌ ಟಿಪಿಕಲ್‌ ಹೆಸರಿನಲ್ಲಿ ಸಿನಿಮಾ ಮಾಡಿದ್ದ ಸಂತು ಈಗ ಕಾಲೇಜ್‌ ಕಾರಿಡಾರ್‌ಗೆ ಕೈ ಹಾಕಿದ್ದಾರೆ. ಹೀಗಾಗಿಯೇ ಚಿತ್ರಕ್ಕೆ ‘ಕಾಲೇಜು ಕುಮಾರ' ಎನ್ನುವ ಹೆಸರು. ಇನ್ನು ನಿರ್ದೇಶಕ ಸೂರಿ ಬಳಗದಲ್ಲಿ ಗುರುತಿಸಿಕೊಂಡು ‘ಕೆಂಡಸಂಪಿಗೆ' ಚಿತ್ರಕ್ಕೆ ಹೀರೋ ಆಗುವ ಮೂಲಕ ತೆರೆ ಮೇಲೆ ಎಂಟ್ರಿ ಕೊಟ್ಟವಿಕ್ಕಿಗೆ ಆ ನಂತರ ಅವಕಾಶಗಳೇ ಸಿಕ್ಕಿಲ್ಲ. ಈಗ ‘ಕಾಲೇಜು ಕುಮಾರ'ನ ಮೂಲಕ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಮುತ್ತಪ್ಪ ರೈ ಆಪ್ತರಾಗಿ ಗುರುತಿಸಿ ಕೊಂಡಿರುವ ಪದ್ಮನಾಬ್‌ ಈಗಾಗಲೇ ಗುರು ದೇಶಪಾಂಡೆ ನಿರ್ದೇಶನದಲ್ಲಿ ‘ಜಾನ್‌ ಜಾನಿ ಜನಾರ್ಧನ್‌' ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದವರು. ಈಗ ಸಂತು ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಹೀಗಾಗಿ ‘ಕಾಲೇಜು ಕುಮಾರ' ಎನ್ನುವ ಚಿತ್ರ ಎಲ್ಲರಿಗೂ ಮತ್ತೊಂದು ಇನ್ನಿಂಗ್ಸ್‌ ಸಿನಿಮಾ ಎನ್ನುವಂತಾಗಿದೆ. ಈಗ ಎಲ್ಲವೂ ಪಕ್ಕಾ ಆಗಿರುವ ಕಾರಣ ಸದ್ಯದಲ್ಲೇ ಸಂತು ಚಿತ್ರೀಕರಣಕ್ಕೆ ಹೊರಡುವ ಯೋಚನೆಯಲ್ಲಿದ್ದಾರೆ

ವರದಿ: ಕನ್ನಡಪ್ರಭ, ಸಿನಿವಾರ್ತೆ

click me!