ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ತಪ್ಪು ಮಾಹೊತೊ ನೀಡಿದ್ದಾರೆ ಎನ್ನುವ ಆರೋಪಕ್ಕೆ ಇದೀಗ ಪ್ರಜ್ವಲ್ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ : ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಇದೇ ವೇಳೆ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ರೇವಣ್ಣ ಪುತ್ರ ಪ್ರಜ್ವಲ್ ನಾಮಪತ್ರದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.
ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ದಾಖಲೆಗಳನ್ನು ನೀಡಿದ್ದೇನೆ ಎನ್ನುವ ಆರೋಪ ಮಾಡುವವರು ನ್ಯಾಯಾಲಯದಲ್ಲಿ ಹೋರಾಡಲಿ ಎಂದಿದ್ದಾರೆ.
ಅಲ್ಲಿಯೇ ನಾನು ಉತ್ತರಿಸುತ್ತೇನೆ. ನನ್ನ ಆಸ್ತಿಯ ದಾಖಲೆಗಳು ಸರಿಯಾಗಿವೆ. ಯಾವುದೋ ವೆಬ್ಸೈಟ್ನಲ್ಲಿ ಹಾಕಿರುವ ತಪ್ಪುಗಳಿಗೆ ನಾನು ಜವಾಬ್ದಾರಿ ಅಲ್ಲ.