2018: ಎವರಿವನ್‌ ಈಸ್‌ ಎ ಹೀರೋ : ಕೇರಳ ಪ್ರವಾಹದ ಕುರಿತು ಸಿನಿಮಾ ಆಸ್ಕರ್‌ಗೆ

Published : Sep 28, 2023, 10:07 AM ISTUpdated : Sep 28, 2023, 10:24 AM IST
2018: ಎವರಿವನ್‌ ಈಸ್‌ ಎ ಹೀರೋ : ಕೇರಳ ಪ್ರವಾಹದ ಕುರಿತು ಸಿನಿಮಾ ಆಸ್ಕರ್‌ಗೆ

ಸಾರಾಂಶ

2018ರಲ್ಲಿ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಕಥಾಹಂದರ ಹೊಂದಿರುವ ಮಲೆಯಾಳಂನ ‘2018: ಎವರಿವನ್‌ ಈಸ್‌ ಎ ಹೀರೋ’ (2018 everyone Is A Hero) ಚಿತ್ರ ಪ್ರಸಕ್ತ ಸಾಲಿನಲ್ಲಿ ಭಾರತದಿಂದ ಆಸ್ಕರ್‌ಗೆ ಅಧಿಕೃತ ಚಿತ್ರವಾಗಿ ಪ್ರವೇಶ ಪಡೆದಿದೆ

ಚೆನ್ನೈ: 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಕಥಾಹಂದರ ಹೊಂದಿರುವ ಮಲೆಯಾಳಂನ ‘2018: ಎವರಿವನ್‌ ಈಸ್‌ ಎ ಹೀರೋ’ (2018 everyone Is A Hero) ಚಿತ್ರ ಪ್ರಸಕ್ತ ಸಾಲಿನಲ್ಲಿ ಭಾರತದಿಂದ ಆಸ್ಕರ್‌ಗೆ ಅಧಿಕೃತ ಚಿತ್ರವಾಗಿ ಪ್ರವೇಶ ಪಡೆದಿದೆ. ಇದೇ ಚಿತ್ರಕ್ಕಾಗಿ ನಾಯಕ ನಟ ಟೋವಿನ್‌ ಥೋಮಸ್‌ (Tovin Thomas) ಅವರು ಆ್ಯಮ್‌ಸ್ಟರ್‌ಡಾಮ್‌ ಚಿತ್ರೋತ್ಸವಲ್ಲಿ (Amsterdam Film Festival) ಏಷ್ಯಾದ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾದ ಹೊತ್ತಿನಲ್ಲೇ ಈ ಸಿಹಿ ಸುದ್ದಿ ಹೊರಬಿದ್ದಿದೆ.

ಈ ಕುರಿತು ಬುಧವಾರ ಅಧಿಕೃತ ಘೋಷಣೆ ಮಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಗಿರೀಶ್‌ ಕಾಸರವಳ್ಳಿ (Girish Kasaravalli)  ‘ವ್ಯಾಕ್ಸಿನ್‌ ವಾರ್‌, ದಿ ಕೇರಳ ಸ್ಟೋರಿ, ಗದರ್‌ 2 (Gadar-2) ಸೇರಿದಂತೆ ಹಲವು ಚಿತ್ರಗಳನ್ನು ವೀಕ್ಷಿಸಿದ ಬಳಿಕ ಈ ಚಿತ್ರವನ್ನು ಆಯ್ಕೆ ಮಾಡಿದ್ದೇವೆ. ಇದು ಸಮಗ್ರ ಭಾರತೀಯ ಚಿತ್ರರಂಗದ ಆಯ್ಕೆಯಾಗಿದ್ದು, ಪ್ರಸ್ತುತ ಚಿತ್ರವು ಕೇವಲ ಚಿತ್ರಕಥೆಯಲ್ಲದೆ ತಾಂತ್ರಿಕತೆ ಇನ್ನೂ ಮುಂತಾದ ಅಂಶಗಳಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಚಿತ್ರವು ಭಾರತೀಯರ ನೈತಿಕತೆ, ಸನ್ನಿವೇಶ ಮತ್ತು ಜನರ ಅತ್ಯಂತ ನೈಜ ಚಿತ್ರಣ ನೀಡುತ್ತದೆ. ಜೊತೆಗೆ ಚಿತ್ರ ಕೇವಲ ಭಾರತವನ್ನು ಪ್ರತಿನಿಧಿಸುತ್ತಿಲ್ಲ. ಬದಲಾಗಿ ಇಡೀ ವಿಶ್ವವನ್ನು ಆವರಿಸಿಕೊಂಡಿರುವ ಜಾಗತಿಕ ಹವಮಾನ ಬದಲಾವಣೆಯ ಸಮಸ್ಯೆಗಳನ್ನು ಜಗತ್ತನ ಮುಂದಿಟ್ಟಿದೆ. ಹಾಗಾಗಿ ಜ್ಯೂಡ್‌ ಅಂಥೋಣಿ ಜೋಸೆಫ್‌ (Jude Anthony Joseph) ನಿರ್ದೇಶನದ ಈ ಚಲನಚಿತ್ರವನ್ನು ನಾವು ಸರ್ವಾನುಮತದಿಂದ ಆಯ್ಕೆ ಮಾಡಿದೆವು" ಎಂದು ಹೇಳಿದ್ದಾರೆ.

ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

ಈ ಚಿತ್ರ ಕೇರಳದಲ್ಲಿ 2018ರಲ್ಲಿ ಬಂದ ಪ್ರವಾಹದಿಂದ ಉಂಟಾದ ಸಂಕಷ್ಟವನ್ನು ಅತ್ಯಂತ ಎಳೆಎಳೆಯಾಗಿ ಮನಮುಟ್ಟುವ ನಿರೂಪಣಾ ಶೈಲಿಯಲ್ಲಿ ತೋರಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿತ್ತು.

ಅಯ್ಯೋ ನಮ್ದು ಇದೇ ಕತೆ... ನಂದಿನಿ ಹಾಡಿನ ನ್ಯೂವರ್ಷನ್‌ಗೆ ಹೌದಪ್ಪ ಹೌದು ಎಂದ ಗೃಹಿಣಿಯರು...!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ದೃಷ್ಟಿಬೊಟ್ಟು' ಮೂಲಕ ಕನ್ನಡಿಗರ ಮನಗೆದ್ದ ಅರ್ಪಿತಾ ಮೋಹಿತೆ ಈಗ ತೆಲುಗು ಸೀರಿಯಲ್ ನಾಯಕಿ
ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?